ಕಂಡಲ್ಲಿ ಕೈ ಕೈ ಹಿಡಿದುಕೊಂಡು ಸುತ್ತಾಡಿದ್ದ ದ್ವಿತೀಯ ಪಿಯುಸಿ ಪ್ರೇಮಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಮೇಲೆ ನಡೆಯಿತು ಘನ ಘೋರ ಘಟನೆ

ಸಾಕಷ್ಟು ಬೇಡದ ಕೃತ್ಯಗಳಿಗೆ ಹೆಸರುವಾಸಿ ಆಗಿರುವ ವಿಜಯಪುರ ಜಿಲ್ಲೆಯಲ್ಲಿ ನಡೆದಿರುವ ಒಂದು ಘಟನೆ ಕುರಿತಂತೆ ಇಂದು ನಾವು ಹೇಳಲು ಹೊರಟಿದ್ದೇವೆ. ಮಲ್ಲಿಕಾರ್ಜುನ ಎನ್ನುವ 19 ವರ್ಷದ ಹುಡುಗ ದ್ವಿತೀಯ ಪಿಯುಸಿ ಓದುತ್ತಿದ್ದ ಗಾಯತ್ರಿ ಎನ್ನುವ ಹುಡುಗಿಯ ಜೊತೆಗೆ ಪ್ರೀತಿ ಮಾಡುತ್ತಿದ್ದ. ಎಲ್ಲಿಂದರಲ್ಲಿ ಇವರಿಬ್ಬರೂ ಸುತ್ತಾಟ ನಡೆಸುತ್ತಿದ್ದರು ಇದನ್ನು ತಿಳಿದ ಎರಡು ಮನೆಯ ಪೋಷಕರು ರಾಜಿ ಪಂಚಾಯಿತಿ ನಡೆಸಿ ಇಬ್ಬರನ್ನು ಕೂಡ ದೂರ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಇನ್ನು ಇದೇ ಸೆಪ್ಟೆಂಬರ್ 15ರಂದು ಬೈಕಿನಿಂದ ಮಲ್ಲಿಕಾರ್ಜುನ ಮನೆಯಿಂದ ಹೊರಹೋದವನು ಮತ್ತೆ ಬರಲಿಲ್ಲ ಆ ಕಡೆ ಗಾಯತ್ರಿ ಕೂಡ ಮನೆಯಿಂದ ಕಾಣೆಯಾಗಿದ್ದಳು.

ಗಂಡಿನ ಮನೆಯವರು ಹುಡುಗ ಕಾಣೆಯಾಗಿದ್ದಾನೆ ಎಂಬುದಾಗಿ ದೂರನ್ನು ದಾಖಲಿಸಿದರೆ ಹೆಣ್ಣಿನ ಕಡೆಯವರು ಮಗಳನ್ನು ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾನೆ ಎನ್ನುವುದಾಗಿ ದೂರನ್ನು ದಾಖಲಿಸಿದ್ದರು. ಇದರ ನಡುವೆ ಸೇನೆಗೆ ಸೇರಬೇಕು ಎನ್ನುವುದಾಗಿ ಮಲ್ಲಿಕಾರ್ಜುನ ತರಬೇತಿಯನ್ನು ಕೂಡ ನಡೆಸುತ್ತಿದ್ದ. ಇಬ್ಬರು ಎಲ್ಲಿ ಹೋದರು ಎಂಬುದು ಯಾರಿಗೂ ಕೂಡ ತಿಳಿಯದಾಯಿತು. ಕೃಷ್ಣಾ ನದಿಯಲ್ಲಿ ಮೂಟೆಯೊಂದರಲ್ಲಿ ಸಿಕ್ಕ ದೇಹದ ಮೇಲಿನ ಬಟ್ಟೆಯನ್ನು ನೋಡಿ ಅದು ಸೈನಿಕ ಶಾಲೆಯ ಬಟ್ಟೆ ಎಂಬುದಾಗಿ ತಿಳಿದು ಕೂಡಲೆ ಸೈನಿಕ ತರಬೇತಿ ಶಾಲೆಗೆ ಕಾಂಟಾಕ್ಟ್ ಮಾಡಿದಾಗ ಇದು ಮಲ್ಲಿಕಾರ್ಜುನ ಎಂಬುದಾಗಿ ತಿಳಿದು ಬರುತ್ತದೆ.

ಪೋಷಕರಿಗೆ ಈ ವಿಚಾರ ತಿಳಿದಾಗ ಇದನ್ನು ಖಂಡಿತವಾಗಿ ಆ ಹುಡುಗಿಯ ಮನೆಯವರ ಮಾಡಿರುತ್ತಾರೆ ಯಾಕೆಂದರೆ ನಾವು ಬೇರೆ ಜಾತಿಯವರು ಹಾಗೂ ಅವರಿಗಿಂತ ಬಡವರು ಎನ್ನುವ ಕಾರಣಕ್ಕಾಗಿ ಇಬ್ಬರ ಪ್ರೀತಿಯನ್ನು ಕೂಡ ಅವರು ಒಪ್ಪಿರಲಿಲ್ಲ. ಹೀಗಾಗಿ ನಮ್ಮ ಮಗನನ್ನು ಮುಗಿಸಿದ್ದಾರೆ ಎಂಬುದಾಗಿ ಅವರು ಆರೋಪವನ್ನು ಮಾಡುತ್ತಾರೆ. ಪೊಲೀಸರು ತಮ್ಮ ಪೊಲೀಸ್ ವಿಧಾನದಲ್ಲಿ ಆ ಹುಡುಗಿಯ ತಂದೆಯನ್ನು ಬಾಯಿ ಬಿಡಿಸಿದಾಗ ನಿಜವಾದ ವಿಚಾರವನ್ನು ಆತ ಹೊರ ಹಾಕುತ್ತಾನೆ.

ಆ ದಿನ ರಾತ್ರಿ ತನ್ನ ಮಗಳ ಜೊತೆಗೆ ಆ ಹುಡುಗ ಶೆಡ್ ನಲ್ಲಿ ಕಾಣಿಸಿಕೊಂಡಿದ್ದ. ಇದನ್ನು ನೋಡಿದ ನಂತರ ನಾನು ಶೆಡ್ಡಿನ ಬಾಗಿಲು ಹಾಕಿ ಬಂದು ನನ್ನ ಅಳಿಯನಿಗೆ ಈ ವಿಚಾರವನ್ನು ತಿಳಿಸಿದೆ. ಇಬ್ಬರೂ ಕೂಡ ಮತ್ತೊಮ್ಮೆ ರಾಜಪಂಚಾಯಿತಿ ಮಾಡಿಸೋಣ ಎಂಬುದಾಗಿ ಶೆಡ್ಡಿನ ಒಳಕ್ಕೆ ಹೋದಾಗ ಅದಾಗಲೇ ನಮ್ಮ ಮಗಳು ಕೀಟನಾಶಕವನ್ನು ಸೇವಿಸಿ ತನ್ನ ಜೀವವನ್ನೇ ತೆಗೆದುಕೊಂಡಿದ್ದಳು. ಆಸ್ಪತ್ರೆಗೆ ಕರೆದುಕೊಂಡು ಹೋದರು ಕೂಡ ಏನು ಪ್ರಯೋಜನ ಆಗಲಿಲ್ಲ ನಮ್ಮ ಮಗಳು ಪ್ರಾಣವನ್ನು ಕಳೆದುಕೊಂಡಿದ್ದಳು. ಅದಕ್ಕಾಗಿ ಆ ಹುಡುಗನನ್ನು ಕೂಡ ಇದಕ್ಕೆ ಆತನೇ ಕಾರಣ ಎಂಬುದಾಗಿ ಭಾವಿಸಿ ಕಂಬಕ್ಕೆ ಕಟ್ಟಿ ಕ್ರಿಮಿನಾಶಕವನ್ನು ಆತನಿಗೆ ಕೂಡ ಕುಡಿಸಿ ಆತನನ್ನು ಮುಗಿಸಿದ್ದೇವೆ ಎಂಬುದಾಗಿ ಸತ್ಯವನ್ನು ಬಾಯಿಬಿಟ್ಟಿದ್ದಾರೆ. ಒಟ್ಟಾರೆಯಾಗಿ ಮರ್ಯಾದೆಗಾಗಿ ಎರಡು ಮುಗ್ಧಜೀವಗಳು ಚಿಗುರುವ ಮುನ್ನವೇ ಈ ಲೋಕವನ್ನು ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

Leave a Comment

error: Content is protected !!