Shivanna: ಕಿಚ್ಚನ ವಿವಾದಕ್ಕೆ ಶಿವಣ್ಣನ ಪ್ರತಿಕ್ರಿಯೆ ಏನಾಗಿತ್ತು?

Shivanna ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ಕನ್ನಡ ಚಿತ್ರರಂಗದ ಲೀಡರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಕನ್ನಡ ಚಿತ್ರರಂಗದಲ್ಲಿ ಈ ವಯಸ್ಸಿನಲ್ಲಿ ಕೂಡ ಸೂಪರ್ ಸ್ಟಾರ್ ಪಟ್ಟವನ್ನು ಹೊಂದಿರುವಂತಹ ಏಕೈಕ ಕಲಾವಿದ ಸ್ಟಾರ್ ಅವರೊಬ್ಬರೇ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ತಮ್ಮ ತಂದೆ ಹಾಗೂ ಸಹೋದರನ ಲೆಗಸ್ಸಿಯನ್ನು ಮುಂದುವರಿಸಿಕೊಂಡು ಹೋಗುತ್ತಿರುವಂತಹ ಅಪ್ರತಿಮ ಕಲಾವಿದ.

ಶಿವಣ್ಣ(Shivanna) 61ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಂಡಿದ್ದು ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಿನಿಮಾಗಳನ್ನು ಹೊಂದಿರುವಂತಹ ಸ್ಟಾರ್ ನಾಯಕ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಕೇವಲ ನಟನಾಗಿ ಮಾತ್ರವಲ್ಲದೆ ಇತ್ತೀಚಿಗಷ್ಟೇ ನಿರ್ಮಾಪಕನಾಗಿ ಕೂಡ ಸಿನಿಮಾಗಳನ್ನು ನಿರ್ಮಾಣ ಮಾಡಲು ಪ್ರಾರಂಭಿಸಿ ಸಾಕಷ್ಟು ಜನರಿಗೆ ಕೆಲಸ ಸಿಗುವಂತೆ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ಇತ್ತೀಚಿಗಷ್ಟೇ ಇದೇ ಸಮಯದಲ್ಲಿ ಕಿಚ್ಚ ಸುದೀಪ್ ರವರ ವಿವಾದ ಕೂಡ ಕನ್ನಡ ಚಿತ್ರರಂಗದಲ್ಲಿ ಪ್ರತಿಧ್ವನಿಸುತ್ತಿದೆ.

ಹೌದು ಇತ್ತೀಚಿಗಷ್ಟೇ ಕಿಚ್ಚ ಸುದೀಪ್(Kiccha Sudeep) ರವರು ನಿಮಗೆಲ್ಲರಿಗೂ ತಿಳಿದಿರಬಹುದು ನಿರ್ಮಾಪಕರಿಗೆ ಹಣ ವಾಪಸು ಮಾಡಿಲ್ಲ ಎಂಬ ಆಪಾದನೆಗಳು ಕನ್ನಡ ಚಿತ್ರರಂಗದಲ್ಲಿ ಓಡಾಡುತ್ತಿದ್ದು, ಈ ವಿಚಾರ ಈಗ ಶಿವಣ್ಣ ಅವರ ಬರ್ತಡೆ ದಿನ ಅವರ ಮನೆಗೆ ಕೂಡ ತಲುಪಿದ್ದು ಮಾಧ್ಯಮದವರು ಶಿವಣ್ಣ ಅವರ ಬಳಿ ಈ ವಿಚಾರವನ್ನು ಪ್ರಸ್ತಾಪಿಸಿದ್ದು ಒಬ್ಬ ಚಿತ್ರರಂಗದ ಹಿರಿಯನಾಗಿ ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತೀರಿ ಎಂಬುದಾಗಿ ಕೇಳಿದ್ದಾರೆ.

ಇದಕ್ಕೆ ಶಿವಣ್ಣ ಪ್ರತಿಕ್ರಿಸುತ್ತಾ ಚಿತ್ರರಂಗದ ಹಿರಿಯನಾಗಿ ಎನ್ನುವುದಕ್ಕಿಂತ ಎಲ್ಲರೂ ಒಟ್ಟಿಗೆ ಬಂದರೆ ಖಂಡಿತವಾಗಿ ರಾಜಿಸಂಧಾನವನ್ನು ಮಾಡಲು ನಾನು ಸಿದ್ಧ ಎಂಬುದಾಗಿ ಹೇಳಿದ್ದಾರೆ. ಈ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಏನು ನಡೆಯಬಹುದೆಂಬುದನ್ನು ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

Leave a Comment

error: Content is protected !!