Darshan Thoogudeepa: ಡಿ ಬಾಸ್ ಬಗ್ಗೆ ಇದ್ದಕ್ಕಿದ್ದಂತೆ ಉಮಾಪತಿ ಗೌಡ ನೀಡಿದ ಹೇಳಿಕೆ ಏನು ಗೊತ್ತಾ?

Umapathy Srinivas Gowda ಒಂದು ಕಾಲದಲ್ಲಿ ನಿಮಗೆಲ್ಲರಿಗೂ ಗೊತ್ತಿರಬಹುದು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಇಬ್ಬರು ಕೂಡ ಸ್ವಂತ ಒಂದೇ ತಾಯಿಯ ಇಬ್ಬರು ಮಕ್ಕಳ ಹಾಗೆ ಸಹೋದರ ರೀತಿಯಲ್ಲಿ ಇದ್ದರು. ಆದರೆ ಈಗ ಅವರಿಬ್ಬರ ನಡುವೆ ಬೆಳೆದಿರುವಂತಹ ವೈಶ್ಯಮ್ಯವನ್ನು ನೋಡಿದರೆ ಖಂಡಿತವಾಗಿ ಯಾರು ಕೂಡ ನಂಬಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ.

ಅದರಲ್ಲೂ ವಿಶೇಷವಾಗಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಉಮಾಪತಿ ಶ್ರೀನಿವಾಸಗೌಡ(Umapathy Srinivas Gowda) ಸ್ಪರ್ದಿಯಾಗಿ ಎಲೆಕ್ಷನ್ಗೆ ನಿಂತಿದ್ದಾರೆ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರು ಮಾತ್ರ ಅದೇ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ಸತೀಶ್ ರೆಡ್ಡಿ ಅವರ ಪರವಾಗಿ ಪ್ರಚಾರವನ್ನು ನಡೆಸಿದರು.

ಮೊದಲಿಗೆ ದರ್ಶನ್(Darshan) ರವರ ಬಗ್ಗೆ ಪರೋಕ್ಷವಾಗಿ ಮಾತನಾಡುತ್ತಾ ಉಮಾಪತಿ ರವರು ನಟರು ದಾನ ಮಾಡುವಂತಹ ಪ್ರತಿಯೊಂದು ಹಣ ಕೂಡ ನಿರ್ಮಾಪಕರು ನೀಡಿರುವ ಹಣದಿಂದ ಬರೋದು ಎಂಬುದಾಗಿ ಹೇಳಿದಾಗ ಇದಕ್ಕೆ ಪ್ರತಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಾವು ಕಲಾವಿದರಾಗಿ ಕೂಲಿ ಮಾಡುವುದಕ್ಕೆ ತಾನೆ ಅವರು ಹಣ ನೀಡುವುದು ಎಂಬುದಾಗಿ ಪರೋಕ್ಷವಾಗಿ ಕುಟುಕಿದ್ದರು. ಇದಕ್ಕೆ ಉಮಾಪತಿ ಈಗ ಮತ್ತೆ ಪ್ರತಿ ಉತ್ತರ ನೀಡಿದ್ದಾರೆ.

ಪರ್ಸನಲ್ ಆಗಿ ಅವರು ಹೇಳಿದ ಹಾಗೆ ನಾನು ಕೂಡ ಮಾತಾಡೋಣ ಎರಡು ನಿಮಿಷದ ಕೆಲಸ ಆದರೆ ನಾನು ಹಾಗೆ ಮಾಡುವುದಕ್ಕೆ ಹೋಗುವುದಿಲ್ಲ ಎಂಬುದಾಗಿ ಹೇಳುವ ಮೂಲಕ ಈ ಪ್ರಕರಣವನ್ನು ಇಲ್ಲಿಗೆ ಮುಕ್ತಾಯಗೊಳಿಸುವ ನಿರ್ಧಾರವನ್ನು ಅವರು ಮಾಡಿದ್ದಾರೆ. ಚುನಾವಣೆ ಮುಗಿದ ನಂತರ ಉತ್ತರ ನೀಡುವಂತಹ ನಿರ್ಧಾರವನ್ನು ಕೂಡ ಉಮಾಪತಿ ಶ್ರೀನಿವಾಸ್ ಗೌಡ(Umapathy Srinivas Gowda) ರವರು ಈ ಸಂದರ್ಭದಲ್ಲಿ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

Leave a Comment

error: Content is protected !!