Darshan Thoogudeepa ಶಾಲೆಯಿಂದ ಮಗ ಮನೆಗೆ ಬಂದು ಅಳುತ್ತಿದ್ದದ್ದನ್ನು ನೋಡಿ ಡಿ ಬಾಸ್ ಪ್ರಿನ್ಸಿಪಲ್ ಗೆ ಹೋಗಿ ಏನು ಮಾಡಿದ್ರು ಗೊತ್ತಾ?

Darshan Thoogudeepa ದರ್ಶನ್ ತೂಗುದೀಪ್ ಶ್ರೀನಿವಾಸ್ ಎನ್ನುವ ಹೆಸರು ಕನ್ನಡ ಚಿತ್ರರಂಗದಲ್ಲಿ ಸದಾಕಾಲ ಎತ್ತರದ ಸ್ಥಳದಲ್ಲಿ ಮುಟ್ಟುವಂತೆ ಇರುವಂತಹ ಹೆಸರು ಎಂದರೆ ತಪ್ಪಾಗಲಾರದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಿನಿಮಾಗಾಗಿ ನೀಡುವಂತಹ ಡೆಡಿಕೇಶನ್ ಹಾಗೂ ಹಾರ್ಡ್ ವರ್ಕ್ ನಿಜಕ್ಕೂ ಕೂಡ ಯಾವೊಬ್ಬ ನಟನಿಂದಲೂ ಕೂಡ ಸರಿಗಟ್ಟಲು ಸಾಧ್ಯವಿಲ್ಲ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಅವರ ಜೀವನದಲ್ಲಿ ಸಿನಿಮಾನೇ ಎಲ್ಲಾ ಎನ್ನಬಹುದು.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದಾ ಕಾಲ ಸಿನಿಮಾದ ಚಿತ್ರೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ ಕೆಲವೊಮ್ಮೆ ಬಿಡು ಸಿಕ್ಕಾಗ ಫಾರ್ಮ್ ಹೌಸ್ ನಲ್ಲಿ ಗೆಳೆಯರ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯುತ್ತಾರೆ. ಕುಟುಂಬದ ಜೊತೆಗೆ ಮೊದಮೊದಲು ಸಮಯವನ್ನು ಕಳೆಯುವುದು ಅತ್ಯಂತ ವಿರಳವಾಗಿತ್ತು ಎಂದರು ಕೂಡ ತಪ್ಪಾಗಲಾರದು. ಈಗ ಆಗಾಗ ತಮ್ಮ ಪತ್ನಿ ವಿಜಯಲಕ್ಷ್ಮಿ ದರ್ಶನ್ ಹಾಗೂ ಮಗ ವಿನೀಶ್ ದರ್ಶನ್ ಅವರನ್ನು ಕರೆದುಕೊಂಡು ಆಗಾಗ ವಿದೇಶಗಳಿಗೆ ಹಾಗೂ ಸಫಾರಿಗೆ ಹೋಗುತ್ತಾರೆ ಅದು ಬೇರೆ ವಿಷಯ ಬಿಡಿ.

ಒಮ್ಮೆ ವಿನೀಶ್ ಅವರ ಪ್ರಿನ್ಸಿಪಲ್ ತಂದೆಯನ್ನು ಕರೆದುಕೊಂಡು ಬರಬೇಕು ಎಂಬುದಾಗಿ ಹೇಳುತ್ತಾರೆ. ಆಗ ಮಗ ಮನೆಗೆ ಬಂದು ಅಳುತ್ತಿದ್ದದ್ದನ್ನು ನೋಡಿ ಏನೆಂದು ಕೇಳಿದಾಗ ನೀನು ಶಾಲೆಗೆ ಬರಬೇಕಂತೆ ಎಂಬುದಾಗಿ ಹೇಳುತ್ತಾರೆ ಆಗ ದರ್ಶನ್ ಅವರು ಪ್ರಿನ್ಸಿಪಾಲ್ ಅನ್ನು ಭೇಟಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಪ್ರಿನ್ಸಿಪಲ್ ನೀವು ನಿಮ್ಮ ಮಗನ ಜೊತೆಗೆ ಎಷ್ಟು ಸಮಯ ಕಳೆಯುತ್ತೀರಿ ಎಂಬುದಾಗಿ ಕೇಳಿದಾಗ ಚತ್ರಿಕರಣವನ್ನು ಮುಗಿಸಿ ಬಂದ ನಂತರ ಸಂಜೆ ಸ್ವಲ್ಪ ಸಮಯ ಕಳೆಯುತ್ತೇನೆ ಎಂಬುದಾಗಿ ಹೇಳುತ್ತಾರೆ. ಆಗ ಪ್ರಿನ್ಸಿಪಾಲ್ ಇಲ್ಲ ನೀವು ಅವರ ತಂದೆ ಮಗನ ಜೊತೆಗೆ ಗಂಟೆಗಟ್ಟಲೆ ಸಮಯವನ್ನು ಕಳೆಯಲು ಬೇಕಾಗುತ್ತದೆ ಎಂಬುದಾಗಿ ಹೇಳುತ್ತಾರೆ.

ಆಗ ದರ್ಶನ್ ರವರು ಕೋಪದಿಂದ ನಿಮ್ಮ ಶಾಲೆಗೆ ನಾನು ಲಕ್ಷ ಲಕ್ಷ ಫೀಸ್ ಕಟ್ಟೋಕೆ ನಾನು ಅಷ್ಟೊತ್ತು ಕೆಲಸ ಮಾಡಿದರೆ ಮಾತ್ರ ನನಗೆ ಹಣ ಸಿಗುತ್ತೆ ಎಂಬುದಾಗಿ ಖಾರವಾಗಿಯೇ ಹೇಳಿದ್ರಂತೆ. ಈ ಬಗ್ಗೆ ಕ್ರಾಂತಿ(Kranti) ಸಿನಿಮಾದ ಸಂದರ್ಶನ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಬಿಚ್ಚಿಡುತ್ತಾರೆ. ದರ್ಶನ್ ಅವರ ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!