Kiccha Sudeep: ನರೇಂದ್ರ ಮೋದಿ ಅವರನ್ನ ಭೇಟಿ ಮಾಡೋಕೆ ಕಿಚ್ಚ ಯಾಕೆ ಹೋಗಿಲ್ಲ ಗೊತ್ತಾ?

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Abhinaya Chakravarthy Kiccha Sudeep) ಅವರು ಜಾಗತಿಕ ಮಟ್ಟದಲ್ಲಿ ಕನ್ನಡ ಚಿತ್ರರಂಗದಿಂದ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಂತಹ ಮೊದಲ ನಾಯಕನಟ ಎಂದರೆ ತಪ್ಪಾಗಲಾರದು. ವಿದೇಶಿ ಫಿಲಂ ಫೆಸ್ಟಿವಲ್ ಗಳ ಅವಾರ್ಡ್ ಗಳನ್ನು ಕೂಡ ಪಡೆದಿರುವಂತಹ ಅತ್ಯದ್ಭುತ ಪ್ರತಿಭೆ ಇರುವಂತಹ ನಟ.

ಇನ್ನು ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರಬಹುದು ರಾಜ ಭವನದಲ್ಲಿ ಪ್ರಧಾನಿ ಮೋದಿ(Modi) ಅವರಿಂದ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಾಗಿರುವ ರಾಕಿಂಗ್ ಸ್ಟಾರ್ ಯಶ್(Yash) ರಿಷಬ್ ಶೆಟ್ಟಿ(Rishab Shetty) ಶ್ರದ್ಧಾ ವಿಜಯ್ ಚಿರಗಂದೂರು ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ಅನಿಲ್ ಕುಂಬಳೆ ಜಾವಗಲ್ ಶ್ರೀನಾಥ್ ವೆಂಕಟೇಶ್ ಪ್ರಸಾದ್ ಮಯಾಂಕ್ ಅಗರ್ವಾಲ್ ಮನೀಶ್ ಪಾಂಡೆ ಅವರಿಗೂ ಕೂಡ ಆಹ್ವಾನ ಇತ್ತು.

ಚಿತ್ರರಂಗದಲ್ಲಿ ಇಷ್ಟೆಲ್ಲ ಸಾಧನೆ ಮಾಡಿರುವ ಕಿಚ್ಚ ಸುದೀಪ್ ಅವರಿಗೆ ಯಾಕೆ ಆಹ್ವಾನ ಇರಲಿಲ್ಲ ಎಂಬುದಾಗಿ ಎಲ್ಲರಲ್ಲೂ ಕೂಡ ಕಾಡುತ್ತಿತ್ತು. ಆದರೆ ಇದರ ಹಿಂದಿರುವ ನಿಜವಾದ ಕಾರಣವನ್ನು ಸ್ವತಹ ಕಿಚ್ಚ ಸುದೀಪ್ ಅವರೇ ಬಹಿರಂಗಪಡಿಸಿದ್ದಾರೆ. ಹೌದು ಮಿತ್ರರೇ, ಪ್ರಧಾನಿ ಮೋದಿ ಅವರ ಕಡೆಯಿಂದ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರಿಗೂ ಕೂಡ ಆಹ್ವಾನ ಇತ್ತು ಆದರೆ ಕೆಲವು ಕಾರಣಗಳಿಂದ ಅಲ್ಲಿಗೆ ಹೋಗಲು ಕಿಚ್ಚ ಸುದೀಪ್ ಅವರಿಗೆ ಸಾಧ್ಯವಾಗಲಿಲ್ಲ. ಆ ಕಾರಣಗಳೇನು ಎಂಬುದನ್ನು ತಿಳಿಯೋಣ ಬನ್ನಿ.

ಪ್ರಧಾನಿ ಮೋದಿ ಅವರ ಕಚೇರಿಯಿಂದ ಎಲ್ಲರಂತೆ ಕಿಚ್ಚ ಸುದೀಪ್(Kiccha Sudeep) ಅವರಿಗೂ ಕೂಡ ಆಹ್ವಾನವಿತ್ತು. ಅವರ ಆಹ್ವಾನಕ್ಕೆ ಕಿಚ್ಚ ಸುದೀಪ್ ಕೂಡ ಧನ್ಯವಾದಗಳನ್ನು ತಿಳಿಸಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರಿಗೆ ಕೊಂಚಮಟ್ಟಿಗೆ ಜ್ವರ ಹಾಗೂ ಟೆಂಪರೇಚರ್ ಹೆಚ್ಚಾಗಿತ್ತು. ಪ್ರಧಾನಿಗಳ ಕಚೇರಿಯಲ್ಲಿ ಪ್ರೋಟೋಕಾಲ್ ಇದ್ದ ಹಿನ್ನೆಲೆಯಲ್ಲಿ ಕೆಲವೊಂದು ಪರೀಕ್ಷೆಗಳನ್ನು ಮಾಡಬೇಕಾಗಿತ್ತು ಅದು ನನಗೆ ಅಷ್ಟೊಂದು ಕಂಫರ್ಟ್ ಅನಿಸಿರಲಿಲ್ಲ ಹೀಗಾಗಿ ಅವರಿಗೆ ಕರೆ ಮಾಡಿ ತಿಳಿಸಿದೆ ಎಂಬುದಾಗಿ ಕಿಚ್ಚ ಸುದೀಪ್ ಹೇಳಿದ್ದಾರೆ.

Leave a Comment

error: Content is protected !!