ಮಧ್ಯ ರಾತ್ರಿ ಕಾಳಿ ನದಿ ಹತ್ತಿರದ ಬೆಟ್ಟವನ್ನು ಹತ್ತಿ ಅಪ್ಪು ಅಶ್ವಿನಿ ಗೆ ಫೋನ್ ಕಾಲ್ ಮಾಡಿ ನೀನು ಇಲ್ಲಿಗೆ ಬರಲೇ ಬೇಕು ಅಂತ ಹಠ ಹಿಡಿದಿದ್ದು ಏಕೆ ಗೊತ್ತಾ?

ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಸಿನಿಮಾ ಆಗಿರುವ ಗಂಧದಗುಡಿ ನಾಳೆಯಿಂದ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆ ಕಾಣಲಿದೆ. ನಿಜಕ್ಕೂ ಕೂಡ ಇದೊಂದು ಭಾವನಾತ್ಮಕ ಕ್ಷಣವಾಗಿರಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಮುಂದೆ ಯಾವುದೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಿನಿಮಾಗಳು ಬಿಡುಗಡೆ ಆಗುವುದಿಲ್ಲ ಎನ್ನುವ ಬೇಸರ ಕೂಡ ಎಲ್ಲರಲ್ಲಿ ಇರಲಿದೆ.

ಗಂಧದ ಗುಡಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ದೊಡ್ಡ ಕನಸಾಗಿದ್ದು ಇಡೀ ಕರ್ನಾಟಕದ ವನ್ಯ ಸಂಪತ್ತನ್ನು ದೊಡ್ಡ ಪರದೆ ಮೇಲೆ ತೋರಿಸಲು ಕರುನಾಡಿನ ರಾಜಕುಮಾರ ಹೊರಟಿದ್ದಾರೆ. ಈಗಾಗಲೇ ಪ್ರಿ ರಿಲೀಸ್ ಕಾರ್ಯಕ್ರಮ ಕೂಡ ಪುನೀತ ಪರ್ವ ಎನ್ನುವ ಹೆಸರಿನಲ್ಲಿ ಅದ್ದೂರಿಯಾಗಿ ನಡೆದಿದೆ. ಭಾರತೀಯ ಚಿತ್ರರಂಗದ ಖ್ಯಾತ ಗಣ್ಯರೆಲ್ಲಾ ಆ ಕಾರ್ಯಕ್ರಮಕ್ಕೆ ಬಂದಿದ್ದರು. ಎಲ್ಲರೂ ಕೂಡ ಸಿನಿಮಾ ಗೆಲ್ಲಲಿ ಎಂಬುದಾಗಿ ಶುಭ ಹಾರೈಸಿದ್ದಾರೆ.

ಇನ್ನು ಸದ್ಯಕ್ಕೆ ಪಿ ಆರ್ ಕೆ ಆಡಿಯೋ ಯೂಟ್ಯೂಬ್ ಚಾನಲಲ್ಲಿ ಸಂತೋಷ್ ಆನಂದ್ ರಾಮ್ ಅವರು ಅಶ್ವಿನಿ ಪುನೀತ್ ರಾಜಕುಮಾರ್ ಅವರ ಜೊತೆಗೆ ನಡೆಸಿರುವ ಸಂದರ್ಶನದ ವಿಡಿಯೋ ಕೂಡ ಬಿಡುಗಡೆಯಾಗಿದ್ದು ಅಲ್ಲಿ ಒಂದು ದಿನ ಪುನೀತ್ ರಾಜಕುಮಾರ್ ಅವರು ಕಾಳಿ ನದಿಯ ಹತ್ತಿರ ಇರುವ ಬೆಟ್ಟದ ಮೇಲೆ ಹತ್ತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಕರೆ ಮಾಡಿ ನಾಳೆಗೆ ಬರಲೇಬೇಕು ಎಂಬುದಾಗಿ ಫೋನ್ ಮಾಡಿದ್ದರಂತೆ. ಹೌದು ಗೆಳೆಯರೇ, ಆ ಊರಿನಲ್ಲಿ ಎಲ್ಲೂ ಕೂಡ ನೆಟ್ವರ್ಕ್ ಸಿಗುತ್ತಿರಲಿಲ್ಲವಂತೆ ಅದಕ್ಕಾಗಿ ಬೆಟ್ಟ ಹತ್ತಿ ಅಶ್ವಿನಿ ಅವರಿಗೆ ಕರೆ ಮಾಡಿ ನಿನಗೋಸ್ಕರ ನಾನು ಫೋನ್ ಮಾಡುವುದಕ್ಕೆ ಈ ಬೆಟ್ಟವನ್ನು ಹತ್ತಿದ್ದೇನೆ ನೀನು ನಾಳೆಗೆ ಬರಲೇಬೇಕು ಎಂಬುದಾಗಿ ಹೇಳಿದ್ದರಂತೆ.

ಅದಾದ ನಂತರವೇ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಆ ಸ್ಥಳಕ್ಕೆ ಬಂದು ಅಪ್ಪು ಹಾಗು ಅಮೋಘವರ್ಷ ಸೇರಿದಂತೆ ತಂಡದೊಂದಿಗೆ ಆ ವಿಶೇಷವಾದ ಪಾಯಿಂಟ್ ಗೆ ಟ್ರಕಿಂಗ್ ಹೋಗಿದ್ದರೂ ಹಾಗೂ ಅಲ್ಲಿಯೇ ಊಟವನ್ನು ಕೂಡ ಸವಿದು ಬಂದಿದ್ದರು ಎಂಬ ಸವಿ ಸವಿ ನೆನಪುಗಳನ್ನು ಈ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಹಂಚಿಕೊಂಡಿದ್ದಾರೆ. ನಾಳೆ ಗಂಧದಗುಡಿ ಬಿಡುಗಡೆ ಆಗುತ್ತಿದ್ದು ತಪ್ಪದೇ ನಿಮ್ಮ ಕುಟುಂಬದೊಂದಿಗೆ ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ವೀಕ್ಷಿಸಿ.

Leave a Comment

error: Content is protected !!