ನಟ ಚಂದನ್ ಹಾಗೂ ಕವಿತಾ ಗೌಡ ದಂಪತಿಗಳು ನಟನೆಯನ್ನು ಬಿಟ್ಟು ಹೊಸದೊಂದು ಉದ್ಯಮವನ್ನು ಪ್ರಾರಂಭಿಸಿದ್ದಾರೆ! ಹೊಸ ಪ್ರಯತ್ನವೇನೆಂದು ಗೊತ್ತಾ? ನೀವು ಕೂಡ ಈ ದಂಪತಿಗಳನ್ನು ಯಾವಾಗ ಬೇಕಾದರೂ ಸುಲಭವಾಗಿ ಭೇಟಿಯಾಗಬಹುದು..!

ನಟ ಚಂದನ್ ಹಾಗೂ ಕವಿತಾ ಗೌಡ ಇಬ್ಬರು ಕಿರುತೆರೆಯಲ್ಲಿ ಕಾಣಿಸಿಕೊಂಡು ಜನಪ್ರಿಯವಾಗಿ, ಅಭಿಮಾನಿಗಳನ್ನು ಗಳಿಸಿ, ನಂತರ ಸಿನಿಮಾಗಳಲ್ಲಿ ಅಭಿನಯಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಅಭಿಮಾನಿಗಳು ಈ ಜೋಡಿಯನ್ನು ಕಲರ್ಸ್ ಕನ್ನಡ ವಾಹಿನಿಯ ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿಯೇ ಮೆಚ್ಚಿದ್ದಾಗಿದೆ. ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ಕವಿತಾ ಗೌಡ ಅವರು ಚಿನ್ನು ಆಗಿ ಅಭಿನಯಿಸಿ, ಸೀರೆಯುಟ್ಟ ಮುಗ್ಧ ಹೆಣ್ಣು ಮಗಳಾಗಿ ಮನೆ ಮಂದಿಯ ಮನವನ್ನು ಕದ್ದಿದ್ದರು.

ಲಕ್ಷ್ಮೀ ಬಾರಮ್ಮ ಧಾರವಾಹಿಯಿಂದಲೆ ಚಂದನ್ ಹಾಗೂ ಕವಿತಾ ಗೌಡ ಅವರ ಮಧ್ಯೆ ಸ್ನೇಹ ಬೆಳೆಯಿತು. ನಂತರದ ದಿನಗಳಲ್ಲಿ ಸ್ನೇಹವೂ ಪ್ರೀತಿಯಾಗಿ ತಿರುಗಿ ವಿವಾಹವಾಗಲು ನಿರ್ಧರಿಸಿದರು. ಅಂತಯೇ ಕರೋನ ಸಂದರ್ಭದಲ್ಲಿ ಸ್ನೇಹಿತರ, ಕುಟುಂಬದವರ ಸಮ್ಮುಖದಲ್ಲಿ ನವ ಜೀವನಕ್ಕೆ ಕಾಲಿಟ್ಟರು.

ಕವಿತಾ ಗೌಡ ಅವರು ಕನ್ನಡದ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡು ಮತ್ತಷ್ಟು ಅಭಿಮಾನಿಗಳನ್ನು ಪಡೆದರು. ಬಿಗ್ ಬಾಸ್ ನಲ್ಲಿ ಟಾಸ್ಕ್ ಹಾಗೂ ಮನರಂಜನೆ ಎರಡರಲ್ಲೂ ಸಮವಾಗಿ ಕಾಣಿಸಿಕೊಳ್ಳುತ್ತಿದ್ದ ಕವಿತಾ ಗೌಡ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರದಲ್ಲಿ ನಟಿಸಿದರು. ಚಂದನ್ ಅವರು ಕೂಡ ‘ಲವ್ ಯು ಆಲಿಯಾ’, ‘ಪ್ರೇಮ ಬರಹ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಈ ದಂಪತಿಗಳು ಹೊಸದೊಂದು ಪ್ರಯತ್ನವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿದ್ದಾರೆ.

ಚಂದನ್ ಹಾಗೂ ಕವಿತಾ ಗೌಡ ದಂಪತಿಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿ ‘ಘಾಟಿಕಲ್ ಹೋಂ ಸ್ಟೇ’ ಎನ್ನುವ ಹೋಟೆಲ್ ಒಂದನ್ನು ಖರೀದಿಸಿ, ಹೋಟೆಲ್ ಅನ್ನು ಎಲ್ಲರಿಗೂ ಪರಿಚಯಿಸಲು ಪೋಸ್ಟ್ ಒಂದನ್ನು ಬರೆದು ಹಂಚಿಕೊಂಡಿದ್ದಾರೆ. ಚಂದನ್ ಅವರು ತಮ್ಮ instagram ನಲ್ಲಿ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕನ್ನಡಿಗರಿಗೆ ತಿಳಿಸುತ್ತಾ, ‘ಘಾಟಿಕಲ್ ಅತಿಥಿಗೃಹ ಇದು ನಮ್ಮ ಹೊಸ ಪ್ರಯತ್ನ..ಪ್ರಕೃತಿಯ ಮಡಿಲಲ್ಲಿರುವ ಈ ಅತಿಥಿಗೃಹಕ್ಕೆ ನೀವು ನಿಮ್ಮ ಕುಟುಂಬದವರು, ಪ್ರೀತಿ ಪಾತ್ರರು, ಸ್ನೇಹಿತರ ಜೊತೆ ಬಂದು ಸುಂದರವಾದ ಸಮಯವನ್ನು ಕಳೆಯಬಹುದು. ಈ ನಮ್ಮ ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ ಮತ್ತು ಆಶೀರ್ವಾದ ಅತ್ಯವಶ್ಯಕ’ ಎಂದು ಬರೆದು ಹಂಚಿಕೊಂಡಿದ್ದಾರೆ.

ಪಶ್ಚಿಮ ಘಟ್ಟದ ಸಾಲಿಗೆ ಸೇರಿದ ಚಿಕ್ಕಮಗಳೂರಿನಲ್ಲಿ ಹಸಿರು ಸಿರಿಯ ಮಧ್ಯೆ ‘ಘಾಟಿಕಲ್ ಹೋಂ ಸ್ಟೇ’ ಹೋಟೆಲ್ ಇದ್ದು ಇದನ್ನು ಖರೀದಿಸಿದ ಚಂದನ್ ಹಾಗೂ ಕವಿತ ಗೌಡ ದಂಪತಿಗಳು ಪೂಜೆಯ ಮೂಲಕ ಉದ್ಯಮವನ್ನು ಪ್ರಾರಂಭಿಸಿದ್ದಾರೆ. ಹಬ್ಬದ ಉಡುಗೆ ತೊಡುಗೆಗಳನ್ನು ತೊಟ್ಟು ಸ್ನೇಹಿತರು, ಕುಟುಂಬದವರು ಹಾಗೂ ಸಂಬಂಧಿಕರ ಜೊತೆಯಲ್ಲಿ ಪೂಜೆಯನ್ನು ನೆರವೇರಿಸಿ ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹೊಸದೊಂದು ಪ್ರಯತ್ನಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರಂತೆ.

Leave a Comment

error: Content is protected !!