Vishnuvardhan: ಅಣ್ಣಾವ್ರೇ ತಿರಸ್ಕರಿಸಿದ್ದ ಫಿಲ್ಮ್ ಮಾಡಿ ಗೆದ್ದಿದ್ರು ನಮ್ಮ ಸಾಹಸಸಿಂಹ. ಆ ಸಿನಿಮಾ ಯಾವುದು ಇಲ್ಲಿದೆ ನೋಡಿ ಡೀಟೇಲ್ಸ್.

Rajkumar ಅಣ್ಣಾವ್ರು ಹಾಗೂ ವಿಷ್ಣುವರ್ಧನ್(Vishnuvardhan) ಇಬ್ಬರು ಕೂಡ ಕನ್ನಡ ಚಿತ್ರರಂಗದ ಎರಡು ಕಣ್ಣುಗಳಾಗಿ ಇದ್ದವರು. ಎಲ್ಲಕ್ಕಿಂತ ಪ್ರಮುಖವಾಗಿ ಇವರಿಬ್ಬರೂ ಕನ್ನಡ ಚಿತ್ರರಂಗವನ್ನು ಆ ಕಾಲದಲ್ಲಿ ಒಂದು ಹಂತ ಮೇಲಕ್ಕೆ ಕರೆದುಕೊಂಡು ಹೋದವರು ಎಂದರು ಕೂಡ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಇವರಿಬ್ಬರ ಕೊಡುಗೆ ಇದೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಹೌದು ಗೆಳೆಯರೇ ಆದರೆ ರಾಜಕುಮಾರ್(Rajkumar) ಅವರು ತಮ್ಮ ವೃತ್ತಿ ಜೀವನದಲ್ಲಿ ನಿರಾಕರಿಸಿದ್ದ ಒಂದು ಸಿನಿಮಾವನ್ನು ವಿಷ್ಣುವರ್ಧನ್(Vishnuvardhan) ರವರು ಮಾಡಿ ದೊಡ್ಡ ಮಟ್ಟದ ಗೆಲುವನ್ನು ಸಂಪಾದಿಸಿದರು ಎನ್ನುವ ವಿಚಾರದ ಕುರಿತಂತೆ ಸಾಕಷ್ಟು ಜನರಿಗೆ ತಿಳಿದಿಲ್ಲ ಎಂಬುದಾಗಿ ಭಾವಿಸುತ್ತೇವೆ. ಹಾಗಿದ್ದರೆ ಆ ಸಿನಿಮಾ ಯಾವುದು ಹಾಗೂ ಆ ಸಿನಿಮಾವನ್ನು ತಿರಸ್ಕರಿಸಲು ರಾಜಕುಮಾರ್ ಅವರಿಗೆ ಇದ್ದ ಕಾರಣಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ, ಭಾರ್ಗವ(Director Bhargav) ಅವರ ಬರಹದಲ್ಲಿ ಮೂಡಿ ಬಂದ ಮತ್ತೆ ಹಾಡಿತು ಕೋಗಿಲೆ ಸಿನಿಮಾವನ್ನು ಅವರು ರಾಜಕುಮಾರ್ ಅವರಿಗಾಗಿಯೇ ಸಿದ್ಧಪಡಿಸಿದ್ದರು ಆದರೆ ಕಥೆಯಲ್ಲಿ ಇದ್ದಂತಹ ಕೆಲವೊಂದು ವಿಚಾರಗಳ ಕುರಿತಂತೆ ಇಬ್ಬರಲ್ಲಿ ಕೂಡ ಭಿನ್ನಾಭಿಪ್ರಾಯಗಳು ಇದ್ದ ಕಾರಣದಿಂದಾಗಿ ರಾಜಕುಮಾರ್ ಅವರು ಈ ಸಿನಿಮಾವನ್ನು ಮಾಡುವುದಿಲ್ಲ ಎಂಬುದಾಗಿ ಹೇಳುತ್ತಾರೆ. ಈ ಸಂದರ್ಭದಲ್ಲಿ ನಾಯಕನಾಗಿ ಚಿತ್ರಕ್ಕೆ ವಿಷ್ಣುವರ್ಧನ್(Vishnuvardhan) ರವರು ಒಳಕ್ಕೆ ಬರುತ್ತಾರೆ.

ವಿಷ್ಣುವರ್ಧನ್ ರವರ ನಟನೆಯಲ್ಲಿ ಮತ್ತೆ ಹಾಡಿತು ಕೋಗಿಲೆ(Matte Hadithu Kogile) ಸಿನಿಮಾ ಯಾವ ಮಟ್ಟದಲ್ಲಿ ದೊಡ್ಡ ಸೂಪರ್ ಹಿಟ್ ಸಿನಿಮಾ ಆಗಿದೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಒಂದು ಲೆಕ್ಕದಲ್ಲಿ ಈ ಸೂಪರ್ ಹಿಟ್ ಸಿನಿಮಾದ ಅವಕಾಶವನ್ನು ಅಣ್ಣಾವ್ರು ಕಳೆದುಕೊಂಡರು ಎಂದರು ಕೂಡ ತಪ್ಪಾಗಲಾರದು. ಅದೇನೇ ಇರಲಿ ಇಂದಿಗೂ ಕನ್ನಡ ಚಿತ್ರರಂಗ ಎನ್ನುವುದು ಇವರಿಬ್ಬರು ಹಾಕಿಕೊಟ್ಟ ಹಾದಿಯಲ್ಲೇ ಸಾಗುತ್ತಿದೆ ಎನ್ನುವುದನ್ನು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು.

Leave a Comment

error: Content is protected !!