Dboss: ಡಿ ಬಾಸ್ ನಟನೆಯ ಕಾಟೇರ ಸಿನಿಮಾದ ಮಾಸ್ ಡೈಲಾಗ್ ಲೀಕ್! ಕೇಳಿದ್ರೆ ನೀವು ಕೂಡ ವಿಸಲ್ ಹೊಡಿತೀರಾ!

Kaatera Dialogues ರಾಬರ್ಟ್ ಸಿನಿಮಾದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಹಾಗೂ ತರುಣ್ ಸುಧೀರ್(Tharun Sudhir) ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವಂತಹ ದರ್ಶನ್ ಅವರ 56ನೇ ಸಿನಿಮಾ ಆಗಿರುವ ಕಾಟೇರದ(Kaatera) ಕುರಿತಂತೆ ಅಭಿಮಾನಿಗಳಲ್ಲಿ ಸೇರಿದಂತೆ ಸಿನಿಮಾ ಪ್ರೇಕ್ಷಕರಲ್ಲಿ ಮತ್ತು ಸಿನಿಮಾ ವಿಮರ್ಶಕರಲ್ಲಿ ಕೂಡ ಸಾಕಷ್ಟು ಕುತೂಹಲವಿದೆ.

ಯಾಕೆಂದರೆ ಈ ಸಿನಿಮಾದಲ್ಲಿ ಮಾಲಾಶ್ರೀ ಅವರ ಮಗಳು ರಾಧನರಾಮ್(Radhana Ram) ಮೊದಲ ಬಾರಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು ಈ ಸಿನಿಮಾದ ಕಥೆ ಕೂಡ ಅಂದಿನ ಕಾಲದಲ್ಲಿ ಕರ್ನಾಟಕದಲ್ಲಿ ನಡೆದಿರುವಂತಹ ರೈತ ದಂಗೆಯನ್ನು ಆಧರಿಸಿ ಮಾಡಿರುವಂತಹ ಚಿತ್ರವಾಗಿದ್ದು ಇದು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆ ಆಗಲಿದೆ ಎನ್ನುವುದಾಗಿ ಈಗಾಗಲೇ ಚಿತ್ರ ತಂಡ ಅಧಿಕೃತವಾಗಿ ಹೇಳಿಕೊಂಡಿದೆ.

ಇನ್ನು ಇತ್ತೀಚಿಗಷ್ಟೇ ಕಾಟೇರ(Kaatera) ಸಿನಿಮಾದ ಎರಡು ಮಾಸ್ ಡೈಲಾಗ್ಗಳು ಕೂಡ ಸೋರಿಕೆಯಾಗಿದ್ದು ಬನ್ನಿ ಅದರ ಕುರಿತಂತೆ ತಿಳಿದುಕೊಳ್ಳೋಣ. ಈ ಎರಡು ಮಾಸ್ ಡೈಲಾಗ್ ಗಳನ್ನು ಕೇಳಿದರೆ ಖಂಡಿತವಾಗಿ ನೀವು ಕೂಡ ಕುಳಿತಲ್ಲಿಂದ ಎದ್ದು ವಿಸಿಲ್ ಹೊಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದು.

ರೈತರ ಹೊಟ್ಟೆ ಮೇಲೆ ಹೊಡೆದಾಗ ಹೊಡೆದವರ ತಲೆ ಮಣ್ಣು ಸೇರುತ್ತೆ. ರೈತರ ಬೆವರು ಮಣ್ಣಿಗೆ ಸೇರಿದಾಗ ಹೊಟ್ಟೆ ತುಂಬುತ್ತೆ ಎನ್ನುವುದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರು ಹೇಳುವ ಡೈಲಾಗ್ ಈಗ ಲೀಕ್ ಆಗಿದ್ದು ಎಲ್ಲರೂ ಕೂಡ ಇದೆ ಡೈಲಾಗ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ಡೈಲಾಗ್ ಕೇಳಿದ ನಂತರ ನಿಮಗೇನು ಅನ್ನಿಸಿತು ಎಂಬುದನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!