Dali Dhananjay: ಉಘೇ ಮಾದಪ್ಪ ಎಂದು ಮಲೆ ಮಾದೇಶ್ವರ ಬೆಟ್ಟವನ್ನು ಅತ್ತಿಳಿದ ಧನಂಜಯ್, ಫೋಟೋ ಭಾರಿ ವೈರಲ್!

Dali Dhananjay: ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಪ್ರಸಿದ್ದಿ ನಟರಲ್ಲಿ ಒಬ್ಬರಾಗಿರುವಂತಹ ಡಾಲಿ ಧನಂಜಯ್ ಅವರು ಬಿಡುವಿನ ಸಮಯದಲ್ಲಿ ತಮ್ಮ ಸ್ನೇಹಿತರೊಂದಿಗೆ ಆಗಾಗ ವಿಶೇಷ ಸ್ಥಳಗಳಿಗೆ ಭೇಟಿ ನೀಡುತ್ತ ಅದರ ಕೆಲ ಪೋಟೋಸಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಸಿಕ್ಕಾಪಟ್ಟೆ ವೈರಲಾಗುತ್ತಿರುತ್ತಾರೆ. ಅದರಂತೆ ಸದ್ಯ ಡಾಲಿ ಧನಂಜಯ್(Dali Dhananjay) ಅವರು ತಮ್ಮ ಸ್ನೇಹಿತರ ಬಳಗದೊಂದಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ (Male Mahadeshwara hills) ಭೇಟಿ ನೀಡಿದ್ದು ಕೆಲ ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಮಲೆ ಮಾದಪ್ಪನ ಸನ್ನಿಧಿಯಲ್ಲಿ ಉಘೇ ಮಾದಪ್ಪ ಎಂಬ ಕ್ಯಾಪ್ಶನ್ ಬರೆದು ಪೋಸ್ಟ್ ಶೇರ್ ಮಾಡಿದ್ದಾರೆ.

ಓರ್ವ ಮೇರು ನಟನಾದರೂ ಕೂಡ ಬಹಳ ಸರಳವಾಗಿ ದೇವಸ್ಥಾನಕ್ಕೆ ಪಾದಯಾತ್ರೆಯ ಮೂಲಕವೇ ನಡೆದುಕೊಂಡು ಹೋಗಿ ಅಲ್ಲಿ ತಮ್ಮ ಸ್ನೇಹಿತರ ಬಳಗದ ಮಧ್ಯೆ ನಿಂತು ಫೋಟೋ ತೆಗೆಸಿಕೊಂಡಿರುವ ಧನಂಜಯನ್ನು ಕಣ್ತುಂಬಿಕೊಂಡಂತಹ ಅಭಿಮಾನಿಗಳು ಅವರ ಸಿಂಪ್ಲಿಸಿಟಿ ಹಾಗೂ ಸ್ನೇಹ ಭಾವಕ್ಕೆ ಮೆಚ್ಚುಗೆಯ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಸದ್ಯ ಈ ಫೋಟೋಗಳು ಬಾರಿ ವೈರಲಾಗುತ್ತಿದ್ದು ಪೋಸ್ಟ್ ಶೇರ್ ಮಾಡಲಾದ ಕೆಲವೇ ಕೆಲವು ಗಂಟೆಗಳಲ್ಲಿ ಸಾವಿರಾರು ಲೈಕ್ ಹಾಗೂ ಕಮೆಂಟ್ಗಳ ಸುರಿಮಳೆಯೇ ಹರಿದು ಬಂದಿದೆ.

ಕಳೆದ ವರ್ಷ ಮಂಡ್ಯ ಜಿಲ್ಲೆಯ ಕೆಎಂ ದೊಡ್ಡಿ ಗ್ರಾಮದ ಅವಿವಾಹಿತ ಯುವಕರ ಗುಂಪಿನ ಜೊತೆಗೆ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಮಾಡುವ ಮೂಲಕ ಬ್ರಹ್ಮಚಾರಿಗಳ ನಡೆಯಲ್ಲಿ ಭಾಗಿಯಾಗಿ ಮಾದೇಶ್ವರ ಬೆಟ್ಟದಲ್ಲಿ ಎಲ್ಲರ ಗಮನ ಸೆಳೆದಿದ್ದರು ಇದೀಗ ನಮ್ಮ ಸಿನಿ ಕೆಲಸಗಳ ನಡುವೆ ಬಿಡುವ ಮಾಡಿಕೊಂಡು ಹೊಸ ವರ್ಷದ ಅಂಗವಾಗಿ ಮಾದಪ್ಪನನ್ನು ಕಣ್ತುಂಬಿಕೊಳ್ಳಲು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

ಇನ್ನು ಹೆಡ್ಬುಷ್ ಸಿನಿಮಾದ ನಂತರ ಡಾಲಿ ಧನಂಜಯ್ ಅಭಿನಯಿಸಿರುವಂತಹ ಮಾನ್ಸೂನ್ ರಾಗ ಹಾಗೂ ಬೈರಾಗಿ ಸೇರಿದಂತೆ ಯಾವ ಸಿನಿಮಾಗಳು ಹೇಳಿಕೊಳ್ಳುವಂತಹ ಯಶಸ್ಸನ್ನು ಕಾಣಲಿಲ್ಲ, ಈ ಕಾರಣದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಶಿವರಾಜ್ ಕುಮಾರ್ ಅವರ ಟಗರು ಸಿನಿಮಾದಲ್ಲಿ ಅಭಿನಯಿಸಿದಂತೆ ಖಳನಾಯಕನಾಗಿ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ.

ಹೌದು ಗೆಳೆಯರೇ ಈಗಾಗಲೇ ಅಲ್ಲು ಅರ್ಜುನ್(Allu Arjun) ಮತ್ತು ರಶ್ಮಿಕ ಮಂದಣ್ಣ(Rashmika Mandanna) ಅಭಿನಯದ ಪುಷ್ಪ ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದ ಡಾಲಿ ಧನಂಜಯ್(Dali Dhananjay) ಇದೀಗ ಅದರ ಎರಡನೇ ಭಾಗಕ್ಕೆ ಬಣ್ಣ ಹಚ್ಚುತ್ತಿದ್ದು ಚಿತ್ರ ಇದೇ ವರ್ಷ ಆಗಸ್ಟ್ 24 ನೇ ತಾರೀಕು ಬಿಡುಗಡೆಯಾಗಲಿರುವ ಮಾಹಿತಿಯನ್ನು ಸಿನಿಮಾ ತಂಡ ಅಧಿಕೃತವಾಗಿ ಹೊರಹಾಕಿದ್ದಾರೆ. ಜೊತೆ ಜೊತೆಗೆ ಕನ್ನಡದ ತೋತಾಪುರಿ ಭಾಗ ಎರಡರಲ್ಲಿಯೂ ಧನಂಜಯ್ ಅಭಿನಯಿಸಬಹುದಾದ ಸಾಧ್ಯತೆಗಳಿವೆ.

Leave a Comment

error: Content is protected !!