ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣ ನಂತರ ಕನ್ನಡ ಚಿತ್ರರಂಗದಲ್ಲಿ ಅವರ ಉತ್ತರಾಧಿಕಾರಿಯಾಗಿ ಯಾರು ಕಾಣಿಸಿಕೊಳ್ಳಬಲ್ಲರು ಎಂಬ ಪ್ರಶ್ನೆಗೆ ಯುವರಾಜ್ ಕುಮಾರ್ ಅವರ ರೂಪದಲ್ಲಿ ನಮಗೆ ಉತ್ತರ ಸಿಗುತ್ತದೆ ಎಂಬುದಾಗಿ ಹಲವರು ಅಪ್ಪು ಅಭಿಮಾನಿಗಳು ಹೇಳುತ್ತಾರೆ. ಇನ್ನು ನಟ ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾ ಯುವರಣದೀರ ಕಂಠೀರವ ಎನ್ನುವ ಐತಿಹಾಸಿಕ ಸಿನಿಮಾ ಆಗಬೇಕಾಗಿತ್ತು ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದ್ದು ಈಗಾಗಲೇ ಸಿನಿಮಾದ ಟೀಸರ್ ಕೂಡ ಬಿಡುಗಡೆಯಾಗಿದೆ.
ಕೆಜಿಎಫ್ ಚಾಪ್ಟರ್ ಒಂದು ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪುನೀತ್ ರುದ್ರನಾಗ ಈ ಯುವರಣಧೀರ ಕಂಠೀರವ ಸಿನಿಮಾ ವನ್ನು ನಿರ್ದೇಶನ ಮಾಡಿದರು. ಆದರೆ ಸಿನಿಮಾದ ಟೀಸರ್ ಬಿಡುಗಡೆ ಆಯಿತೇ ವಿನಃ ಸಿನಿಮಾ ಮಾತ್ರ ಇದುವರೆಗೂ ಬಿಡುಗಡೆ ಆಗಿಲ್ಲ.
Why yuva rajkumar first movie did nkt relesse yet?
ಈಗ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಯುವರಾಜಕುಮಾರ್ ಅವರ ನಟನೆಯ ಮೊದಲ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗಾಗಿ ಸಂತೋಷ್ ಆನಂದ್ ರಾಮ್ ಬರೆದಿಟ್ಟಿದ್ದ ಕಥೆಯನ್ನೇ ನಿರ್ದೇಶನ ಮಾಡಲಾಗುತ್ತಿದ್ದು ಅದೇ ಸಿನಿಮಾದ ಮೂಲಕವೇ ಅವರು ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಪರಿಚಯವಾಗುವುದು ನೂರಕ್ಕೆ ನೂರು ಪ್ರತಿಶತ ಪಕ್ಕ ಆಗಿದೆ. ಯಾಕೆ ರಣಧೀರ ಕಂಠೀರವ ಸಿನಿಮಾ ನಿಂತು ಹೋಯ್ತು ಎಂಬುದಕ್ಕೆ ಪುನೀತ್ ರುದ್ರನಾಗ ಅವರು ನೀಡುವ ಉತ್ತರವೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದಾಗಲೇ ಯುವರಣದೀರ ಕಂಠೀರವ ಸಿನಿಮಾಗೆ ಸಮಸ್ಯೆ ಪ್ರಾರಂಭವಾಗಿತ್ತು ಎಂಬುದಾಗಿ ಹೇಳುತ್ತಾರೆ. ಅದರಲ್ಲೂ ವಿಶೇಷವಾಗಿ ಹಣದ ಸಮಸ್ಯೆ ಆರಂಭದಲ್ಲಿ ದೊಡ್ಡ ಮಟ್ಟದಲ್ಲಿ ಕಾಡಿತ್ತು ಆ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಯುವರಾಜ್ ಕುಮಾರ್ ಇಬ್ಬರೂ ಕೂಡ ಪುನೀತ್ ಅವರ ಹಿಂದೆ ನಿಂತಿದ್ದರು. ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣದ ಜೊತೆಗೆ ಸಿನಿಮಾವನ್ನು ಉಳಿಸಿಕೊಳ್ಳುವ ಎಲ್ಲಾ ಭರವಸೆಗಳು ಸಂಪೂರ್ಣವಾಗಿ ನಶಿಸಿ ಹೋಯಿತು.. ಪುನೀತ್ ರಾಜಕುಮಾರ್ ಅವರು ಇದ್ದಾಗ ನಿಂತಿದ್ದ ಜನ ನಂತರ ಬರಲಿಲ್ಲ..
ಪುನೀತ್ ರಾಜಕುಮಾರ್ ಅವರ ಬೆಂಬಲ ಇದ್ದಾಗ ಪ್ರತಿಯೊಬ್ಬರು ಈ ಸಿನಿಮಾಗೆ ಹಣಕಾಸಿನ ಬೆಂಬಲ ನೀಡಿದರು ಆದರೆ ಪುನೀತ್ ರಾಜಕುಮಾರ್ ಅವರು ತೀರಿಕೊಂಡ ಮೇಲೆ ಎಲ್ಲರೂ ಕೈ ಕೊಟ್ಟರು ಎಂದು ನಿರ್ದೇಶಕ ಪುನೀತ್ ಹೇಳುತ್ತಾರೆ. ಹೀಗಾಗಿ ಈ ಸಿನಿಮಾ ಸಂಪೂರ್ಣವಾಗಿ ಸ್ತಬ್ಧ ಗೊಂಡಿದೆ ಎಂದು ಹೇಳಬಹುದಾಗಿದೆ.ಮುಂದಿನ ದಿನಗಳಲ್ಲಾದರೂ ಈ ಸಿನಿಮಾ ಬಿಡುಗಡೆ ಆಗುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ. ರಣಧೀರ ಕಂಠೀರವ ಚಿತ್ರ ಕ್ಕೆ ಸಮಸ್ಯೆ ಆದ ನಂತರ ಯುವ ರಾಜ್ ಕುಮಾರ್ ಅವರಿಗೆ ಸಂತೋಷ ಆನಂದನ ರಾಮ್ ಅವರೇ ಹೊಸ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದೀಗ ಸಂತೋಷ ಆನಂದರಾಮ ನಿರ್ದೇಶಿಸಿರುವ ಚಿತ್ರವೇ ಯುವರಾಜ್ ಕುಮಾರ್ ಅವರ ಮೊದಲ ಚಿತ್ರವಾಗಲಿದೆ..