ಸ್ನೇಹಿತರೆ ಶೂಟಿಂಗ್ ಕೆಲಸಗಳೆಲ್ಲದೆ ಬಿಡುವಿನ ಸಮಯ ಸಿಕ್ಕಾಗಲಿಲ್ಲ ಸಮಯದಲ್ಲೆಲ್ಲ ಸ್ನೇಹಿತರೊಂದಿಗೆ ಅಮೂಲ್ಯವಾದ ಸಮಯವನ್ನು ಕಳೆಯಲು ಇಚ್ಛಿಸುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಆಗಾಗ ದಟ್ಟವಾದ ಅರಣ್ಯ ಪ್ರದೇಶಗಳಿಗೆ ಸಫಾರಿ ಹೋಗುತ್ತಾರೆ, ಆಫ್ ರೋಡ್ ರೈಡಿಂಗ್ ಹಾಗೂ ಪುಣ್ಯಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುತ ಭಾರಿ ವೈರಲಾಗುತ್ತಿರುತ್ತಾರೆ. ಹೀಗಿರುವಾಗ ತಮ್ಮ ಚಿತ್ರದ ಶೂಟಿಂಗ್ ಕೆಲಸಗಳ ನಡುವೆಯೂ ದರ್ಶನ್ ಅವರು ತಮ್ಮ ಸ್ನೇಹಿತರ ಬಳಗದೊಂದಿಗೆ ಮಂಗಳೂರಿನಲ್ಲಿ ಇರುವಂತಹ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು
ಸಾಕ್ಷಾತ್ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದಕ್ಕೆ ಪಾತ್ರರಾಗಿದ್ದಾರೆ. ದೇವಸ್ಥಾನದ ಪೂಜಾ ಕೈಂಕರ್ಯಗಳನ್ನೆಲ್ಲ ಮುಗಿಸಿಕೊಂಡು ಹೊರ ಬರುತ್ತಿದ್ದಂತಹ ಸಮಯದಲ್ಲಿ ದರ್ಶನ್ ಮತ್ತು ಗೆಳೆಯರು ಬಿಳಿ ಬಣ್ಣದ ಪಂಚೆ ಹಾಗೂ ಶಲ್ಯವನ್ನು ಧರಿಸಿ ಮೆಟ್ಟಿಲುಗಳ ಮೇಲೆ ನಿಂತು ಫೋಟೋಗೆ ಪೋಸ್ ನೀಡಿದ್ದು ಸದ್ಯ ಈ ಫೋಟೋ ನೋಡುಗರನ್ನು ಆಕರ್ಷಿಸುತ್ತಿದೆ. ಎಲ್ಲರೂ ಒಂದೇ ಭಂಗಿಯಲ್ಲಿ ನಿಂತು ಫೋಟೋ ತಗಿಸಿಕೊಂಡಿದ್ದು ದರ್ಶನ್ ಅವರು ಸ್ನೇಹಿತರ ಮಧ್ಯೆ ನಿಂದು ಆಕರ್ಷಣೀಯ ಬಿಂದುವಾಗಿದ್ದಾರೆ.
ರಾದನಾ ರಾಮ್ ಅವರೊಂದಿಗೆ ಕಾಟೇರ ಸಿನಿಮಾದ ಮೂಲಕ ಕಳೆದ ಬಾರಿ ತೆರೆಗಪ್ಪಳಿಸಿದಂತಹ ದರ್ಶನ್ ತಮ್ಮ ಮನೋಜ್ಙ ನಟನೆ ಹಾಗೂ ಅದ್ಭುತವಾದ ಸಂದೇಶವಿರುವ ಸಿನಿಮಾದ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದರು ಸಿನಿಮಾ ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು ಕಂಡು ಬ್ಲಾಕ್ಬಸ್ಟರ್ ಹಿಟ್ ಪಟ್ಟಿಗೆ ಸೇರಿದೆ. ಇದಾದ ನಂತರ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಮುಂದಿನ ಸಿನಿಮಾದ ಕುರಿತು ಅಪ್ಡೇಟ್ ನೀಡಿರುವಂತಹ ದರ್ಶನ್
ಮಿಲನ ಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಡೆವಿಲ್ ಸಿನಿಮಾದ ಮೂಲಕ ಸ್ಟೈಲ್ ಐಕಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಫಸ್ಟ್ ಲುಕ್ ಪೋಸ್ಟರ್
ಬಿಡುಬಿಡುಗಡೆಯಾಗಿದ್ದು ಫೋಟೋದಲ್ಲಿ ದರ್ಶನ್ ಕೆಂಪು ಬಣ್ಣದ ಸೂಟ್ ಧರಿಸಿ ವಿಶೇಷವಾದ ಹೇರ್ ಸ್ಟೈಲ್ ಮಾಡಿಸಿಕೊಂಡು ಬಹಳ ಹ್ಯಾಂಡ್ಸಮ್ ಆಗಿ ಮಿಂಚಿದ್ದು, ಈ ವರ್ಷ ಮತ್ತೊಮ್ಮೆ ತಮ್ಮ ಪ್ರೀತಿಯ ಡಿ ಬಾಸ್ ಅವರನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಹಾತೊರೆಯುತ್ತಿದ್ದಾರೆ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ