Dboss ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದಾದ್ಯಂತ ಸದ್ದು ಮಾಡುತ್ತಿರುವ ಏಕೈಕ ಸಿನಿಮಾ ಎಂದರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ನಾಯಕ ನಟನಾಗಿ ನಟಿಸಿರುವ ಕ್ರಾಂತಿ ಸಿನಿಮಾ ಎನ್ನಬಹುದು. ಕ್ರಾಂತಿ(Kranti) ಸಿನಿಮಾದ ಮೂಲಕ ದರ್ಶನ್ ಅವರ ತೆಕ್ಕೆಗೆ ಮತ್ತೊಂದು 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಸಿನಿಮಾಗಳ ಪಟ್ಟಿಗೆ ಸೇರಿದೆ ಎಂದು ಹೇಳಬಹುದಾಗಿದೆ. ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಸೇರಿದಂತೆ ಚಿತ್ರತಂಡ ಕೂಡ ಸಂಭ್ರಮಾಚರಣೆಯನ್ನು ಮಾಡುತ್ತಿದೆ.
ಸಾಕಷ್ಟು ನೆಗೆಟಿವ್ ಪ್ರಚಾರಗಳು(Negative Publicity) ಕಂಡುಬಂದಿದ್ದರೂ ಕೂಡ ಕ್ರಾಂತಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಶತಕವನ್ನು ಬಾರಿಸಲು ಯಶಸ್ವಿಯಾಗಿದೆ. ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ 109 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಬಗ್ಗೆ ಸ್ವತಹ ದರ್ಶನ್(Darshan) ಹಾಗೂ ಚಿತ್ರತಂಡವೇ ಕೇಕ್ ಅನ್ನು ಹಂಚಿ ಸಂಭ್ರಮಾಚರಣೆಯನ್ನು ಮಾಡಿರುವ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ.
ಇನ್ನು ಸಕ್ಸಸ್ ಮೀಟ್ ನಲ್ಲಿ ಕ್ರಾಂತಿ(Kranti) ಚಿತ್ರ ತಂಡದ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ಕೂಡ ಇದ್ದರು. ಅದರಲ್ಲೂ ಪ್ರಮುಖವಾಗಿ ಈ ಪ್ರೆಸ್ ಮೀಟ್ ನಲ್ಲಿ ಹಿರಿಯ ಕಲಾವಿದ ಆಗಿರುವ ಮುಖ್ಯಮಂತ್ರಿ ಚಂದ್ರುರವರು(Mukhyamantri Chandru) ಇದ್ದರು ಹಾಗೂ ಅವರು ಆಡಿರುವ ಒಂದು ಮಾತು ಈಗ ಎಲ್ಲಾ ಕಡೆ ಪ್ರತಿಧ್ವನಿಸುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಅವರು ಹೇಳಿರುವ ಮಾತೇ ಈಗ ವೈರಲ್ ಆಗುತ್ತಿದ್ದು ಎಲ್ಲಾ ಕಡೆ ಓಡಾಡುತ್ತಿದೆ. ಅಷ್ಟಕ್ಕೂ ಅವರು ಹೇಳಿರುವುದಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ.
ದರ್ಶನ್(Darshan) ನಟನೆಯ ಕ್ರಾಂತಿ(Kranti) ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಕ್ರಾಂತಿ ಸಿನಿಮಾದ ಸಕ್ಸಸ್ ಮೀಟ್ ನಲ್ಲಿ ಚಿತ್ರರಂಗದವರು ಎಲ್ಲರೂ ಒಗ್ಗಟ್ಟಾಗಿ ಇರಬೇಕು. ನದಿಯಂತೆ ಬೇರೆ ಬೇರೆ ಆಗಿರುವುದಕ್ಕಿಂತ ಸರೋವರದಂತೆ ಒಂದಾಗಿರುವುದು ಉತ್ತಮ ಎಂಬುದಾಗಿ ದರ್ಶನ್ ಹಾಗೂ ಕಿಚ್ಚ(Kiccha Sudeep) ಒಂದಾಗಬೇಕು ಎನ್ನುವುದನ್ನು ಪರೋಕ್ಷವಾಗಿಯೇ ಮುಖ್ಯಮಂತ್ರಿ ಚಂದ್ರು ಅವರು ದರ್ಶನ್ ಅವರಿಗೆ ಹೇಳಿದ್ದು ದರ್ಶನ್ ಅವರು ಕೂಡ ಆಯ್ತು ಎನ್ನುವಂತೆ ತಲೆತಗ್ಗಿಸಿ ಸಮ್ಮತಿ ಸೂಚಿಸಿದ್ದು ಕಂಡುಬಂದಿತು.