Umapathy: ರಾಕಿಂಗ್ ಸ್ಟಾರ್ ಯಶ್ ಅವರ ಜೊತೆಗಿನ ಸಿನಿಮಾದ ಬಗ್ಗೆ ಉಮಾಪತಿ ಶ್ರೀನಿವಾಸಗೌಡ ಹೇಳಿದ್ದೇನು ಗೊತ್ತಾ?

Rocking Star Yash ಉಮಾಪತಿ ಶ್ರೀನಿವಾಸ್ ಗೌಡ(Umapathy Srinivas Gowda) ಅವರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ನಟನೆಯ ಹೆಬ್ಬುಲಿ(Hebbuli) ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕನಾಗಿ ಪಾದಾರ್ಪಣೆ ಮಾಡುತ್ತಾರೆ. ಅದಾದ ನಂತರ ಒಂದಲ್ಲ ಎರಡಲ್ಲ ಎನ್ನುವ ಅವಾರ್ಡ್ ವಿನ್ನಿಂಗ್ ಸಿನಿಮಾದ ನಿರ್ಮಾಣವನ್ನು ಕೂಡ ಮಾಡುತ್ತಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಜೊತೆಗಿನ ರಾಬರ್ಟ್ ಸಿನಿಮಾ ನೂರು ಕೋಟಿಗು ಅಧಿಕ ಕಲೆಕ್ಷನ್ ಮಾಡುವ ಮೂಲಕ ಉಮಾಪತಿ ಶ್ರೀನಿವಾಸ್ ಗೌಡ ಅವರ ಸಿನಿಮಾ ಜೀವನದಲ್ಲಿ ದೊಡ್ಡ ಮಟ್ಟದ ಗೆಲುವನ್ನು ನೀಡುತ್ತದೆ. ಸಿನಿಮಾ ನಿರ್ಮಾಣ ಹಾಗೂ ಕ್ವಾರಿ ಬ್ಯುಸಿನೆಸ್ ಜೊತೆಗೆ ರಾಜಕೀಯದಲ್ಲಿ ಕೂಡ ಉಮಾಪತಿಯವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನು ಸದ್ಯಕ್ಕೆ ಚಿಕ್ಕಣ್ಣ ಅವರ ಉಪಾಧ್ಯಕ್ಷ ಸಿನಿಮಾ ವನ್ನು ಉಮಾಪತಿ ನಿರ್ಮಾಣ ಮಾಡುತ್ತಿದ್ದಾರೆ.

ಕೆಲವು ಸಮಯಗಳ ಹಿಂದಷ್ಟೇ ರಾಕಿಂಗ್ ಸ್ಟಾರ್ ಯಶ್(Yash) ಅವರಿಗೂ ಕೂಡ ತಾವು ಸಿನಿಮಾ ಮಾಡುವ ಬಯಕೆ ಇದೆ ಎಂಬುದನ್ನು ಹೇಳಿಕೊಂಡಿದ್ದರು. ಅದಾದ ನಂತರ ಉಮಾಪತಿ ಅದರ ಕುರಿತಂತೆ ಯಾವ ಮಾತನ್ನು ಕೂಡ ಆಡಿರಲಿಲ್ಲ. ಆದರೆ ಈಗ ಮತ್ತೆ ಯಶ್ ಅವರ ಜೊತೆಗಿನ ಸಿನಿಮಾದ ಬಗ್ಗೆ ಕೆಲವೊಂದು ವಿಚಾರಗಳನ್ನು ಉಮಾಪತಿ ಹಂಚಿಕೊಂಡಿದ್ದಾರೆ.

ಯಶ್(Yash) ಹಾಗೂ ನಮ್ಮನ್ನು ನಡುವಿನ ಸಂಬಂಧ ಚೆನ್ನಾಗಿದ್ದು ಪರಸ್ಪರ ನಾವಿಬ್ಬರು ಗೌರವವನ್ನು ಹೊಂದಿದ್ದೇವೆ. ಸಿನಿಮಾ ಮಾಡುವ ಬಯಕೆ ಬಗ್ಗೆ ಅವರಿಗೂ ಕೂಡ ತಿಳಿಸಿದ್ದೇನೆ. ಆದರೆ ಯಾವುದಕ್ಕೂ ನನ್ನ ಖಾತೆಯಿಂದ ಅವರಿಗೆ ಹಣ ವರ್ಗಾವಣೆ ಆದರೆ ಮಾತ್ರ ಅದಕ್ಕೆ ಒಂದು ತೂಕ ಇರುತ್ತದೆ ಅಂದರೆ ಅಡ್ವಾನ್ಸ್ ಹಾಕಿದರೆ ಮಾತ್ರ ಸಿನಿಮಾ ಪಕ್ಕ ಎಂಬಂತೆ ಉಮಾಪತಿ ಇಲ್ಲಿ ಹೇಳಿದ್ದಾರೆ. ದಾರಿಯಾಗಿ ಯಶ್ ಹಾಗೂ ಉಮಾಪತಿ ಕಾಂಬಿನೇಷನ್ ನಲ್ಲಿ ಮುಂದಿನ ವರ್ಷಗಳಲ್ಲಿ ನಾವು ಸೀಮಾವನ್ನಂತೂ ನಿರೀಕ್ಷೆ ಮಾಡಬಹುದಾಗಿದೆ.

Leave a Comment

error: Content is protected !!