Abhishek Ambareesh: ಸ್ನೇಹಿತರೆ, ದಿನೇ ದಿನೇ ಕಾವೇರಿ ಕಿಚ್ಚು, ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತದೆ, ನಮ್ಮಲ್ಲೇ ಕುಡಿಯಲು ನೀರಿಲ್ಲವಾದರೂ ತಮಿಳುನಾಡಿನ ರೈತರ ಬೆಳೆಗೆ ನೀರು ಬಿಡಬೇಕಾದಂತಹ ಪ್ರಸಂಗ ಎದುರಾಗಿದೆ. ಸುಪ್ರೀಂ ಕೋರ್ಟ್ (Supreme Court) ತಮಿಳುನಾಡಿಗೆ ಕಡ್ಡಾಯವಾಗಿ ನೀರನ್ನು ಹರಿಸಲೇಬೇಕು ಎಂಬ ತೀರ್ಪು ನೀಡಿದ ಬೆನ್ನಲ್ಲೇ ಸಾಕಷ್ಟು ರೈತರು ಕನ್ನಡಪರ ಹೋರಾಟಗಾರರು ಹಾಗೂ ಕನ್ನಡ ಸಿನಿಮಾರಂಗದ ಸೆಲೆಬ್ರಿಟಿಗಳು ಬೀದಿಗಿಳಿದು ಕಾವೇರಿ ನಮ್ಮವಳು ಎಂದಿಗೂ ತಮಿಳುನಾಡಿಗೆ ನೀರನ್ನು ಬಿಡುವುದಿಲ್ಲ ಎಂದು ಹೋರಾಟ ಮಾಡಿದರು.
ಅಲ್ಲದೆ ಗುರುವಾರದಂದು ಅಖಂಡ ಕರ್ನಾಟಕ ಬಂದ್ಗೆ ಕರೆ ಕೊಟ್ಟು, ಕಾವೇರಿಯನ್ನು ನಮ್ಮಲ್ಲೇ ಉಳಿಸಿಕೊಳ್ಳುವಂತಹ ಪ್ರಯತ್ನ ನಡೆಯಿತು. ಈ ಪ್ರತಿಭಟನೆಗೆ ಸಂಪೂರ್ಣ ಕನ್ನಡ ಸಿನಿಮಾ ರಂಗದ ಸಾಥ್ ದೊರಕಿತು. ಅದರಂತೆ ಅಂಬರೀಶ್ ಮತ್ತು ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್(Abhishek Ambareesh) ತಮ್ಮ ಪತ್ನಿ ಅವಿವ ಬಿಡಪ್ಪ(Aviva Bidapa) ಅವರೊಂದಿಗೆ ಕಾವೇರಿಯ ಉಗಮ ಸ್ಥಾನವಾದಂತಹ ತಲಕಾವೇರಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಹೆಚ್ಚಿನ ಮಳೆಯಾಗಲಿ ಹಾಗೂ ಕಾವೇರಿ ಸಮಸ್ಯೆಗೆ ಪರಿಹಾರ ದೊರಕಲಿ ಎಂದು ಪ್ರಾರ್ಥಿಸುತ್ತಾ ಈಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿಡಪ್ಪ ದಂಪತಿಗಳು ಪೂಜೆ ಮಾಡಿ ಭಕ್ತಿಯಿಂದ ದೇವರಲ್ಲಿ ಪ್ರಾರ್ಥಿಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಅವೀವಾ ಬಿಡ್ಡಪ್ಪ ಅವರು ಕೆಂಪು ಬಣ್ಣದ ಸಾಂಪ್ರದಾಯಕ ಅಡುಗೆಯಲ್ಲಿ ಕಾಣಿಸಿಕೊಂಡರೆ ಅಭಿಷೇಕ್ ಅಂಬರೀಶ್(Abhishek Ambareesh)
ಬಿಳಿ ಬಣ್ಣದ ಪಂಚೆ ಶರ್ಟು ಧರಿಸಿ ಅದಕ್ಕೆ ಹಸಿರು ಬಣ್ಣದ ಶಾಲ್ಯವನ್ನು ಹೊಂದಿಕೊಂಡು ಪ್ರಾರ್ಥನೆ ಮಾಡುತ್ತಿರುವ ಫೋಟೋಗಳಿದಾಗಿದೆ. ಈ ಫೋಟೋ ಹಾಗೂ ವಿಡಿಯೋಗಳೆಲ್ಲವೂ ಸಾಧ್ಯ instagram, facebook ಹಾಗೂ youtube ನಂತಹ ಜಾಲಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಷೇಕ್ ಅಂಬರೀಶ್ ಅವರಿಗೆ ತಮ್ಮ ತಂದೆಯಂತೆ ನಾಡಿನ ಮೇಲೆ ಇರುವಂತಹ ಪ್ರೀತಿ ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.