Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಮುನಿರತ್ನ(Muniratna) ನಿರ್ಮಾಣದ ಕುರುಕ್ಷೇತ್ರ(Kurukshetra) ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾದ ಸಂದರ್ಭದಲ್ಲಿ ಸಾಕಷ್ಟು ದೊಡ್ಡ ಮಟ್ಟದ ದಾಖಲೆಗಳನ್ನು ನಿರ್ಮಿಸಿತ್ತು. 3ಡಿಯಲ್ಲಿ ಮೂಡಿಬಂದಂತಹ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಪೌರಾಣಿಕ ಸಿನಿಮಾಗಳ ನಿರ್ಮಾಣದ ವಿಚಾರದಲ್ಲಿ ಹೊಸ ದಾರಿಯನ್ನೆ ಸೃಷ್ಟಿಸಿತ್ತು. ಈ ಸಿನಿಮಾ ಕನ್ನಡ ಹಾಗೂ ಪರ ಭಾಷೆಗಳ ದೊಡ್ಡಮಟ್ಟದ ತಾರಾ ಗಣವನ್ನೇ ಹೊಂದಿತ್ತು.
ಇನ್ನು ಈಗ ಕೇಳಿ ಬರುತ್ತಿರುವ ಆಶ್ಚರ್ಯಕರ ವಿಚಾರ ವೇದಿಕೆಂದರೆ ಮುನಿರತ್ನ ನಿರ್ಮಾಣದ ನಾಗಣ್ಣ ನಿರ್ದೇಶನದಲ್ಲಿ ಮೂಡಿಬಂದಂತಹ ಕುರುಕ್ಷೇತ್ರ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರ ಜೊತೆಗೆ ಕರುನಾಡ ಚಕ್ರವರ್ತಿ ಶಿವಣ್ಣ(Shivanna) ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಾಗಿತ್ತು. ಹಾಗಿದ್ದರೆ ಶಿವಣ್ಣ ಮಾಡಬೇಕಾಗಿದ್ದ ಪಾತ್ರ ಯಾವುದು ಹಾಗೂ ಯಾಕೆ ಅವರು ಮಾಡಲು ಸಾಧ್ಯವಾಗಲಿಲ್ಲ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.
ಅರ್ಜುನ್ ಸರ್ಜಾ ಅವರು ಮಾಡಿರುವಂತಹ ಕರ್ಣನ ಪಾತ್ರದಲ್ಲಿ ದರ್ಶನ್ ಅವರ ಜೊತೆಗೆ ನಟಿಸಲು ಶಿವಣ್ಣ ಕೂಡ ಒಪ್ಪಿಕೊಂಡಿದ್ದರಂತೆ. ಆದರೆ ಆ ಸಂದರ್ಭದಲ್ಲಿ ದರ್ಶನ್(Darshan) ಅವರ ದುರ್ಯೋಧನನ ಪಾತ್ರದ ಎದುರು ಶಿವಣ್ಣ ಅರ್ಜುನನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ ಎನ್ನುವ ವಿಚಾರಗಳು ಕೂಡ ಗಾಳಿ ಸುದ್ದಿಯ ರೂಪದಲ್ಲಿ ಹೊರಬಂದಿದ್ದವು. ಇಲ್ಲಿ ಕೂಡ ಸ್ವಲ್ಪಮಟ್ಟಿಗೆ ಗೊಂದಲ ನಿರ್ಮಾಣವಾಗಿತ್ತು. ಇದು ಕೂಡ ಶಿವಣ್ಣ ಚಿತ್ರತಂಡದಿಂದ ಹೊರಬರುವಂತೆ ಕಾರಣವಾಯಿತು ಎನ್ನಬಹುದಾಗಿದೆ.
ಇದಕ್ಕಿಂತ ಪ್ರಮುಖವಾಗಿ ಕುರುಕ್ಷೇತ್ರ ಸಿನಿಮಾದ ಚಿತ್ರೀಕರಣದ ವೇಳೆ ಶಿವಣ್ಣ(Shivanna) ಟಗರು ಹಾಗೂ ದಿ ವಿಲನ್ ಸಿನಿಮಾಗಳ ಛತ್ರಿಕರಣದಲ್ಲಿ ಕೂಡ ನಿರತರಾಗಿದ್ದರು ಹೀಗಾಗಿ ಕುರುಕ್ಷೇತ್ರ ಸಿನಿಮಾಗೆ ಸಂಪೂರ್ಣ ಸಮಯವನ್ನು ನೀಡಲು ಸಾಧ್ಯವಾಗಲಿಲ್ಲ. ಪ್ರಮುಖವಾಗಿ ಇದೇ ಕಾರಣಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೆ ಕುರುಕ್ಷೇತ್ರ ಸಿನಿಮಾದಲ್ಲಿ ಶಿವಣ್ಣ ಕಾರಣನ ಪಾತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ ಹೀಗಾಗಿ ಅವರ ಬದಲಿಗೆ ಅರ್ಜುನ್ ಸರ್ಜಾ(Arjun Sarja) ಅವರು ಈ ಪಾತ್ರವನ್ನು ಮಾಡಿ ಸೈ ಎನಿಸಿಕೊಳ್ಳುತ್ತಾರೆ.