Nandamuri Taraka Ratna: ಜೂನಿಯರ್ ಎನ್ಟಿಆರ್ ಗೆ ‌ಸಹೋದರ ವಿಯೋಗ. ಬಾರದ ಲೋಕದತ್ತ ನಂದಮುರಿ ತಾರಕ ರತ್ನ.

Nandamuri Taraka Ratna ಕನ್ನಡ ಪ್ರೇಕ್ಷಕರಿಗೆ ಅತ್ಯಂತ ಇಷ್ಟವಾಗಿರುವ ತೆಲುಗು ನಟ ಎಂದರೆ ಎಲ್ಲರೂ ಹೇಳುವಂತಹ ಒಂದೇ ಒಂದು ಉತ್ತರ ಎಂದರೆ ಅದು ಜೂನಿಯರ್ ಎನ್ಟಿಆರ್(Jr Ntr) ಅವರ ಹೆಸರು. ಆದರೆ ಕನ್ನಡಿಗರಲ್ಲ ಇಷ್ಟಪಡುವಂತಹ ಜೂನಿಯರ್ ಎನ್ಟಿಆರ್ ಅವರ ಜೀವನದಲ್ಲಿ ಒಂದು ದುಃಖಕರ ಘಟನೆ ಇಂದು ನಡೆದಿದೆ. ಹೌದು ಇಂದು ಜೂನಿಯರ್ ಎನ್ಟಿಆರ್ ಅವರು ತಮ್ಮ ಸಹೋದರನನ್ನು ಕಳೆದುಕೊಂಡಿದ್ದಾರೆ.

ಹೌದು ಮಿತ್ರರೇ, ಜೂನಿಯರ್ ಎನ್ಟಿಆರ್ ಅವರ ಸಹೋದರ ಆಗಿರುವಂತಹ ನಂದಮೂರಿ ತಾರಕ ರತ್ನ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಬಾರದ ಲೋಕದತ್ತ ತೆರಳಿ ನಮಗೆಲ್ಲ ವಿದಾಯ ಹೇಳಿರುವ ತಾರಕ ರತ್ನ( Nandamuri Taraka Ratna) ಅವರು ನಿಜಕ್ಕೂ ಕೂಡ ಅವರ ಬೆಂಬಲಿಗರು ಹಾಗೂ ಅಭಿಮಾನಿಗಳಲ್ಲಿ ದುಃಖದ ಕಾರ್ಮೋಡವನ್ನೇ ಸೃಷ್ಟಿಸಿದ್ದಾರೆ.

Nandamuri Taraka Ratna

ಇತ್ತೀಚಿಗಷ್ಟೇ ತಾರಕ ರತ್ನ ರವರು ತೆಲುಗು ದೇಶಂ ಪಾರ್ಟಿ(TDP) ಪರವಾಗಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಹೃದಯ ಸ್ತಂಭನವಾಗಿ ಕುಸಿದು ಬಿದ್ದಿದ್ದಾರೆ. ಕೂಡಲೆ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯ(Narayana Hrudayalaya) ಆಸ್ಪತ್ರೆಗೆ ಕರೆದುಕೊಂಡು ಬಂದು ನುರಿತ ತಜ್ಞರಿಂದ ಚಿಕಿತ್ಸೆ ನಡೆಸಲಾಗಿತ್ತು. 23 ದಿನಗಳಿಂದ ತಾರಕ ರತ್ನ ಅವರಿಗೆ ಚಿಕಿತ್ಸೆಯನ್ನು ನಡೆಸಲಾಗುತ್ತಿದ್ದು ಕೊನೆಗೂ ಅವರು ಚಿಕಿತ್ಸೆಗೆ ಪ್ರತಿಸ್ಪಂದಿಸದೆ ಉಸಿರನ್ನು ನಿಲ್ಲಿಸಿದ್ದಾರೆ.

ರಾಜಕೀಯ ಹಾಗೂ ಚಿತ್ರರಂಗದ ಗಣ್ಯರಿಂದ ಹಿಡಿದು ಪ್ರತಿಯೊಬ್ಬರು ಕೂಡ ಕಾರ್ಯಕರ್ತರ ಅವರ ಆಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು ಆದರೆ ಯಾವುದೇ ಪ್ರಾರ್ಥನೆ ಫಲಕಾರಿಯಾಗಿದೆ ತಾರಕ ರತ್ನ ಅವರು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ. ತಾರಕ ರತ್ನ(Taraka Ratna) ಅವರ ಅಗಲಿಕೆಯನ್ನುವುದು ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಕೂಡ ಶೂನ್ಯವನ್ನು ತಂದಿದೆ. ಹಗಲಿರುವ ಅವರ ಆತ್ಮಕ್ಕೆ ಪರಮಾತ್ಮ ಸದ್ಗತಿಯನ್ನು ನೀಡಲಿ ಎಂಬುದಾಗಿ ಹಾರೈಸೋಣ.

Leave a Comment

error: Content is protected !!