Ravichandran: ರವಿಚಂದ್ರನ್ ರವರ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಅವರ ಹಿಂದೆ ನಿಂತಿದ್ದು ಅಣ್ಣಾವ್ರು ಮಾತ್ರ. ಯಾವ ವಿಚಾರ ಗೊತ್ತಾ?

Rajkumar ರಾಜಕುಮಾರ್ ಅವರು ರವಿಚಂದ್ರನ್(Ravichandran) ರವರ ತಂದೆ ವೀರ ಸ್ವಾಮಿಯವರು ಕಟ್ಟಿ ಬೆಳೆಸಿರುವಂತಹ ಈಶ್ವರಿ ಪ್ರೊಡಕ್ಷನ್ ಸಂಸ್ಥೆಯ ಮೇಲೆ ಸಾಕಷ್ಟು ಗೌರವವನ್ನು ಇಟ್ಟುಕೊಂಡಿದ್ದರು. ವೀರ ಸ್ವಾಮಿಯವರು(Veeraswamy) ನಿರ್ಮಾಣ ಮಾಡಿರುವಂತಹ ಹಲವಾರು ಸಿನಿಮಾಗಳಲ್ಲಿ ರಾಜಕುಮಾರ್ ಅವರು ನಟಿಸಿದ್ದರು ಕೂಡ. ಹೀಗಾಗಿ ವೀರ ಸ್ವಾಮಿ ಅವರನ್ನು ಅನ್ನದಾತ ಎಂಬುದಾಗಿಯೇ ಗೌರವ ನೀಡುತ್ತಿದ್ದರು ನಮ್ಮೆಲ್ಲರ ನೆಚ್ಚಿನ ರಾಜ್

ಕೇವಲ ವೀರ ಸ್ವಾಮಿ ಅವರ ಮೇಲೆ ಮಾತ್ರವಲ್ಲದೆ ರವಿಚಂದ್ರನ್ ರವರ ಮೇಲೆ ಕೂಡ ಅಣ್ಣಾವ್ರು(Annavru) ವಿಶೇಷ ಗೌರವ ಹಾಗೂ ಪ್ರೀತಿಯನ್ನು ಹೊಂದಿದ್ದರು. ಹೀಗಾಗಿ ಹಲವಾರು ಸಮಯಗಳಲ್ಲಿ ರವಿಚಂದ್ರನ್ ರವರನ್ನು ಕೂಡ ಅಣ್ಣಾವ್ರು ಭೇಟಿ ಮಾಡಿ ಒಳ್ಳೆಯದನ್ನೇ ಹಾರೈಸುತ್ತಿದ್ದರು. ಇನ್ನು ಅದೊಂದು ಸಂದರ್ಭದಲ್ಲಿ ಮಾತ್ರ ರವಿಚಂದ್ರನ್ ರವರ ಪರವಾಗಿ ಅಣ್ಣಾವ್ರು ನಿಂತಂತಹ ರೀತಿ ನಿಜಕ್ಕೂ ಕೂಡ ಎಲ್ಲರನ್ನೂ ಬೆರಗುಗೊಳಿಸುವಂತಿತ್ತು.

90ರ ದಶಕದಲ್ಲಿ ರವಿಚಂದ್ರನ್(V Ravichandran) ರವರು ಆಡಿರುವ ಮಾತೊಂದು ಕನ್ನಡದ ವಿರುದ್ಧವಾಗಿ ಇರುವಂತಹ ಅರ್ಥವನ್ನು ಕಲ್ಪಿಸಿತು ಎನ್ನುವುದಾಗಿ ಗಾಳಿ ಸುದ್ದಿ ಹರಡಿತ್ತು. ಆ ಸಂದರ್ಭದಲ್ಲಿ ಕನ್ನಡದ ಸಂಘಟನೆಗಳು ರವಿಚಂದ್ರನ್ ಅವರ ಸಿನಿಮಾ ಜೀವನವನ್ನೇ ಮುಗಿಸಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದವು. ಆ ಸಂದರ್ಭದಲ್ಲಿ ರವಿಚಂದ್ರನ್ ರವರ ಕಷ್ಟದ ಸಂದರ್ಭದಲ್ಲಿ ಅವರ ಬೆನ್ನ ಹಿಂದೆ ಬೆಂಬಲವಾಗಿ ನಿಂತಿದ್ದು ನಮ್ಮೆಲ್ಲರ ನೆಚ್ಚಿನ ಅಣ್ಣಾವ್ರು.

ರವಿಚಂದ್ರನ್ ಅವರ ಪರವಾಗಿ ಮಾತನಾಡುತ್ತಾ ಅಣ್ಣಾವ್ರು(Rajkumar) ನನಗೆ ರವಿಚಂದ್ರನ್ ಅವರ ಬಗ್ಗೆ ತಿಳಿದಿದೆ ಅವರು ಹಾಗೆ ಮಾತನಾಡುವವರಲ್ಲ ಎಲ್ಲೋ ತಪ್ಪು ಕಲ್ಪನೆಯಾಗಿದೆ ಹೀಗಾಗಿ ಅವರನ್ನು ಕ್ಷಮಿಸಿ ಎಂಬುದಾಗಿ ಹೇಳುತ್ತಾರೆ. ರವಿಚಂದ್ರನ್ ರವರು ಕೂಡ ಕನ್ನಡ ನನ್ನ ಭಾಷೆ ಅದಕ್ಕೆ ಆಗೌರವ ತರುವಂತಹ ಮಾತನ್ನು ನಾನು ಎಂದು ಆಡಿಲ್ಲ ಆಡುವುದು ಕೂಡ ಇಲ್ಲ ಎಂಬುದಾಗಿ ಹೇಳುತ್ತಾರೆ. ಈ ಸಂದರ್ಭದಲ್ಲಿ ರವಿಚಂದ್ರನ್ ರವರ ಪರವಾಗಿ ಅಣ್ಣಾವ್ರು ನಿಂತಂತಹ ರೀತಿ ನಿಜಕ್ಕೂ ಕೂಡ ರವಿಚಂದ್ರನ್(Ravichandran ರವರಿಗೆ ಸಾಕಷ್ಟು ಸಹಾಯವನ್ನು ಮಾಡಿತ್ತು.

Leave a Comment

error: Content is protected !!