Ragini Dwivedi: ನಟಿ ರಾಗಿಣಿ ತನ್ನ ಜೀವನದಲ್ಲಿ ನಡೆದಿರುವ ಕಹಿ ಘಟನೆಗಳನ್ನು ನೆನಪಿಸಿಕೊಂಡು ಹೇಳಿದ್ದೇನು ಗೊತ್ತಾ? ಎಲ್ಲವೂ ಬಹಿರಂಗ.

Ragini Dwivedi ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಪರಭಾಷೆ ನಟಿಯರು ಹೆಚ್ಚಾಗಿ ನಟಿಸುವಂತಹ ಕಾಲವೂ ಕೂಡ ಬಂದಿತ್ತು ಆ ಸಂದರ್ಭದಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು ನಟಿ ರಾಗಿಣಿ ದ್ವಿವೇದಿ(Ragini Dwivedi). ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ನಟನೆಯ ವೀರಮದಕರಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಾಗಿಣಿ ಮೊದಲ ಸಿನಿಮಾದಲ್ಲಿಯೇ ದೊಡ್ಡ ಮಟ್ಟದ ಯಶಸ್ಸನ್ನು ಕಾಣುತ್ತಾರೆ. ಚಿತ್ರರಂಗ ಕೂಡ ಅವರನ್ನು ಎರಡು ಕೈಗಳನ್ನು ಅಗಲಿಸಿ ಸ್ವಾಗತವನ್ನು ಕೋರುತ್ತದೆ.

ಒಂದಾದ ಮೇಲೆ ಒಂದರಂತೆ ಎಲ್ಲಾ ಸೂಪರ್ ಹಿಟ್ ನಟರ ಜೊತೆಗೆ ಕೂಡ ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನಟಿ ರಾಗಿಣಿ(Ragini) ಅತ್ಯಂತ ಕಡಿಮೆ ಸಮಯದಲ್ಲಿ ಅತ್ಯಂತ ದೊಡ್ಡ ಮಟ್ಟದ ಯಶಸ್ಸನ್ನು ಪಡೆದಂತಹ ಸ್ಟಾರ್ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಸಾಕಷ್ಟು ಆಫರ್ ಗಳು ಕೂಡ ಅವರನ್ನು ಹುಡುಕಿಕೊಂಡು ಬರುತ್ತದೆ.

ಆದರೆ ಲಾಕ್ಡೌನ್ ಸಂದರ್ಭದಲ್ಲಿ ಮಾ’ ದಕ ವಸ್ತುಗಳ ವಿಚಾರದಲ್ಲಿ ಅವರು ಜೈಲಿಗೆ ಹೋಗಿ ಬಂದಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ. ಒಟ್ಟಾರೆಯಾಗಿ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದನ್ನು ನಟಿ ರಾಗಿಣಿ ದ್ವಿವೇದಿ ಕಡಿಮೆ ಮಾಡಿದ್ದಾರೆ ಎಂದು ಕೂಡ ತಪ್ಪಾಗಲಾರದು. ಇದೇ ಸಂದರ್ಭದಲ್ಲಿ ಸಂದರ್ಶನ ಒಂದರಲ್ಲಿ ಕಾಣಿಸಿಕೊಂಡಿರುವ ರಾಗಿಣಿ(Actress Ragini) ತಮ್ಮ ಕಹಿ ಜೀವನವನ್ನು ಹಂಚಿಕೊಂಡಿದ್ದಾರೆ.

ಇಂಡಸ್ಟ್ರಿಯಲ್ಲಿ ನನ್ನನ್ನು ತುಳಿಯಲು ಸಾಕಷ್ಟು ಪ್ರಯತ್ನ ಮಾಡಿದ್ದು ಆ ಜಾಲಕ್ಕೆ ನಾನು ಸಿಲುಕಿಕೊಂಡೆ ಎಂಬುದಾಗಿ ರಾಗಿಣಿ ಹೇಳಿದ್ದಾರೆ. ಕೇವಲ ಕಹಿ ಘಟನೆಗಳು ಮಾತ್ರವಲ್ಲ ಸಿಹಿ ಘಟನೆಗಳನ್ನು ಕೂಡ ನಾವು ಜೀವನದಲ್ಲಿ ನೆನಪಿಸಿಕೊಳ್ಳಬೇಕು ಆಗಲೇ ನಮ್ಮ ಜೀವನ ಸಮತೋಲನವನ್ನು ಕಂಡುಕೊಳ್ಳಲು ಸಾಧ್ಯ ಎಂಬುದಾಗಿ ಸ್ಪೂರ್ತಿದಾಯಕ ಮಾತುಗಳನ್ನು ಕೂಡ ಈ ಸಂದರ್ಶನದ ಸಂದರ್ಭದಲ್ಲಿ ನಟಿ ರಾಗಿಣಿ ದ್ವಿವೇದಿ ಹೇಳಿಕೊಂಡಿದ್ದಾರೆ.

Leave a Comment

error: Content is protected !!