Sonu Sood: ಕಲಿಯುಗದ ಕರ್ಣ ನಟ ಸೋನುಸೂದ್ ನಮ್ಮೆಲ್ಲರ ನೆಚ್ಚಿನ ಅಪ್ಪು ಬಗ್ಗೆ ಹೇಳಿದಂತಹ ಮಾತುಗಳೇನು ಗೊತ್ತಾ?

Puneeth Rajkumar ಲಾಕ್ ಡೌನ್ ಸಂದರ್ಭದಲ್ಲಿ ನಿಮಗೆಲ್ಲಾ ನೆನಪಿರಬಹುದು ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಹಾಗಿರುವ ಸೋನು(Sonu Sood) ಅವರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಬೇರೆ ಬೇರೆ ರೀತಿಯ ವಾಹನ ವ್ಯವಸ್ಥೆಗಳು ಇಲ್ಲದೆ ಪರದಾಡುತ್ತಿದ್ದ ಎಲ್ಲಾ ಜನರಿಗೂ ಕೂಡ ವಾಹನ ವ್ಯವಸ್ಥೆಯನ್ನು ಮಾಡಿ ಅವರಿಗೆ ಸಹಾಯ ಮಾಡಿದಂತಹ ಪುಣ್ಯಾತ್ಮನಾಗಿದ್ದಾರೆ. ಪರದೇಶದಿಂದ ಇಲ್ಲಿಗೆ ಬರುವವರಿಗೂ ಕೂಡ ಹೇಗೆ ಬರುವುದು ಎಂಬುದಾಗಿ ಪರದಾಡುತ್ತಿದ್ದ ಸಂದರ್ಭದಲ್ಲಿ ತಾವೇ ಖುದ್ದಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಬರುವಂತಹ ವ್ಯವಸ್ಥೆ ಮಾಡಿಕೊಟ್ಟವರು ಸೋನು ಸೂದ್.

ಆರ್ಥಿಕ ಸಮಸ್ಯೆ ಹಾಗೂ ಆಹಾರದ ಸಮಸ್ಯೆಯಿಂದ ಲಾಕ್ ಡೌನ್ ನಲ್ಲಿ ಬಳಲುತ್ತಿದ್ದ ಸಾವಿರಾರು ಜನರಿಗೆ ಅವರಿಗೆ ಬೇಕಾದಂತಹ ಸಹಾಯವನ್ನು ಕ್ಷಿಪ್ರವಾಗಿ ಒದಗಿಸಿದ ಶ್ರೇಯ ಸೋನು ಸೂದ್ ಅವರಿಗೆ ತಲುಪುತ್ತದೆ. ನಿಜಕ್ಕೂ ಕೂಡ ಲಾಕ್ ಡೌನ್ ಸಂದರ್ಭದಲ್ಲಿ ದೇವರ ಸ್ವರೂಪದಂತೆ ಪ್ರತಿಯೊಬ್ಬ ಬಡವರಿಗೂ ಕೂಡ ಸಹಾಯ ಮಾಡಿದ ವ್ಯಕ್ತಿ ಸೋನು ಸೂದ್.

ಇನ್ನು ಕನ್ನಡದಲ್ಲಿ ಕೂಡ ಇಂತಹ ಜನಸೇವೆಯನ್ನು ಮಾಡಿರುವಂತಹ ನಟರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರು ಕೂಡ ಮೊದಲಿಗರಾಗಿ ಕಾಣಿಸಿಕೊಳ್ಳುತ್ತಾರೆ. ಅವರ ಸಿನಿಮಾ ಸಾಧನೆಗಳು ಮಾತ್ರವಲ್ಲದೆ ಅವರು ಮಾಡಿರುವಂತಹ ಜನ ಸೇವೆಗಳನ್ನು ಕೂಡ ಗುರುತಿಸಿ ಅವರಿಗೆ ಕರ್ನಾಟಕ ರಾಜ್ಯದ ಅತ್ಯುನ್ನತ ಪ್ರಶಸ್ತಿ ಪುರಸ್ಕಾರವಾಗಿರುವಂತಹ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಪುರಸ್ಕರಿಸಲಾಗಿದೆ.

ಇನ್ನು ಇತ್ತೀಚಿಗೆ ಸೋನು ಸೂದ್ ಬೆಂಗಳೂರಿನ ಕಾಲೇಜ್ ಒಂದಕ್ಕೆ ಬಂದಿದ್ದ ಸಂದರ್ಭದಲ್ಲಿ ಕೂಡ ಪುನೀತ್ ರಾಜಕುಮಾರ್ ಅವರ ಜೊತೆಗೆ ಭೇಟಿಯಾಗಿ ಮಾತುಕತೆ ಚರ್ಚೆಯನ್ನು ಮಾಡುತ್ತಿದ್ದೆ ಆದರೆ ಈಗ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರು ಎಲ್ಲೇ ಇದ್ದರೂ ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ ಎಂಬುದಾಗಿ ಭಾವನಾತ್ಮಕವಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಗ್ಗೆ ಸೋನು ಸೂದ್ ಮಾತನಾಡಿದ್ದಾರೆ. ಪ್ರತಿಯೊಂದು ಭಾಷೆಯ ಚಿತ್ರರಂಗದವರ ಸ್ನೇಹವನ್ನು ಕೂಡ ಹೊಂದಿದಂತಹ ಸ್ನೇಹಜೀವಿಯಾಗಿದ್ದರು ನಮ್ಮೆಲ್ಲರ ನೆಚ್ಚಿನ ಅಪ್ಪು(Appu).

Leave a Comment

error: Content is protected !!