ಕನ್ನಡಪರ ಹೋರಾಟಗಾರರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ಪ್ರಶಾಂತ್ ಸಂಬರಗಿ…- ಸಂಬರಗಿ ವಿರುದ್ಧ ಪ್ರತಿಭಟನೆ…

ಬಿಗ್ ಬಾಸ್ ಸೀಸನ್ ಎಂಟರಲ್ಲಿ ಅಬ್ಬರಿಸಿ, ಟಾಪ್ ಫೈವ್ ಸ್ಪರ್ಧಿಗಳಲ್ಲಿ ಕಾಣಿಸಿಕೊಂಡ ಪ್ರಶಾಂತ ಸಂಬರಗಿ ಅವರು ಮಾತಿನಲ್ಲೇನು ಕಡಿಮೆ ಇರಲಿಲ್ಲ. ಜಗಳ, ಕೂಗಾಟಗಳು ಅವರಿಂದಲೇ ಹೆಚ್ಚಾಗಿದ್ದವು ಎಂದರೆ ತಪ್ಪೇನಿಲ್ಲ ಬಿಡಿ. ಆದರೂ ಒಂದು ಮಟ್ಟದಲ್ಲಿ ಚೆನ್ನಾಗಿಯೇ ಆಡಿದ್ದರು. ಆದರೆ ಬಿಗ್ ಬಾಸ್ ಸೀಸನ್ ನೈನ್ ನಲ್ಲಿ ಇದೀಗ ಅವರ ಹೇಳಿಕೆಗಳು ಹಲವಾರು ಕನ್ನಡಿಗರ ಮನ ನೋಯಿಸಿದೆ.

ಬಿಗ್ ಬಾಸ್ ಸೀಸನ್ 9 ಪ್ರಾರಂಭವಾದ ಮೊದಲ ವಾರದಿಂದಲೇ ಸುದ್ದಿಯಲ್ಲಿದೆ. ಪ್ರಶಾಂತ್ ಸಂಬರಗಿ ಮತ್ತು ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ರೂಪೇಶ್ ರಾಜಣ್ಣ ಅವರ ಮಧ್ಯೆ ಆಗಾಗ ಮನಸ್ತಾಪಗಳು ಕಂಡುಬರುತ್ತಲೇ ಇದ್ದವು. ನೀರಿನ ಬಾಟಲನ್ನು ಅಡಗಿಸುತ್ತಿರುವುದು, ರೂಪೇಶ್ ಅವರ ಚಪ್ಪಲಿಗಳನ್ನು ಧರಿಸಿರುವುದು, ಅವರ ವಿರುದ್ಧ ಮಾತನಾಡುವುದು ಹೀಗೆ ಹೇಳುತ್ತಾ ಹೋದರೆ ತುಂಬಾ ತುಂಟಾಟಗಳು ಪ್ರಶಾಂತ್ ಸಂಬರಗಿ ಅವರಿಂದ ನಡೆದಿವೆ. ಇದೇ ರೀತಿ ಹೇಳಿದ ಮಾತೊಂದು ಈಗ ಕನ್ನಡಪರ ಹೋರಾಟಗಾರರು ಪ್ರಶಾಂತ್ ಸಂಬರಗಿಯ ವಿರುದ್ಧವಾಗಿ ಪ್ರತಿಭಟನೆ ನಡೆಸುವಂತೆ ಮಾಡಿದೆ..

ಪ್ರಶಾಂತ್ ಸಂಬರಗಿ ಅವರನ್ನು ಬಿಗ್ ಬಾಸ್ ರಿಯಾಲಿಟಿ ಶೋ ನಿಂದ ಹೊರಗೆ ಇಡುವಂತೆ ಕನ್ನಡಪರ ಹೋರಾಟಗಾರರು ಮಧ್ಯರಾತ್ರಿ ಇಂದಲೇ ಧರಣಿ ಕೂತು ಒತ್ತಾಯಿಸುತ್ತಿದ್ದಾರೆ. ಬಿಡದಿಯ ಇನೋವೇಟಿವ್ ಫಿಲಂ ಸಿಟಿಯ ಮುಂಭಾಗದಲ್ಲಿ ಧರಣಿ ಸೇರಿದ್ದಾರೆ. ‘ಪ್ರಶಾಂತ್ ಸಂಬರಗಿ ಅವರು ಕನ್ನಡ ಪರ ಹೋರಾಟಗಾರರ ಬಗೆಗೆ ತೀರ ಕೆಟ್ಟದಾಗಿ ಅವಹೇಳನಕಾರಿ ಮಾತುಗಳನ್ನಾಡಿದ್ದು, ಇದನ್ನು ಕರ್ನಾಟಕವು ಮೆಚ್ಚುವುದಿಲ್ಲ. ತಮ್ಮ ಪ್ರಚಾರಕ್ಕಾಗಿ ಇನ್ನೊಬ್ಬರನ್ನು ತುಳಿಯುವಂತಹ ಮಾತನಾಡುವ ಇವರನ್ನು ಬಿಗ್ ಬಾಸ್ ಶೋನಿಂದ ಹೊರ ಹಾಕಬೇಕು’ ಎಂದು ಹೇಳುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಇವರನ್ನು ಹೊರ ಹಾಕದಿದ್ದಲ್ಲಿ ಸರಕಾರವೇ ಬಿಗ್ ಬಾಸ್ ಚಿತ್ರಿಕರಣಕ್ಕೆ ನಿರ್ಬಂಧ ಹೇರಬೇಕೆಂದು ಒತ್ತಾಯಿಸಿದ್ದಾರೆ.

‘ಕನ್ನಡಪರ ಹೋರಾಟಗಾರರಿಗೆ ಬಿಸಿ ಮುಟ್ಟಿಸಿದ್ದೇನೆ’ ಎಂದ ಪ್ರಶಾಂತ್ ಸಂಬರಗಿಯವರಿಗೆ ಕಿಚ್ಚ ಸುದೀಪ್ ಅವರು ತಕ್ಕನಾದ ಪಾಠವನ್ನು ಕಲಿಸಲೇಬೇಕೆಂದು ಹಲವಾರು ಕನ್ನಡ ಸಂಘಟನೆಗಳು ರಸ್ತೆಗಿಳಿದು ಕೂಗಿ ಹೇಳಿದ್ದಾರೆ. ‘ಕ್ಷಮೆಯಾಚಿಸುವುದೊಂದನ್ನು ಬಿಟ್ಟು ಪ್ರಶಾಂತ್ ಅವರಿಗೆ ಬೇರೆ ಯಾವ ಆಯ್ಕೆಯೂ ಇಲ್ಲ. ಇದೇ ರೀತಿಯಾಗಿ ಕಿಡಿ ಹಚ್ಚುವ ಚುಚ್ಚು ಮಾತುಗಳಾಡಿದರೆ ಕರ್ನಾಟಕದಿಂದ ಗಡಿಪಾರು ಮಾಡುವುದು ಖಂಡಿತ’ ಎಂದು ಪ್ರತಿಭಟನಾಕಾರರು ಗದರಿದ್ದಾರೆ. ‘ಕಲರ್ಸ್ ಕನ್ನಡ ವಾಹಿನಿಯ ಮತ್ತು ಸುದೀಪ ಅವರ ಮೇಲಿನ ಗೌರವದಿಂದಾಗಿ ಬಿಗ್ ಬಾಸ್ ಮನೆಯೊಳಗೆ ನುಗ್ಗಿಲ್ಲ; ಇಲ್ಲದಿದ್ದಲ್ಲಿ ಕಥೆ ಬೇರೇನೇ ಆಗಿರುತ್ತಿತ್ತು..ಈ ಕಿರಾತಕನನ್ನು ಶೋ ನಿಂದ ಹೊರಹಾಕಿ ಎಂದು ಸಮಸ್ತ ಕನ್ನಡಿಗರ ಪರವಾಗಿ ಆಗ್ರಹ ನೀಡುತ್ತಿದ್ದೇವೆ’ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

Leave a Comment

error: Content is protected !!