Darshan Thoogudeepa: ದರ್ಶನ್ ಅವರ ಕೋಪದ ಬಗ್ಗೆ ವಿನೋದ್ ರಾಜ್ ಹೇಳಿದ್ದೇನು ಗೊತ್ತಾ?

Vinod Raj ದರ್ಶನ್ ಅವರ ಬಗ್ಗೆ ಅತ್ಯಂತ ಹತ್ತಿರದಿಂದ ತಿಳಿದವರಿಗೆ ತಿಳಿಯುತ್ತದೆ ಅವರು ಎಷ್ಟು ಕೋಪಿಷ್ಟರು ಅಷ್ಟೇ ಮನಸ್ಸಿನಿಂದ ಮಗುವಿನ ಸ್ವಭಾವದವರು ಎಂಬುದಾಗಿ. ಆದರೆ ಜನರಿಗೆ ಮಾಧ್ಯಮಗಳ ಮೂಲಕ ಅವರು ಕೋಪಿಷ್ಟರು ಎಂಬುದಾಗಿ ಎಲ್ಲಾ ಕಡೆ ಜನಜನಿತವಾಗಿದೆ. ಹೇಗಿದ್ದರೂ ಕೂಡ ದರ್ಶನ್(Darshan) ಅವರ ಸ್ವಭಾವ ಒಳ್ಳೇದು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ದರ್ಶನ್(Darshan) ಅವರ ಕುರಿತಂತೆ ಸಾಕಷ್ಟು ಜನರಲ್ಲಿ ಸಾಕಷ್ಟು ಅಭಿಪ್ರಾಯಗಳಿವೆ. ಆದರೆ ಅವರ ಪ್ರತಿಯೊಬ್ಬ ಅಭಿಮಾನಿಗಳು ಕೂಡ ದರ್ಶನ್ ಅವರನ್ನು ದೇವರ ರೀತಿಯಲ್ಲೆ ಕಾಣುತ್ತಾರೆ. ಇನ್ನು ಕನ್ನಡ ಚಿತ್ರರಂಗದ ಖ್ಯಾತ ನಟ ಆಗಿರುವಂತಹ ವಿನೋದ್ ರಾಜ್(Vinod Raj) ಅವರು ಕೂಡ ದರ್ಶನ್ ಅವರ ಕೋಪದ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ವಿನೋದ್ ರಾಜ್(Vinod Raj) ಕೂಡ ದರ್ಶನ್ ಅವರ ಹಾಗೆ ಕಲಾವಿದರ ಕುಟುಂಬದಿಂದ ಬಂದಿದ್ದರು ಕೂಡ ಚಿತ್ರರಂಗದಲ್ಲಿ ಸಾಕಷ್ಟು ಕಷ್ಟ ಪಡಬೇಕಾಗಿ ಬಂತು ಹಾಗೂ ಅವಕಾಶಕ್ಕಾಗಿ ಅವಮಾನ ಹಾಗೂ ತಿರಸ್ಕಾರಗಳನ್ನು ಸಹಿಸಿಕೊಳ್ಳಬೇಕಾಗಿ ಕೂಡ ಬಂದಿತ್ತು. ಆದರೆ ದರ್ಶನ್(Darshan) ರವರು ಇಂದು ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಹಾಗೂ ವಿನೋದ್ ರಾಜ್ ಅವರು ಚಿತ್ರರಂಗವನ್ನೇ ಬಿಟ್ಟು ಹೋಗಿದ್ದರು ಕೂಡ ಕೃಷಿ ಜೀವನದ ಮೂಲಕ ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ.

ದರ್ಶನ್ ಅವರ ಕೋಪದ ಬಗ್ಗೆ ಮಾತನಾಡುತ್ತ ವಿನೋದ್ ರಾಜ್ ಅವರು ಜೀವನದಲ್ಲಿ ನೊಂದವರಿಗೆ ಖಂಡಿತವಾಗಿ ಕೋಪ ಇದ್ದೇ ಇರುತ್ತದೆ ನನಗೂ ಕೂಡ ಕೋಪ ಇದೆ. ಹಾಗಂತ ಅವರ ಮನಸ್ಸು ಹಾಗೆ ಇದೆ ಎಂಬುದಾಗಿ ಅರ್ಥವಲ್ಲ ದರ್ಶನ್ ರವರ ಮನಸ್ಸು ಕೂಡ ಮಗುವಿನಂತದು ಆದರೆ ಕೆಲವೊಂದು ಸಂದರ್ಭಗಳು ಅವರನ್ನು ಹಾಗೆ ಮಾಡುವೆ ಅದನ್ನು ಬಿಟ್ಟರೆ ಅವರು ಕೂಡ ಚಿತ್ರರಂಗದಲ್ಲಿ ತಮ್ಮ ಕಷ್ಟದಿಂದ ಹಾಗೂ ಪರಿಶ್ರಮಗಳಿಂದಲೇ ಇಲ್ಲಿಯವರೆಗೆ ಬಂದವರು ಎಂಬುದಾಗಿ ದರ್ಶನ್ ಅವರ ಗುಣಗಾನವನ್ನು ಮಾಡಿದ್ದಾರೆ.

Leave a Comment

error: Content is protected !!