ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಹ ತ್ಯೆಗೆ ರೋಚಕ ಟ್ವಿಸ್ಟ್. ಗುರೂಜಿಯ ವಾಟ್ಸಪ್ ನಲ್ಲಿ ಅಣ್ಣನ ಮಕ್ಕಳ ಅಸಲಿ ಮುಖ ಬಯಲಾಯ್ತು

ಮಿತ್ರರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೆಲವು ತಿಂಗಳುಗಳ ಹಿಂದಷ್ಟೇ ಟಿವಿ ಮಾಧ್ಯಮಗಳಲ್ಲಿ ಹಾಗೂ ವಾಸ್ತು ಶಾಸ್ತ್ರ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ಚಂದ್ರಶೇಖರ್ ಗುರೂಜಿ ಅವರನ್ನು ಕಿಡಿಗೇಡಿಗಳು ಅವರಿದ್ದ ಹೋಟೆಲ್ ಗೆ ನುಗ್ಗಿ ಅವರನ್ನು ಮುಗಿಸಿದ್ದರು. ಈ ಹಠಾತ್ ಘಟನೆ ಎನ್ನುವುದು ಸಾಕಷ್ಟು ಜನರಲ್ಲಿ ಆಶ್ಚರ್ಯ ಹಾಗೂ ದುಃಖ ದುಗುಡ ದುಮ್ಮಾನಗಳು ಮೂಡುವಂತೆ ಮಾಡಿದ್ದವು. ರಾಜ್ಯದ ಜನತೆಯಲ್ಲಿ ಕೂಡ ಸಾಕಷ್ಟು ಗೊಂದಲಗಳು ಈ ಪ್ರಕರಣದ ಕುರಿತಂತೆ ಮೂಡುವಂತೆ ಮಾಡಿದ್ದವು.

ಇನ್ನು ಗುರೂಜಿಯವರ ವಾಟ್ಸಪ್ ಗ್ರೂಪ್ ನೋಡಿದಾಗ ನಿಜಕ್ಕೂ ಕೂಡ ಇವರ ಜೀವನದಲ್ಲಿ ವಿಲನ್ ಆಗಿದ್ದು ಅವರ ಅಣ್ಣನ ಮಕ್ಕಳು ಎಂಬುದಾಗಿ ತಿಳಿದುಬರುತ್ತಿದೆ. ಇವರ ಬಗ್ಗೆ ದಿನಕ್ಕೊಂದು ಟ್ವಿಸ್ಟ್ ಈಗ ಪ್ರಕರಣದ ದಿಕ್ಕನ್ನು ಬದಲಾಯಿಸುತ್ತಿದೆ. ಇವರ ವಾಸ್ತು ಶಾಸ್ತ್ರದ ಸಂಸ್ಥೆಗೆ ಅಣ್ಣನ ಮಕ್ಕಳು ಎಂಟ್ರಿ ನೀಡಿದಾಗಲಿಂದಲೂ ಕೂಡ ಸಂಸ್ಥೆಗೆ ಸಾಕಷ್ಟು ತಾಪತ್ರೆ ಆಗುತ್ತಿದೆ ಎಂಬುದಾಗಿ ಆರೋಪಿಯಾಗಿರುವ ಮಂಜುನಾಥ್ ಸ್ವತಹ ಹೇಳಿದ್ದರಂತೆ.

ಮಂಜುನಾಥ್ 2019ರಲ್ಲಿ ಗುರೂಜಿಗೆ ಮಾಡಿರುವ ಮೆಸೇಜ್ ಈಗ ಲಭ್ಯವಾಗಿದ್ದು ಅದರಲ್ಲಿ ನೀವು ನಮಗೆ ಎರಡನೇ ತಂದೆ ಆಗಿದ್ದೀರಿ. ನಿಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನಮಗೆಲ್ಲ ನೀವೇ ಆಗಿದ್ದೀರಿ ನಮ್ಮ ಜೀವನವನ್ನು ಕೂಡ ನೀವೇ ರೂಪಿಸಿದ್ದೀರಿ. ಆದರೆ ಯಾವಾಗ ಕಂಪನಿಗೆ ನಿಮ್ಮ ಅಣ್ಣನ ಮಕ್ಕಳು ಬಂದ್ರೋ ಆಗಿನಿಂದ ನಮ್ಮ ನಿಮ್ಮ ನಡುವೆ ಅವರೇ ದೊಡ್ಡ ಮಟ್ಟದ ಗೋಡೆಯಾಗಿದ್ದಾರೆ. ವಿನಾಕಾರಣ 400 ಜನ ಉದ್ಯೋಗಿಗಳನ್ನು ನೀವು ಕಂಪನಿಯಿಂದ ಬಿಡಿಸಿದ್ದೀರಿ. ನಮ್ಮ ಕಣ್ಣೀರಿಗೆ ನೀವು ಕಾರಣರಾಗಿದ್ದೀರಿ ಆದರೂ ಕೂಡ ನಾವು ನಿಮಗೆ ಒಳ್ಳೆಯದನ್ನೇ ಬಯಸುತ್ತೇವೆ ಎಂಬುದಾಗಿ ಗುರೂಜಿಗೆ ಮೆಸೇಜ್ ಮಾಡಿದ್ದರು.

ಕೇವಲ ಇಷ್ಟು ಮಾತ್ರವಲ್ಲದೆ ಸಿಬ್ಬಂದಿಗಳಿಂದ ಚಂದ್ರಶೇಖರ್ ಗುರೂಜಿ ಅವರ ವಾಟ್ಸಾಪ್ ಗೆ ಹಲವಾರು ಮೆಸೇಜ್ಗಳು ಹೋಗಿವೆ ಆದರೆ ಇದರ ಕುರಿತಂತೆ ಚಂದ್ರಶೇಖರ್ ಗುರೂಜಿ ಯಾವುದೇ ತಲೆಕೆಡಿಸಿಕೊಳ್ಳಲಿಲ್ಲ ಎಂಬುದಾಗಿ ತಿಳಿದು ಬಂದಿದೆ. ಒಟ್ಟಾರೆಯಾಗಿ ತಂದೆ ಮಕ್ಕಳಂತೆ ಇದ್ದ ಗುರೂಜಿ ಹಾಗೂ ಸಿಬ್ಬಂದಿಯ ನಡುವೆ ಅಣ್ಣನ ಮಕ್ಕಳ ಎಂಟರಿಂದಾಗಿ ಎಲ್ಲವೂ ಹಾಳಾಯಿತು ಎಂಬುದಾಗಿ ಪ್ರಕರಣದ ಹೊಸ ತನಿಖೆಯಲ್ಲಿ ಈಗ ತಿಳಿದು ಬಂದಿದೆ.

Leave a Comment

error: Content is protected !!