Ramcharan: ರಾಮ್ ಚರಣ್ ಹುಟ್ಟು ಹಬ್ಬದ ದಿನ ಹೊಟ್ಟೆಕಿಚ್ಚು ಪಟ್ಟುಕೊಂಡ್ರಾ ಅಲ್ಲು ಅರ್ಜುನ್?

Allu Arjun ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ಆಗಿರುವ ತೆಲುಗು ಚಿತ್ರರಂಗದ ಮೆಗಾ ಪವರ್ ಸ್ಟಾರ್ ರಾಮಚರಣ್(Ramcharan) ಅವರ ಬರ್ತಡೆ ಮಾರ್ಚ್ 27ರಂದು ಇತ್ತು. ಈ ದಿನ ಇಡೀ ಭಾರತೀಯ ಚಿತ್ರರಂಗದ ಹಲವಾರು ಪ್ರಮುಖ ಕಲಾವಿದರು ಸೇರಿದಂತೆ ಎಲ್ಲಾ ಸೆಲೆಬ್ರಿಟಿಗಳು ಕೂಡ ಬರ್ತಡೇ ವಿಶ್ ಮಾಡಿದ್ದರು. ಆದರೆ ಅವರ ಮಾವನ ಮಗ ಆಗಿರುವಂತಹ ಅಲ್ಲು ಅರ್ಜುನ್(Allu Arjun) ರವರೆ ವಿಶ್ ಮಾಡಿರಲಿಲ್ಲ.

ಇದರಿಂದಾಗಿ ಇವರಿಬ್ಬರ ನಡುವೆ ವೈಮನಸ್ಯ ಮೂಡಿರಬಹುದು ಅಥವಾ RRR ಚಿತ್ರದ ಯಶಸ್ಸಿನಿಂದ ಅಲ್ಲು ಅರ್ಜುನ್ ಅವರು ರಾಮ್ ಚರಣ್ ಅವರ ಮೇಲೆ ಹೊಟ್ಟೆಕಿಚ್ಚು ಪಟ್ಟುಕೊಂಡಿರಬಹುದು ಎಂಬುದಾಗಿ ಅಂದಾಜಿಸಲಾಗುತ್ತಿದೆ ಯಾಕೆಂದರೆ ಇದಕ್ಕೆ ಒಂದು ಕಾರಣ ಕೂಡ ಇದೆ. ಅದೇನೆಂದರೆ ಮಾರ್ಚ್ 28ರಂದು ಅಂದರೆ ರಾಮ್ ಚರಣ್ ಅವರ ಹುಟ್ಟು ಹಬ್ಬದ ಮಾರನೇ ದಿನದಂದು ಅಲ್ಲು ಅರ್ಜುನ್(Allu Arjun) ಅವರು 20 ವರ್ಷ ಸಿನಿಮಾ ಇಂಡಸ್ಟ್ರಿಯಲ್ಲಿ ಪೂರೈಸಿರುವ ಕುರಿತಂತೆ ಪೋಸ್ಟ್ ಕೂಡ ಹಾಕಿದ್ದರು.

ಅಲ್ಲು ಅರ್ಜುನ್ ರವರ ತಂದೆಯ ಸಹೋದರಿಯೇ ರಾಮಚರಣ್(Ram Charan) ಅವರ ತಾಯಿಯಾಗಿದ್ದಾರೆ. ಹೀಗಾಗಿ ಅಲ್ಲು ಅರ್ಜುನ್ ಅವರು ಸ್ವಂತ ಅತ್ತೆ ಮಗನ ಬರ್ತಡೆಗೆ ವಿಶ್ ಮಾಡಿರ್ಲಿಲ್ಲ ಎಂದರೆ ಖಂಡಿತವಾಗಿ ಇದರ ಕುರಿತಂತೆ ವ್ಯಾಪಕವಾಗಿ ಗಾಳಿ ಸುದ್ದಿಗಳು ಹರಿದಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದರ ಕುರಿತಂತೆ ಕೆಲವು ಕಡೆಗಳಲ್ಲಿ ಅಲ್ಲು ಅರ್ಜುನ್ ರವರು ರಾಮ್ ಚರಣ್(Ram Charan) ಅವರ ಜಗತ್ವ್ಯಾಪಿ ಜನಪ್ರಿಯತೆಯಿಂದ ಹೊಟ್ಟೆಕಿಚ್ಚು ಹೊಂದಿದ್ದಾರೆ ಎಂಬುದಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡದಿದ್ದರೇನಂತೆ ವೈಯಕ್ತಿಕವಾಗಿ ಶುಭಾಶಯಗಳನ್ನು ತಿಳಿಸಿದ್ದಾರೆ ಎನ್ನುವ ಸುದ್ದಿಗಳು ಕೂಡ ಓಡಾಡುತ್ತಿವೆ. ಇದರ ನಿಜಾಂಶ ಏನು ಎನ್ನುವುದು ಬಲ್ಲವರಿಗಷ್ಟೇ ಗೊತ್ತು ಉಳಿದವರು ಕಂಡಂತೆ ಮಾತನಾಡುತ್ತಾರೆ ಅಷ್ಟೇ.

Leave a Comment

error: Content is protected !!