Vishnuvardhan: ನಿಂತು ಹೋಗಿದ್ದ ವಿಷ್ಣುವರ್ಧನ್ ಸಿನಿಮಾ ಗೆ ಜೀವ ಕೊಡೋಕೆ ಹೊರಟ ತಮಿಳು ನಟ ಕಮಲ್ ಹಾಸನ್!

Kamal Haasan ನಟ ಕಮಲ್ ಹಾಸನ್ ರವರು ಕೇವಲ ತಮಿಳು ಚಿತ್ರರಂಗದಲ್ಲಿ(Kollywood) ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ತಮ್ಮ ನಟನೆ ಹಾಗೂ ನಿರ್ದೇಶನದ ಮೂಲಕ ದೊಡ್ಡ ಮಟ್ಟದ ಹೆಸರನ್ನು ಮಾಡಿರುವಂತಹ ಪ್ರತಿಭೆ. ಸಾಕಷ್ಟು ವರ್ಷಗಳಿಂದ ಕೂಡ ಚಿತ್ರರಂಗದಲ್ಲಿ ಲೆಜೆಂಡರಿ ಸೆಲೆಬ್ರಿಟಿಯಾಗಿ ಕಾಣಿಸಿಕೊಂಡಂತಹ ವ್ಯಕ್ತಿತ್ವ ಅವರದ್ದು.

ಇನ್ನು ಸದ್ಯಕ್ಕೆ ನಟ ಕಮಲ್ ಹಾಸನ್ ಅವರು ಕನ್ನಡ ಚಿತ್ರರಂಗದ ಖ್ಯಾತ ದಿವಂಗತ ನಟ ಆಗಿರುವಂತಹ ಸಾಹಸಸಿಂಹ ವಿಷ್ಣುವರ್ಧನ್(Vishnuvardhan) ಅವರ ಕನಸನ್ನು ಈಡೇರಿಸಲು ಹೊರಟಿದ್ದಾರೆ. ಇನ್ನು ಈ ಕನಸನ್ನು ಈಡೇರಿಸಲು ಮತ್ತೊಬ್ಬ ತಮಿಳು ನಟ ಆಗಿರುವಂತಹ ವಿಕ್ರಂ(Chiyaan Vikram) ಅವರ ಸಾಥ್ ಸಿಗಲಿದೆ ಎಂಬುದಾಗಿ ಕೂಡ ಸುದ್ದಿ ಓಡಾಡುತ್ತಿದೆ. ಹಾಗಿದ್ದರೆ ಈ ಸಿನಿಮಾದ ನಿಜವಾದ ಹಿನ್ನೆಲೆ ಏನೆಂದು ತಿಳಿಯೋಣ ಬನ್ನಿ.

1997ರ ಸಂದರ್ಭದಲ್ಲಿ ಕಮಲ್ ಹಾಸನ್(Kamal Haasan) ರವರು ತಮ್ಮ ನಿರ್ದೇಶನ ಹಾಗೂ ನಟನೆಯಲ್ಲಿ ಮರುದು ನಾಯಗಂ ಎನ್ನುವಂತಹ ಸಿನಿಮಾವನು ನಿರ್ಮಾಣ ಮಾಡಲು ಹೊರಟಿದ್ದು ಅಂದಿನ ಕಾಲಕ್ಕೆ ಆ ಸಿನಿಮಾದ ಬಜೆಟ್ 80 ಕೋಟಿಯಾಗಿತ್ತು. ಈ ಸಿನಿಮಾದಲ್ಲಿ ಕಮಲ್ ಹಾಸನ್ ಅವರ ಜೊತೆಗೆ ವಿಷ್ಣುವರ್ಧನ್ ಅವರು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಈ ಸಿನಿಮಾದ ಉದ್ಘಾಟನೆಗಾಗಿ ಇಂಗ್ಲೆಂಡಿನ ರಾಣಿ ಸೇರಿದಂತೆ ಮುಖ್ಯಮಂತ್ರಿ ಕರುಣಾನಿಧಿ ಮತ್ತು ಶಿವಾಜಿ ಗಣೇಶನ್(Shivaji Ganesan) ಕೂಡ ಉಪಸ್ಥಿತರಿದ್ದರು.

ಆದರೆ ಸಾಕಷ್ಟು ಕಾರಣಗಳಿಂದಾಗಿ ಈ ಸಿನಿಮಾ ಆ ಸಮಯದಲ್ಲಿ ಪೂರ್ತಿ ಆಗಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಸಿನಿಮಾದಲ್ಲಿ ಚಿಯಾನ್ ವಿಕ್ರಂ(Chiyaan Vikram) ಅವರನ್ನು ಹಾಕಿಕೊಂಡು ಕಮಲ್ ಹಾಸನ್ ಅವರು ಈ ಸಿನಿಮಾವನ್ನು ಮಾಡಲು ಹೊರಟಿದ್ದಾರೆ ಎನ್ನುವ ಸುದ್ದಿ ಇದ್ದು ಇದು ಯಾವಾಗ ತಯಾರಾಗುತ್ತದೆ ಎಂಬುದನ್ನು ನಾವು ಮುಂದಿನ ದಿನಗಳಲ್ಲಿ ಅವರ ಬಾಯಿಯಿಂದಲೇ ಅಧಿಕೃತವಾಗಿ ಈ ಸುದ್ದಿಗಾಗಿ ಕಾಯಬೇಕಾಗಿದೆ.

Leave a Comment

error: Content is protected !!