Komal Kumar: ನಟ ಕೋಮಲ್ ಜೊತೆಗೆ ಮಾತನಾಡುವುದನ್ನೇ ಬಿಟ್ಟಿದ್ರಂತೆ ವಿಷ್ಣುವರ್ಧನ್! ಯಾವ ವಿಷಯಕ್ಕೆ ಗೊತ್ತಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Vishnuvardhan ಕನ್ನಡ ಚಿತ್ರರಂಗದ ಅತ್ಯಂತ ಶ್ರೇಷ್ಠ ವ್ಯಕ್ತಿತ್ವಗಳಲ್ಲಿ ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣುವರ್ಧನ್(Vishnuvardhan) ಅವರದ್ದು ಕೂಡ ಒಂದು. ಅವರು ಮಾತನಾಡುವುದು ಬೇಡ ಅವರ ಕಣ್ಣಂಚಿನ ಸನ್ನೆ ಕೂಡ ಸಾಕಷ್ಟು ಅರ್ಥಗಳನ್ನು ನೀಡುತ್ತದೆ. ಅಷ್ಟರಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ತಮ್ಮ ಸಿನಿಮಾ ನಟನೆಯ ಮೂಲಕ ಹಾಗೂ ನಿಜ ಜೀವನದ ವ್ಯಕ್ತಿತ್ವದ ಮೂಲಕ ಪ್ರಭಾವವನ್ನು ಬೀರಿದ್ದಾರೆ ನಮ್ಮೆಲ್ಲರ ನೆಚ್ಚಿನ ದಾದ(Vishnu Dada).

ಸಾಕಷ್ಟು ಗಂಭೀರವಾಗಿದ್ದರೂ ಕೂಡ ಎಲ್ಲರ ಜೊತೆಗೆ ನಗು ಮುಖದಲ್ಲಿ ಮಾತನಾಡಿಕೊಂಡಿರುತ್ತಿದ್ದ ವಿಷ್ಣುವರ್ಧನ್(Vishnuvardhan) ರವರು ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ ಹಾಗೂ ನಟ ಜಗ್ಗೇಶ್ ಅವರ ಸಹೋದರ ಆಗಿರುವಂತಹ ಕೋಮಲ್(Komal) ಅವರ ಜೊತೆಗೆ ಮಾತನಾಡುವುದನ್ನೇ ಬಿಟ್ಟಿದ್ರಂತೆ. ಅಷ್ಟಕ್ಕೂ ಯಾವ ಕಾರಣಕ್ಕಾಗಿ ವಿಷ್ಣುವರ್ಧನ್ ರವರು ಕೋಮಲ್ ರವರ ಜೊತೆಗೆ ಮಾತನಾಡುವುದನ್ನು ಬಿಟ್ಟಿದ್ದರು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಹೌದು ಇದನ್ನು ಸ್ವತಃ ಕೋಮಲ್(Komal Kumar) ಅವರೇ ಉಂಡೆನಾಮ ಸಿನಿಮಾದ ಪ್ರಚಾರದ ಕಾರ್ಯವಾಗಿ ಯುಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡುತ್ತಿರುವ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಹೌದು ಆಪ್ತರಕ್ಷಕ ಸಿನಿಮಾದ ಸಂದರ್ಭದಲ್ಲಿ ಕೋಮಲ್ ಅವರ ಬಗ್ಗೆ ವಿಷ್ಣುವರ್ಧನ್ ಅವರಿಗೆ ಕೋಪ ಇತ್ತು ಅದಕ್ಕೆ ಕಾರಣ ಮಾತಾಡ್ ಮಾತಾಡು ಮಲ್ಲಿಗೆ ಸಿನಿಮಾದ ಒಂದು ಘಟನೆ. ಆ ಸಿನಿಮಾದಲ್ಲಿ ಸರಿಯಾದ ಪಾತ್ರ ಸಿಕ್ಕಿರಲಿಲ್ಲ ಎನ್ನುವ ಕಾರಣಕ್ಕಾಗಿ ಚಿತ್ರದಿಂದ ಹೊರ ಹೋಗಿದ್ದರಂತೆ.

ಅದನ್ನೇ ಯಾರೋ ವಿಷ್ಣುವರ್ಧನ್ ಅವರ ಬಳಿ ಹೋಗಿ ಕೋಮಲ್ ಅವರಿಗೆ ಕೊಬ್ಬು ಎಂದು ಫಿಟ್ಟಿಂಗ್ ಇಟ್ಟಿದ್ದರು. ಆಪ್ತ ರಕ್ಷಕ ಸಿನಿಮಾದಲ್ಲಿ ಕೂಡ ಕೋಮಲ್ ಅವರಿಗೆ ವಿಷ್ಣುವರ್ಧನ್ ಅವರ ಜೊತೆಗೆ ನಟಿಸುವಂತಹ ಅವಕಾಶ ಸಿಕ್ಕ ಸಂದರ್ಭದಲ್ಲಿ ವಿಷ್ಣುವರ್ಧನ್ ರವರಿಗೆ ಕೋಮಲ್(Komal) ಅವರ ಬಗ್ಗೆ ಕೋಪ ಇತ್ತು ಇದೆ ಕಾರಣಕ್ಕಾಗಿ ಮಾತಾಡಿರಲಿಲ್ಲ. ಒಂದು ಹಾಸ್ಯ ದೃಶ್ಯವನ್ನು ವಿವರಿಸುವ ಸಂದರ್ಭದಲ್ಲಿ ಕೋಮಲ್ ಅವರ ಕಾಮಿಡಿ ಸ್ಟೈಲ್ ಅನ್ನು ನೋಡಿ ವಿಷ್ಣುವರ್ಧನ್(Vishnuvardhan) ರವರು ಹೊಟ್ಟೆ ತುಂಬ ನಕ್ಕಿದ್ದರಂತೆ ಅಲ್ಲಿಂದಲೇ ಅವರಿಬ್ಬರ ನಡುವೆ ಕನೆಕ್ಷನ್ ಪ್ರಾರಂಭವಾಯಿತು ಎಂಬುದಾಗಿ ನೆನಪಿಸಿಕೊಂಡು ಮಾತನಾಡುತ್ತಾರೆ.

Leave a Comment

error: Content is protected !!