ಬೆಳ್ತಂಗಡಿಯ ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಭಾರತೀಯ ಕ್ರಿಕೆಟ್ ಆಟಗಾರ ಕೆಎಲ್ ರಾಹುಲ್, ಇವರ ದೈವಾರಾಧನೆಗೆ ಒಂದು ಮೆಚ್ಚುಗೆ ಇರಲಿ!

ಸ್ನೇಹಿತರೆ ಕನ್ನಡಿಗ ಕೆ ಎಲ್ ರಾಹುಲ್ ಅವರು ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆದುಕೊಂಡು ಇಡೀ ಕರ್ನಾಟಕವೇ ಹೆಮ್ಮೆ ಪಡುವಂತಹ ಮನೆ ಮಗನಾಗಿದ್ದಾರೆ. ತಮ್ಮ ಅದ್ಭುತ ಆಟಗಾರಿಕೆಯ ಮೂಲಕ ಫೀಲ್ಡ್ ನಲ್ಲಿ ರನ್ ಗಳ ಸುರಿಮಳೆಯನ್ನು ಹರಿಸುತ್ತಾ ಕ್ರಿಕೆಟ್ ಅಭಿಮಾನಿಗಳ ಮನಸ್ಸನ್ನು ಗೆಲ್ಲುವ ಕೆ ಎಲ್ ರಾಹುಲ್ ತಮ್ಮ ಬಿಡುವಿನ ಸಮಯದಲ್ಲಿ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಾ ಕನ್ನಡಿಗರ ಪ್ರೀತಿಯನ್ನು ಸಂಪಾದಿಸುತ್ತಿರುತ್ತಾರೆ.

ಹೌದು ಗೆಳೆಯರೇ ಬಿಡುವು ಸಿಕ್ಕಾಗಲೆಲ್ಲ ತಮ್ಮ ಪತ್ನಿ ಆತೀಯ ಶೆಟ್ಟಿ ಅವರೊಂದಿಗೆ ಗುಡಿ ಗೋಪುರಗಳನ್ನು ಸುತ್ತುವಂತಹ ಕೆಎಲ್ ರಾಹುಲ್ ಪರಮ ದೈವಾರಾಧಕ ಎಂದರೆ ತಪ್ಪಾಗಲಾರದು. ಸದಾ ಶಿವನ ಆರಾಧನೆಯಲ್ಲಿ ತೊಡಗಿಕೊಳ್ಳುವಂತಹ ಕೆಎಲ್ ರಾಹುಲ್ ನಮ್ಮ ಭಾರತದಲ್ಲಿ ಇರುವಂತಹ ಹಲವಾರು ಶಿವ ಮಂದಿರಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಹೀಗಿರುವಾಗ ಕಳೆದ ಜನವರಿ 17ನೇ ತಾರೀಕು ರಾಹುಲ್ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥೇಶ್ವರನ ದರ್ಶನ ಪಡೆಯುವುದರ ಜೊತೆಗೆ ಧರ್ಮಾಧಿಕಾರಿಗಳಾದ

ಡಾ. ವೀರೇಂದ್ರ ಹೆಗ್ಡೆ ಅವರ ಆಶೀರ್ವಾದ ಪಡೆದು, ಅವರೊಂದಿಗೆ ಸುಂದರವಾದ ಸಮಯವನ್ನು ಕಳೆದಂತಹ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗಿದೆ. ಬಿಡುವಿನ ಸಮಯದಲ್ಲಿ ಸ್ನೇಹಿತರೊಂದಿಗೆ ಬೆಳ್ತಂಗಡಿಯಲ್ಲಿ ಇರುವಂತಹ ಸೌಧಕ ಮಹಾ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಗಣಪತಿಯ ಕೃಪೆಗೆ ಪಾತ್ರರಾಗಿದ್ದಾರೆ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಕೇಸರಿ ಬಣ್ಣದ ಟಿ-ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಹೆಗಲ ಮೇಲೊಂದು ಶಲ್ಯ ಧರಿಸಿ ದೇವರ ಕಾರ್ಯದಲ್ಲಿ ಕೆಎಲ್ ರಾಹುಲ್ ಭಾಗಿಯಾಗಿರುವುದು ಎಲ್ಲರಿಂದ ಮೆಚ್ಚುಗೆಗೆ ಗುರಿಯಾಗಿದೆ.

ತನ್ನೋರ್ವ ಸ್ಟಾರ್ ಸೆಲೆಬ್ರಿಟಿ ಆದರೂ ಕೂಡ ಹೆಚ್ಚಿನ ಹಮ್ಮೋ ಬಿಮ್ಮು ಇಲ್ಲದೆ ಎಲ್ಲರೊಂದಿಗೆ ಬಹಳ ಸರಳವಾಗಿ ಬೆರೆಯುವಂತಹ ಕೆಎಲ್ ರಾಹುಲ್ ಮಹಾಗಣಪತಿ ದೇವಸ್ಥಾನದ ಬೀದಿಯಲ್ಲಿ ನಿಂತು ದೇವರಿಗೆ ಪೂಜೆಯನ್ನು ಅರ್ಪಿಸುತ್ತಿರುವ ಕೆಲ ಫೋಟೋಗಳು ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದ್ದು, ಇದನ್ನು ಕಂಡಂತಹ ನೆಟ್ಟಿಗರು ನಡೆದು ಬಂದ ಹಾದಿಯನ್ನು ಎಂದಿಗೂ ಮರೆಯಬಾರದು ಎಂಬ ಕಮೆಂಟ್ ಮಾಡಿ ಕೆ ಎಲ್ ರಾಹುಲ್ ಅವರ ನಡೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!