Kranti ತೆಲುಗಿನಲ್ಲಿ ಕ್ರಾಂತಿ ಕ್ರೇಜ್ ಹೇಗಿದೆ ಗೊತ್ತಾ? ತೆಲುಗು ನಟ ಡಿ ಬಾಸ್ ಬಗ್ಗೆ ಹೇಳಿದ್ದೇನು ನೋಡಿ!

Challenging Star Darshan ಡಿ ಬಾಸ್(Dboss) ಸಿನಿಮಾ ಎಂದ ಮೇಲೆ ಖಂಡಿತವಾಗಿ ಕಲೆಕ್ಷನ್ ಹಾಗೂ ಕ್ರೇಜ್ ವಿಚಾರದಲ್ಲಿ ಬೇರೆಲ್ಲ ನಟರ ಸಿನಿಮಾಗಳಿಗಿಂತ ಹೆಚ್ಚಾಗಿ ಸದ್ದು ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಕ್ರಾಂತಿ(Kranti) ಕೂಡ ಅದೇ ಸಾಲಿಗೆ ಸೇರುವಂತಹ ಸಿನಿಮಾ ಎನ್ನುವುದನ್ನು ಪ್ರತಿಯೊಬ್ಬರು ಒಪ್ಪಲೇ ಬೇಕಾಗಿರುವಂತಹ ವಿಚಾರ.

ಬಹು ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ನೂರಾರು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಕಂಡು ಇತ್ತೀಚಿಗಷ್ಟೇ ಚಿತ್ರತಂಡ ಅದ್ದೂರಿಯಾಗಿ ಚಿತ್ರದ ಯಶಸ್ಸನ್ನು ಕೂಡ ಜೊತೆಯಾಗಿ ಆಚರಿಸಿತ್ತು. ಪ್ರಮುಖವಾಗಿ ಚಿತ್ರ ಸಮಾಜವೇ ಒಪ್ಪುವಂತಹ ಹಾಗೂ ಸಮಾಜದಲ್ಲಿ ನಡೆಯುವಂತಹ ಹತ್ತು ಹಲವಾರು ಸಮಸ್ಯೆಗಳನ್ನು ಜನರ ಮುಂದೆ ಎತ್ತಿ ಹಿಡಿಯುವಂತಹ ಸಾಮಾಜಿಕ ಕಳಕಳಿ ಉಳ್ಳಂತಹ ಕೆಲಸವನ್ನು ಕ್ರಾಂತಿ(Kranti) ಸಿನಿಮಾ ಮಾಡಿದೆ.

ಇನ್ನು ಈ ಸಿನಿಮಾದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್(Rachita Ram) ಕ್ರೇಜಿಸ್ಟಾರ್ ರವಿಚಂದ್ರನ್(RaviChandran) ಸುಮಲತಾ ಅಂಬರೀಶ್ ಹಾಗೂ ಬಹುಭಾಷಾ ಕಾರ್ಯಗಳಾಗಿರುವ ರವಿಶಂಕರ್ ಸಂಪತ್ ರಾಜ್ ಕೂಡ ನಟಿಸಿದ್ದಾರೆ. ಅದರಲ್ಲೂ ಸಂಪತ್ ರಾಜ್ ಅವರು ತೆಲುಗಿನಿಂದ ಅವರಿಗೆ ಕ್ರಾಂತಿ(Kranti) ಸಿನಿಮಾದ ಬಗ್ಗೆ ಬಂದಂತಹ ಕರೆಗಳ ಕುರಿತಂತೆ ಬಿಚ್ಚಿಟ್ಟಿದ್ದಾರೆ.

ಹೌದು ಮಿತ್ರರೇ ಕ್ರಾಂತಿ ಸಿನಿಮಾ ವೀಕ್ಷಿಸಿದ ನಂತರ ತೆಲುಗು ಹಾಗು ತಮಿಳು ಚಿತ್ರರಂಗದ ಹಲವಾರು ಕಲಾವಿದರು ಸಂಪತ್ ರಾಜ್ ಅವರಿಗೆ ಕರೆ ಮಾಡಿ ಚಿತ್ರದ ಕುರಿತಂತೆ ಮೆಚ್ಚುಗೆಯನ್ನು ಸೂಚಿಸಿ ಶಹಬಾಸ್ ಗಿರಿಯನ್ನು ನೀಡಿದರಂತೆ. ಈ ಬಗ್ಗೆ ಸಂಪತ್ ರಾಜ್(Sampath Raj) ಅವರು ಕ್ರಾಂತಿ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿಯೇ(Kranti Success Meet) ದರ್ಶನ್ ಅವರ ಎದುರು ಹೇಳುತ್ತಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ. ಕ್ರಾಂತಿ ಸಿನಿಮಾದ ಬಗ್ಗೆ ನಿಮಗಿರುವಂತಹ ಅನಿಸಿಕೆಯನ್ನು ಕೂಡ ನಮ್ಮೊಂದಿಗೆ ಪ್ರಾಮಾಣಿಕವಾಗಿ ಹಂಚಿಕೊಳ್ಳುವ ಮೂಲಕ ಸಿನಿಮಾದ ಬಗ್ಗೆ ಜನರಿಗೆ ಇನ್ನಷ್ಟು ತಿಳಿಯಲು ಸಹಕರಿಸಿ.

Leave a Comment

error: Content is protected !!