ಅಂತು ಇಂತೂ ಕೊನೆಯ ದಿನ ತಲುಪಿದ ಪಾರು ಸೀರಿಯಲ್, ಪಾರು ಧಾರವಾಹಿ ತಂಡದ ಸುಂದರ ಫೋಟೋಗಳು!

ಸ್ನೇಹಿತರೆ ಕಳೆದ ಹಲವು ವರ್ಷಗಳಿಂದ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿದ್ದ ಪಾರು ಸೀರಿಯಲ್(Paaru serial) ಕೊನೆಗೂ ಅಂತ್ಯಗೊಳ್ಳುತ್ತಿದೆ. ಶೂಟಿಂಗ್ನ ಕೊನೆ ದಿನದ ಫೋಟೋಗಳನ್ನು ಹಂಚಿಕೊಂಡ ಕಲಾವಿದರು ಭಾವುಕವಾದ ಸಂದೇಶಗಳನ್ನು ಬರೆಯುತ್ತಾ ತಮ್ಮ ಹಾಗೂ ಪಾರು ತಂಡದ ಪಯಣ ಹೇಗಿತ್ತು ಎಂಬುದನ್ನು ವರ್ಣಿಸ ತೊಡಗಿದ್ದಾರೆ. ಸದ್ಯ ಈ ಫೋಟೋಗಳು ಭಾರಿ ವೈರಲ್ ಆಗುತ್ತಾ ನೆಟ್ಟಿಗರ ಆಕರ್ಷಣೆಗೆ ಗುರಿಯಾಗಿದ್ದು ಹಲವರು ತಾವು ಮುಂದಿನ ದಿನಮಾನಗಳಲ್ಲಿ ಪಾರು ಸೀರಿಯಲ್ ಅನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೇವೆ ಎಂದು ತಿಳಿಸುತ್ತಾ ಕಮೆಂಟ್ ಹಾಕ ತೊಡಗಿದ್ದಾರೆ.

ಹೌದು ಗೆಳೆಯರೇ ಹಿಟ್ಲರ್ ಕಲ್ಯಾಣ(Hitler kalyana) ಖ್ಯಾತಿಯ ನಟ ದಿಲೀಪ್ ರಾಜ್ ಅವರ ಪತ್ನಿ ಶ್ರೀ ವಿದ್ಯಾ ಅವರ ನಿರ್ಮಾಣದಲ್ಲಿ ಮೂಡಿ ಬಂದಂತಹ ಈ ಧಾರಾವಾಹಿ ಮೊದಲ ದಿನದಿಂದ ಹಿಡಿದು ಕೊನೆಯ ದಿನದವರೆಗೂ ಅದ್ಭುತ ಟಿ ಆರ್ ಪಿ ಪಡೆಯುತ್ತಾ ಯಶಸ್ವಿಯಾಗಿ ಸಾಗುತ್ತಿತ್ತು. ಪ್ರತಿದಿನ ಒಂದಲ್ಲ ಒಂದು ತಿರುವುಗಳನ್ನು ಪಡೆದುಕೊಳ್ಳುತ 2018 ರಿಂದ 2024ರ ಯಶಸ್ವಿಯಾಗಿ ಮೂಡಿ ಬಂದಂತಹ ಈ ಧಾರಾವಾಹಿಗಳಿಗೆ ಅಪ್ಪಟ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ ಎಂದರೆ ತಪ್ಪಾಗಲಾರದು.

ಎಂತಹ ಪಾತ್ರ ನೀಡಿದರು ಲೀಲಾಜಾಲವಾಗಿ ಅಭಿನಯಿಸುವಂತಹ ಕಲಾವಿದರು ಟೆಕ್ನಿಶನ್ಗಳು ಕ್ಯಾಮೆರಾ ಮ್ಯಾನ್ ಗಳು ಹಾಗೂ ನಿರ್ದೇಶಕ ನಿರ್ಮಾಪಕರೆಲ್ಲರೂ ತಮ್ಮ ನೂರರಷ್ಟು ಶ್ರಮವನ್ನು ಈ ಧಾರಾವಾಹಿಯ ಮೇಲೆ ಹರಿಸಿ ಯಶಸ್ವಿಯಾಗುವ ರೀತಿ ನೋಡಿಕೊಂಡರು. ಇದೀಗ ಪಾರು ಸೀರಿಯಲ್ ಅಂತ್ಯಗೊಂಡಿದ್ದು ಒಂದು ಗಂಟೆಯ ಮಹಾಸಂಚಿಕೆಯಲ್ಲಿ ಕ್ಲೈಮಾಕ್ಸ್ ಸೀನ್ ಗಳನ್ನು ಪ್ರಸಾರ ಮಾಡಲಾಗುತ್ತದೆ.

ಸೀರಿಯಲ್ ಮುಗಿಯುವ ದಿನದಂದು ಪಾರು ಸೀರಿಯಲ್ನ ಕಲಾವಿದರಾದ ವಿನಯ ಪ್ರಸಾದ್, ಶರತ್ ಪ್ರದ್ಮನಾಭನ್, ಪವಿತ್ರ ಬಿ ನಾಯಕ್, ಸಿದ್ದು ಮೂಲಿಮನಿ, ಮೋಕ್ಷಿತಾ ಪೈ, ನಾಗೇಂದ್ರ ಶಾ, ಸಿತಾರಾ ಹಾಗೂ ಎಸ್ ನಾರಾಯಣ್ ಸೇರಿದಂತೆ ಹಲವು ಕಲಾವಿದರು ಒಟ್ಟಿಗೆ ಗ್ರೂಪ್ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಈ ಎಲ್ಲ ಸುಂದರ ಚಿತ್ರಣಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಮಿಸ್ ಯು ಪಾರು ತಂಡ ಎಂಬ ಶೀರ್ಷಿಕೆ ಬರೆದಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!