Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಸಾಕಷ್ಟು ವಿವಾದಾತ್ಮಕ ವಿಚಾರಗಳಲ್ಲಿ ಸಿಲುಕಿಕೊಂಡಿದ್ದು ಕಾಣಿಸಿಕೊಂಡಿವೆ. ಇದೇ ಕಾರಣದಿಂದಾಗಿ ಮಾಧ್ಯಮಗಳಿಂದಲೂ ಕೂಡ ಅಘೋಷಿತ ಬಹಿಷ್ಕಾರಕ್ಕೆ ದರ್ಶನ್(Darshan) ರವರು ಒಳಗಾಗಿದ್ದಾರೆ.
ಕೆಲವು ವರ್ಷಗಳ ಹಿಂದಷ್ಟೇ ನಿಮಗೆಲ್ಲರಿಗೂ ತಿಳಿದಿರಬಹುದು ಮೈಸೂರಿನಲ್ಲಿ ಮಾಧ್ಯಮದವರನ್ನು ತಮ್ಮ ಫಾರ್ಮ್ ಹೌಸ್ ಗೆ ಕರೆದಿದ್ದ ಸಂದರ್ಭದಲ್ಲಿ ಮಾಧ್ಯಮದವರಿಗೆ ಅವಾ’ಚ್ಯ ಶಬ್ದಗಳಿಂದ ದರ್ಶನ್ ರವರು ಬೈದಿದ್ದ ಆಡಿಯೋ ವೈರಲ್ ಆದ ಮೇಲೆ ಕನ್ನಡದಲ್ಲಿ ಇರುವಂತಹ ಎಲ್ಲಾ ಮಾಧ್ಯಮಗಳು ಕೂಡ ದರ್ಶನ್(Darshan) ರವರ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎನ್ನುವ ಆಲಿಖಿತ ನಿಯಮವನ್ನು ಬರೆದುಕೊಂಡಿದ್ದರು.
ಇದಾದ ನಂತರದಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಯಾವುದೇ ಸಿನಿಮಾಗಳ ಪ್ರಚಾರವನ್ನು ಕೂಡ ಮಾಡುವಂತಹ ಕಾರ್ಯಕ್ರಮಗಳನ್ನು ಕನ್ನಡದ ಮಾಧ್ಯಮಗಳು ಇದುವರೆಗೂ ಪ್ರಸಾರ ಮಾಡಿಲ್ಲ. ಆದರೆ ಈಗ ವಿಚಿತ್ರ ಎನ್ನುವಂತೆ ದರ್ಶನ್ ರವರ ಜನ್ಮದಿನದ ಕವರೇಜ್ ಅನ್ನು ಮಾಡಲು ಹಾಗೂ ಅವರ ಸಂದರ್ಶನವನ್ನು ಪಡೆಯಲು ನ್ಯಾಷನಲ್ ಚಾನೆಲ್ ಒಂದು ಬಂದಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಹೌದು ಇಂಡಿಯಾ ಟುಡೆ ಸಮೂಹ ಸಂಸ್ಥೆಗಳ ಆಜ್ ತಕ್(Aaj Tak) ಟಿವಿ ಚಾನೆಲ್ ಅನ್ನುವರು ಬರ್ತಡೆ ದಿನದಂದು ದರ್ಶನ್ ರವರ ಸಂದರ್ಶನವನ್ನು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು ಕನ್ನಡದ ಮಾಧ್ಯಮಗಳು ದರ್ಶನ್(Darshan) ರವರನ್ನು ಕಡೆಗಣಿಸಿದ್ದರೇನು ನ್ಯಾಷನಲ್ ನ್ಯೂಸ್ ಚಾನೆಲ್ ಗಳು ಇದೇ ಅಲ್ವಾ ಎಂಬುದಾಗಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.