ಕನ್ನಡ ಚಿತ್ರರಂಗ ಕಂಡಂತಹ ಅದ್ಭುತ ನಟ ಹಾಗೂ ನಿರ್ದೇಶಕರಲ್ಲಿ ರಿಷಬ್ ಶೆಟ್ಟಿ ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಈಗಾಗಲೇ ಇದನ್ನು ಹಲವಾರು ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರಿಗೆ ಸಾಬೀತುಪಡಿಸಿದ್ದಾರೆ. ಆದರೆ ಈ ವಿಚಾರವನ್ನು ಕಾಂತಾರ ಸಿನಿಮಾದ ಮೂಲಕ ಇಡೀ ಜಗತ್ತು ಒಪ್ಪಿಕೊಳ್ಳುವಂತೆ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಕಾಂತಾರ ಸಿನಿಮಾ ಈಗಾಗಲೇ ಅದ್ಧೂರಿಯಾಗಿ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬ ಸುದ್ದಿ ಸಿಗುತ್ತಿದೆ.
ರಿಷಬ್ ಶೆಟ್ಟಿ ಅವರ ಅತ್ಯದ್ಭುತ ನಿರ್ದೇಶನ ಮತ್ತು ಮನೋಜ್ಞ ನಟನೆಯ ಮೂಲಕ ಈ ಸಿನಿಮಾ ನೂರು ಪಟ್ಟು ಅಧಿಕ ಲಾಭವನ್ನು ಗಳಿಸಿದೆ ಎಂಬುದು ಈಗಾಗಲೇ ನಿಚ್ಚಳವಾಗಿ ನಿಮಗೆ ಕಾಣುತ್ತಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಉಳಿದ ಪರಭಾಷೆಗಳಲ್ಲಿ ಕೂಡ ಕಾಂತಾರ ಭರ್ಜರಿಯಾಗಿ ಕಲೆಕ್ಷನ್ ಮಾಡಿದೆ.
ಹಲವಾರು ಕಡೆಗಳಲ್ಲಿ ಕಾಂತಾರ ಸಿನಿಮಾ ಕನ್ನಡದ ಹೆಮ್ಮೆಯ ಕೆ.ಜಿ.ಎಫ್. ಚಾಪ್ಟರ್ 2 ಚಿತ್ರದ ದಾಖಲೆಗಳನ್ನು ಕೂಡ ಮೀರಿಸಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಕಾಂತಾರ ಸಿನಿಮಾದ ಮೂಲಕ ಪ್ರಚಂಡ ಗೆಲುವನ್ನು ಸಾಧಿಸಿರುವ ರಿಷಬ್ ಶೆಟ್ಟಿ ತಮ್ಮ ಸಂಭಾವನೆಯನ್ನು ಮುಂದಿನ ಸಿನಿಮಾದಿಂದ ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಕೂಡ ಸಿನಿಮಾ ವಲಯಗಳಿಂದ ಕೇಳಿ ಬರುತ್ತದೆ. ಹೌದು ಮಿತ್ರರೇ ಸಿನಿಮಾ ರಿಷಬ್ ಶೆಟ್ಟಿ ಅವರಿಗೆ ತಂದು ಕೊಟ್ಟಿರುವ ಗೆಲುವನ್ನು ನೋಡಿದರೆ ಇದು ನ್ಯಾಯವಾದುದು ಎಂದು ಹೇಳಬಹುದು.
ಕಾಂತಾರ ಸಿನಿಮಾ ನಾಯಕನಾಗಿ ಹಾಗೂ ನಿರ್ದೇಶಕನಾಗಿ ರಿಷಬ್ ಶೆಟ್ಟಿ ಅವರಿಗೆ ಬಹಳಷ್ಟು ದೊಡ್ಡ ಮಟ್ಟದ ಗೆಲುವನ್ನು ತಂದು ಕೊಟ್ಟಿರುವ ಸಿನಿಮಾ. ಕಾಂತಾರ ಚಿತ್ರಕ್ಕಾಗಿ ನಿರ್ದೇಶಕ ರಿಷಬ್ ಶೆಟ್ಟಿ ಅವರು ಹತ್ತು ಕೋಟಿ ಸಂಭಾವನೆ ಪಡೆದಿದ್ದರು. ಇದೀಗ ರಿಷಬ್ ಶೆಟ್ಟಿ ಅವರು ಇದ್ದಕ್ಕಿದ್ದಂತೆ ತಮ್ಮ ಸಂಭಾವನೆ ಅನ್ನು ದುಪ್ಪಟ್ಟು ಮಾಡಿ ಕೊಂಡಿದ್ದಾರೆ. ತೆಲುಗು ತಮಿಳು ಚಿತ್ರ ರಂಗದ ದಿಗ್ಗಜ ನಿರ್ಮಾಪಕ ರಿಂದ ರಿಷಬ್ ಶೆಟ್ಟಿ ಅವರಿಗೆ ಭರ್ಜರಿ ಆಫರ್ ಬಂದಿದೆ..
ಮುಂದಿನ ಸಿನಿಮಾದಿಂದ ರಿಷಬ್ ಶೆಟ್ಟಿ ಅವರು ಭರ್ಜರಿ ಹತ್ತು ಕೋಟಿಗೂ ಅಧಿಕ ಸಂಭಾವನೆಯನ್ನು ಪಡೆಯಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಬಲ್ಲ ಮೂಲಗಳ ಪ್ರಕಾರ ರಿಷಬ್ ಶೆಟ್ಟಿ ಅವರು ನಿರ್ದೇಶನ ಮತ್ತು ನಟನೆ ಎರಡಕ್ಕೂ ಸೇರಿಸಿ 30 ಕೋಟಿ ಗೂ ಅಧಿಕ ಸಂಭಾವನೆ ಪಡೆಯುವ ಬೇಡಿಕೆ ಇಟ್ಟಿದ್ದಾರೆ. ಇನ್ಮೇಲೆ ರಿಷಬ್ ಶೆಟ್ಟಿ ಅವರು ಪಾನ್ಈ ಇಂಡಿಯನ್ ಸಿನೆಮಾವನ್ನೇ ಮಾಡಲಿದ್ದಾರೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.