Kiccha Sudeep: ಈ ಸಲ ಕಪ್ ನಮ್ದೇ ಅನ್ನೋದನ್ನ ಮೊದ್ಲು ಬಿಡಿ ಎಂದು ಮೀಡಿಯಾದವರಿಗೆ ಖಡಕ್ ಆಗಿ ವಾರ್ನಿಂಗ್ ಕೊಟ್ಟ ಕಿಚ್ಚ!

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಶ್ರೇಷ್ಠ ನಟರಲ್ಲಿ ಒಬ್ಬರಾಗಿದ್ದಾರೆ‌. ಕಿಚ್ಚ ಸುದೀಪ್ ಅವರ ಅದ್ಭುತ ನಟನೆ ಹಾಗೂ ಕಂಚಿನ ಕಂಠಕ್ಕೆ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಇಂದಿನ ಕಾಲದ ನಟರಲ್ಲಿ ಅಭಿಮಾನಿಗಳಿಂದ ದೇವರಂತೆ ಪೂಜಿಸಿಕೊಳ್ಳುವಂತಹ ಕೆಲವೇ ಕೆಲವು ಬೆರಳೆಣಿಕೆಯ ನಟರಲ್ಲಿ ಕಿಚ್ಚ ಸುದೀಪ್ ಕೂಡ ಒಬ್ಬರಾಗಿದ್ದಾರೆ ಎನ್ನುವುದು ಪ್ರತಿಯೊಬ್ಬರೂ ಕೂಡ ಹೆಮ್ಮೆ ಪಡಬೇಕಾದ ವಿಚಾರ.

ಇನ್ನು ಕಿಚ್ಚ ಸುದೀಪ್ ಅವರು ಕೇವಲ ನಾಯಕ ನಟನಾಗಿ ಮಾತ್ರವಲ್ಲದೆ ಕಲಾವಿದನಾಗಿ ನಿರ್ಮಾಪಕ ನಿರ್ದೇಶಕನಾಗಿ ಮಾತ್ರವಲ್ಲದೆ ಕಿರುತೆರೆಯ ನಿರೂಪಕನಾಗಿ ಒಬ್ಬ ಒಳ್ಳೆಯ ಕುಕ್ ಆಗಿ ಕಿವಿಗಳು ಇಂಪಾಗುವಂತೆ ಹಾಡುವ ಸಂಗೀತಗಾರನಾಗಿ ಪ್ರೊಫೆಷನಲ್ ಕ್ರಿಕೆಟರ್ಸ್ ಕೂಡ ನಾಚುವಂತಹ ಉತ್ತಮ ಕ್ರಿಕೆಟರ್ ಆಗಿಯೂ ಕೂಡ ಸರ್ವಾಂಗೀಣ ಪ್ರತಿಭೆಯನ್ನು ತೋರ್ಪಡಿಸುತ್ತಾರೆ.

Abhinaya Chakravarthy Kiccha Sudeep

ಯಾವುದೇ ಕ್ಷೇತ್ರವಿರಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಆ ಕ್ಷೇತ್ರದಲ್ಲಿ ಪ್ರಭುತ್ವವನ್ನು ಸಾಧಿಸುತ್ತಾರೆ. ಇನ್ನು ಸದ್ಯಕ್ಕೆ ಸಿಸಿಎಲ್ ಹಾಗೂ ಕೆಸಿಸಿ ಕ್ರಿಕೆಟ್ ಟೂರ್ನಮೆಂಟ್ ಗಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ತಂಡದೊಂದಿಗೆ ಸಿದ್ಧವಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಮೀಡಿಯಾದವರು ಕೇಳಿರುವ ಒಂದು ಪ್ರಶ್ನೆಗೆ ಕಿಚ್ಚ ಸುದೀಪ್ ತಮಾಷೆಯಾಗಿ ಉತ್ತರ ನೀಡಿದ್ದಾರೆ.

ನಿಮ್ಮ ತಂಡ ಸ್ಟ್ರಾಂಗ್ ಆಗಿದೆ ಈ ಬಾರಿ ಖಂಡಿತವಾಗಿ ನೀವೇ ಕಪ್ ಗೆಲ್ಲಬಹುದಲ್ಲವೇ ಸರ್ ಎಂಬುದಾಗಿ ಕಿಚ್ಚ ಸುದೀಪ್(Kiccha Sudeep) ಅವರನ್ನು ಮೀಡಿಯಾದವರು ಕೇಳುತ್ತಾರೆ. ಆಗ ಕಿಚ್ಚ ಸುದೀಪ್ ಅವರು ಈ ಸಲ ಕಪ್ ನಮ್ಮದೇ ಎನ್ನುವುದನ್ನು ಬಿಟ್ಟುಬಿಡಿ ಹೀಗೆ ಹೇಳಿ ಆರ್‌ಸಿಬಿ ಅವರು ಇನ್ನೂ ಕೂಡ ಕಪ್ಪು ಗೆದ್ದಿಲ್ಲ ಎಂಬುದಾಗಿ ತಮಾಷೆಯ ವಾರ್ನಿಂಗ್ ನೀಡಿದ್ದಾರೆ. ಈಗಾಗಲೇ ಕಿಚ್ಚ ಸುದೀಪ್ ನೇತ್ರತ್ವದ ಕರ್ನಾಟಕ ಬುಲ್ಡೋಜರ್ಸ್(Karnataka Bulldozers) ತಂಡ ಈ ಬಾರಿ ಸಿಸಿಎಲ್ ಕಪ್ ಗೆಲ್ಲಲು ಸಿದ್ಧವಾಗಿ ನಿಂತಿದೆ.

Leave a Comment

error: Content is protected !!