Darshan Thoogudeepa: ವಿವಾದಗಳ ಮೇಲೆ ವಿವಾದ. ಬರ್ತಡೇ ದಿನಾನೇ ಡಿಬಾಸ್ ಮಾಡಿದ್ದೇನು ಗೊತ್ತಾ? ದಾಖಲಾಯ್ತು ಕೇಸ್.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯುಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಒಂದು ಮಾತನ್ನು ಹೇಳಿದ್ದರು ಈಗ ಅವರ ಜೀವನದಲ್ಲಿ ಕೂಡ ಅದೇ ನಡೆಯುತ್ತಿದೆ. ನೆಗೆಟಿವ್ವೋ ಪಾಸಿಟಿವ್ವೋ ಸುದ್ದಿಯಲ್ಲಂತೂ ನಾವು ಇದ್ದೇ ಇರ್ತೀವಿ ಎಂಬುದಾಗಿ ಹೇಳಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೇವಲ ನಕರತ್ಮಕ ವಿಚಾರಗಳಿಗಾಗಿ ಮಾತ್ರ ಡಿ ಬಾಸ್(Dboss) ಸುದ್ದಿ ಆಗುತ್ತಿದ್ದಾರೆ.

ಹೌದು ಗೆಳೆಯರೇ, ಹೊಸಪೇಟೆಯಲ್ಲಿ ನಡೆದಂತಹ ಚಪ್ಪಲಿ ಎಸೆದ ಪ್ರಕರಣ ನಂತರ ದರ್ಶನ್ ಅವರ ಕೆಲವೊಂದು ಹೇಳಿಕೆಗಳು ಮತ್ತು ಇತ್ತೀಚಿಗಷ್ಟೇ ಡಿ ಬಾಸ್ ರವರ ಬರ್ತಡೇ ಸಂದರ್ಭದಲ್ಲಿ ಮೇಘ ಶೆಟ್ಟಿ(Megha Shetty) ಅವರು ವಿಡಿಯೋ ಮಾಡಿರುವ ಹಿನ್ನೆಲೆಯಲ್ಲಿ ಅವರ ಪತ್ನಿ ನೀಡಿರುವ ಹೇಳಿಕೆಗಳು ಸೇರಿದಂತೆ ಹಲವಾರು ವಿಚಾರಗಳು ಡಿ ಬಾಸ್ ರವರ ವಿರುದ್ಧವಾಗಿಯೇ ಸದ್ದು ಮಾಡುತ್ತಿವೆ. ಅಭಿಮಾನಿಗಳಲ್ಲಿಯೂ ಕೂಡ ಒಂದಲ್ಲ ಒಂದು ಸಮಯದಲ್ಲಿ ಇವುಗಳು ಬೇಸರವನ್ನು ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆದರೆ ಅದಕ್ಕೆ ಈಗ ಮತ್ತೊಂದು ನಕಾರಾತ್ಮಕ ಸುದ್ದಿ ಸೇರ್ಪಡೆಯಾಗಿದೆ. ಹೌದು ಗೆಳೆಯರೇ ಮಾಧ್ಯಮ ಮೂಲದ ವ್ಯಕ್ತಿಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರ ಬರ್ತಡೆ ದಿನ ಕ್ಯಾಮರಾದಲ್ಲಿ ಚಿತ್ರೀಕರಣ ಮಾಡಲು ಬಂದಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ದರ್ಶನ್ ಅವರ ಬಾಡಿಗಾರ್ಡ್ಗಳು ಹಾಗೂ ಕೆಲವೊಂದು ಅಭಿಮಾನಿಗಳು ಅವರ ಮೇಲೆ ಹ’ಲ್ಲೆ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಅವರು ಪೊಲೀಸ್ ಠಾಣೆಗೆ ಹೋಗಿ ದೂರನ್ನು ನೀಡಲು ಪ್ರಯತ್ನಪಟ್ಟರು ಕೂಡ ಪೊಲೀಸ್ ಠಾಣೆಯಲ್ಲಿ ಇದ್ದವರು ಸರಿಯಾಗಿ ಪ್ರತಿಸ್ಪಂದಿಸಲಿಲ್ಲ ಗೊಂದಲ ಮಯವಾದಂತಹ ವಾತಾವರಣವನ್ನು ಸೃಷ್ಟಿಸಿದ್ದಾರೆ ಎಂಬುದಾಗಿ ಹ’ಲ್ಲೆಗೊಳಗಾದಂತಹ ವ್ಯಕ್ತಿಗಳು ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರ ಮನೆಯ ಪಕ್ಕದಲ್ಲಿಯೇ ನಮ್ಮ ಬೈಕ್ ಅನ್ನು ಪಾರ್ಕ್ ಮಾಡಿದ್ದೆವು. ಆದರೆ ಈಗ ಅದನ್ನು ತರಲು ಕೂಡ ಭಯವಾಗುತ್ತಿದೆ ಎಂಬುದಾಗಿ ತಮ್ಮ ಕುಟುಂಬಕ್ಕೂ ಕೂಡ ಅವರಿಂದ ಅಪಾಯವಿದೆ ಎಂದು ಹೇಳುತ್ತಿದ್ದಾರೆ. ಇಂತಹ ಮಾಹಿತಿಗಳು ನಿಜಕ್ಕೂ ಕೂಡ ಕನ್ನಡ ಚಿತ್ರರಂಗದ ನಟರೊಬ್ಬರ ಬಗ್ಗೆ ಬರುತ್ತಿರುವುದು ಬೇಸರದ ವಿಚಾರವಾಗಿದೆ.

Leave a Comment

error: Content is protected !!