Taraka Ratna: ಇತ್ತೀಚಿಗಷ್ಟೇ ಮರಣ ಹೊಂದಿರುವ ಸೋದರಳಿಯ ತಾರಕ್ ರಾಮ್ ಗಾಗಿ ಬಾಲಯ್ಯ ಮಾಡಲು ಹೊರಟಿರುವ ಕೆಲಸ ಏನು ಗೊತ್ತಾ?

Balayya ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗಷ್ಟೇ ಹೃದಯಘಾತ ಕಾರಣದಿಂದಾಗಿ ಸಾಕಷ್ಟು ದಿನಗಳ ಜೀವನ್ಮರಣದ ಹೋರಾಟದ ನಂತರ ನಂದಮೂರಿ ವಂಶದ ಕುಡಿಯಾಗಿರುವ ತಾರಕ ರತ್ನ(Taraka Ratna) ಅವರು ಬೆಂಗಳೂರಿನ(Bangalore) ಆಸ್ಪತ್ರೆಯಲ್ಲಿ ಮರಣ ಹೊಂದಿರುವುದು ಈಗಾಗಲೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಎಲ್ಲರೂ ಕಣ್ಣೀರು ಹಾಕಿದ್ದಾರೆ.

ಈಗ ಇದೇ ಕಾರಣಕ್ಕಾಗಿ ತನ್ನ ಸೋದರಳಿಯನಿಗೆ ಹೀಗೆ ಆಗಿದೆ ಎಂದು ಅವರ ಮಾವ ಆಗಿರುವ ಬಾಲಯ್ಯ ಮಾಡಲು ಹೊರಟಿರುವ ಕೆಲಸ ನಿಜಕ್ಕೂ ಕೂಡ ಎಲ್ಲರನ್ನೂ ಮಂತ್ರ ಮುಗ್ದರನ್ನಾಗಿಸಿದೆ. ನಟ ಬಾಲಯ್ಯ ಯಾವತ್ತೂ ಕೂಡ ತಮ್ಮ ನೇರ ನುಡಿ ಹಾಗೂ ನಡೆಗಾಗಿ ಹೆಸರಾದವರು. ಈಗ ಮತ್ತೊಮ್ಮೆ ಬಾಲಯ್ಯ(Balayya) ಎಲ್ಲರ ಮನಸ್ಸನ್ನು ಗೆಲ್ಲುವ ಕೆಲಸವನ್ನು ಮಾಡುತ್ತಿದ್ದಾರೆ.

ಹೌದು ಮಿತ್ರರೇ ನಟ ಬಾಲಯ್ಯ(Actor Balayya) ಅವರು ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಕೂಡ ಗೆಲುವಿನ ಕುದುರೆಯಾಗಿದ್ದು ಹಿಂದುಪುರ್ ಹಾಗೂ ಬಸವತಾರಕಮ್ ನಲ್ಲಿ ಇರುವಂತಹ ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವಂತಹ ಪ್ರತಿಯೊಬ್ಬರಿಗೂ ಕೂಡ ಉಚಿತ ಚಿಕಿತ್ಸೆಯನ್ನು ನೀಡುವ ಆಶ್ವಾಸನೆಯನ್ನು ವ್ಯಕ್ತಪಡಿಸಿದ್ದಾರೆ.

ನನ್ನ ಸೋದರಳಿನನ್ನು ಆಹಾವನೆ ತೆಗೆದುಕೊಂಡಿರುವ ಈ ಆರೋಗ್ಯ ಸಮಸ್ಯೆ ಇನ್ಯಾರನ್ನು ಕೂಡ ಕಾಡಬಾರದು ಎಂಬುದಾಗಿ ಬಾಲಯ್ಯ ಈ ರೀತಿಯ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಬಾಲಯ್ಯ(Balayya) ಅವರ ಈ ನಿರ್ಧಾರ ಹಾಗೂ ಕೆಲಸ ಪ್ರತಿಯೊಬ್ಬರ ಮೆಚ್ಚುಗೆ ಒಳಗಾಗಿದ್ದು ಪ್ರತಿಯೊಬ್ಬರೂ ಕೂಡ ತಮ್ಮ ಶುಭಾಶಯಗಳನ್ನು ಕೋರಿದ್ದಾರೆ. ಬಾಲಯ್ಯ ಅವರ ಈ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೂಡ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!