Ravindra Jadeja: ಮತ್ತೆ ಮುನಿಸಿಕೊಂಡ ರವೀಂದ್ರ ಸಿಂಗ್ ಜಡೇಜಾ. ಇದೇ ಕಾರಣ ಇರಬಹುದಾ?

Ravindra Jadeja ರವೀಂದ್ರ ಜಡೇಜಾ ನಿಮಗೂ ತಿಳಿದಿರುವ ಹಾಗೆ ಕೇವಲ ಭಾರತೀಯ ಕ್ರಿಕೆಟ್ ತಂಡದಲ್ಲಿ ಮಾತ್ರವಲ್ಲದೆ ಐಪಿಎಲ್ ನಲ್ಲಿ ಕೂಡ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡದ ಪರವಾಗಿ ಪ್ರಮುಖ ಆಟಗಾರನಾಗಿ ಸಾಕಷ್ಟು ಪಂದ್ಯಗಳನ್ನು ಗೆಲುವಿನ ದಡಕ್ಕೆ ಒಬ್ಬರೇ ಸಾಗಿಸುವ ಮೂಲಕ ಸಾಬೀತುಪಡಿಸಿದ್ದಾರೆ.

ಅದರಲ್ಲೂ ವಿಶೇಷವಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿ ಕೂಡ ತಂಡಕ್ಕೆ ಮ್ಯಾಚ್ ವಿನ್ನರ್ ಆಗಿ ಕಾಣಿಸಿಕೊಳ್ಳುವುದು ಮಾತ್ರವಲ್ಲದೆ ಕ್ವಿಕ್ ಫೀಲ್ಡಿಂಗ್ ಮೂಲಕವೂ ಕೂಡ ಸಾಕಷ್ಟು ವಿಕೆಟ್ ಗಳು ಉದುರುವಂತೆ ಮಾಡಿದ್ದಾರೆ. ಅವರೊಬ್ಬ ಪರ್ಫೆಕ್ಟ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆದರೆ ನಿನ್ನೆಯಷ್ಟೇ ಟ್ವಿಟರ್ ನಲ್ಲಿ ಇಂದಲ್ಲ ನಾಳೆ ಕರ್ಮ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂಬುದಾಗಿ ಪೋಸ್ಟ್ ಮಾಡುವ ಮೂಲಕ ರವೀಂದ್ರ ಜಡೇಜಾ(Ravindra Jadeja) ಅವರು ಚೆನ್ನೈ ಅಭಿಮಾನಿಗಳಲ್ಲಿ ಗೊಂದಲದ ಪರಿಸ್ಥಿತಿ ಉಂಟು ಮಾಡುವುದಕ್ಕೆ ಕಾರಣವಾಗಿದ್ದಾರೆ. ಇಲ್ಲಿ ಈಗ ಎರಡು ಕುತೂಹಲಕಾರಿ ಪರಿಸ್ಥಿತಿಗಳು ಎದ್ದು ಕಾಣುತ್ತದೆ.

ಅದೇನೆಂದರೆ ರವೀಂದ್ರ ಜಡೇಜಾ ರವರು ಕಳೆದ ಬಾರಿಯಂತೆ ಈ ಬಾರಿ ಕೂಡ ಸಿಎಸ್ಕೆ(CSK) ಮ್ಯಾನೇಜ್ಮೆಂಟ್ ವಿರುದ್ಧ ಕೋಪಗೊಂಡಿರಬಹುದು. ಇಲ್ಲವಾದಲ್ಲಿ ಅವರ ಹೆಂಡತಿಯ ರಾಜಕೀಯ ಜೀವನದಲ್ಲಿ ಯಾವುದೋ ಒಂದು ತೊಡಕು ಉಂಟಾಗಿರಬಹುದು ಅದರ ವಿರುದ್ಧ ಅಸಮಾಧಾನವನ್ನು ಅವರು ವ್ಯಕ್ತಪಡಿಸಿರಬಹುದು ಎಂಬುದಾಗಿ ಅಂದಾಜಿಸಲಾಗಿದೆ.

Leave a Comment

error: Content is protected !!