ಅಪ್ಪು ಬಗ್ಗೆ ಎಲ್ಲರೂ ಹೊಗಳಿದರೆ ತಮಿಳು ನಟ ಸೂರ್ಯ ಮಾಡಿದ್ದೇ ಬೇರೆ. ಇದಕ್ಕೆ ರಾಕಿಂಗ್ ಸ್ಟಾರ್ ಯಶ್ ನೀಡಿದ ಪ್ರತಿಕ್ರಿಯೆ ಏನು ಗೊತ್ತಾ?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಿನ್ನೆಯಷ್ಟೇ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಗಂಧದಗುಡಿಯ ಪ್ರೀ ರಿಲೀಸ್ ಕಾರ್ಯಕ್ರಮ ಆಗಿರುವ ಪುನೀತ್ ಪರ್ವ ಕಾರ್ಯಕ್ರಮ ಸಾವಿರಾರು ಜನರ ನಡುವೆ ಸಂಭ್ರಮದಿಂದ ಅದ್ದೂರಿಯಾಗಿ ನಡೆದಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಸಾಕಷ್ಟು ಪರಭಾಷೆಯ ಸೆಲೆಬ್ರಿಟಿಗಳು ಕೂಡ ಬಂದು ಕಾರ್ಯಕ್ರಮವನ್ನು ಚಂದಗಾಣಿಸಿದ್ದಾರೆ. ಎಲ್ಲೋ ಈ ವೇದಿಕೆ ಮೇಲೆ ಬಂದು ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಮಾತನಾಡಿರುವ ಮಾತು ಹಲವಾರು ವಿಚಾರಗಳನ್ನು ಈಗ ಜನರಿಗೆ ತಿಳಿಯುವಂತೆ ಮಾಡಿದೆ.

ಅಪ್ಪು ಅವರು ಮರಣ ಹೊಂದಿದ ನಂತರ ಪ್ರಕಾಶ್ ರಾಜ್ ಅವರು ಅವರ ಹೆಸರಿನಲ್ಲಿ ಏನನ್ನಾದರೂ ಮಾಡಬೇಕು ಎನ್ನುವ ಆಲೋಚನೆಯಲ್ಲಿ ಇದ್ದರು. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಇರುವ ಎಲ್ಲಾ ಜಿಲ್ಲೆಗಳಿಗೂ ಉಚಿತ ಆಂಬುಲೆನ್ಸ್ ನೀಡುವ ಕಾರ್ಯವನ್ನು ಮಾಡಬೇಕು ಎನ್ನುವ ಕನಸನ್ನು ಕಂಡಿದ್ದರು. ಇದನ್ನು ಶಿವಣ್ಣ ಅವರ ಬಳಿ ಹೋಗಿ ಹೇಳಿದಾಗ ಅವರು ಕೂಡ ನನ್ನ ಕಡೆಯಿಂದ ಒಂದು ಆಂಬುಲೆನ್ಸ್ ನೀಡುತ್ತೇನೆ ಎಂಬುದಾಗಿ ಹೇಳುತ್ತಾರೆ. ಅವರಾದರೂ ಅಣ್ಣ ನೀಡುವುದರಲ್ಲಿ ಒಂದು ಅರ್ಥವಿದೆ.

ಆದರೆ ಈ ವಿಚಾರವನ್ನು ಕೇಳಿದ ನಂತರ ತಮಿಳು ಚಿತ್ರರಂಗದ ಖ್ಯಾತ ನಟ ಆಗಿರುವ ಸೂರ್ಯ ಅವರು ಕೂಡ ನನ್ನ ಕಡೆಯಿಂದ ಕೂಡ ಒಂದು ಆಂಬುಲೆನ್ಸ್ ನೀಡುತ್ತೇನೆ ಎಂಬುದಾಗಿ ಹೇಳುತ್ತಾರೆ. ಇದು ನಿಜಕ್ಕೂ ಕೂಡ ಅಪ್ಪು ಅವರು ಬೇರೆ ಚಿತ್ರರಂಗದಲ್ಲಿ ಕೂಡ ನಟರ ಜೊತೆಗೆ ಹೊಂದಿದಂತಹ ಸ್ನೇಹ ಹಾಗೂ ಅವರ ಕಾರ್ಯಕ್ಕೆ ಎಲ್ಲರೂ ನೀಡುತ್ತಿದ್ದ ಗೌರವದ ಪ್ರತೀಕವಾಗಿದೆ ಎಂದರೂ ತಪ್ಪಾಗಲಾರದು.

ಇದಾದ ನಂತರ ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಅವರು ಕೂಡ ಈ ಕಾರ್ಯಕ್ಕೆ ಒಂದು ಆಂಬುಲೆನ್ಸ್ ಅನ್ನು ನೀಡುತ್ತಾರೆ. ಇನ್ನು ಪುನೀತ್ಪರ್ವ ವೇದಿಕೆಯ ಮೇಲೆ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಉಳಿದ ಎಲ್ಲಾ ಆಂಬುಲೆನ್ಸ್ ವ್ಯವಸ್ಥೆಯನ್ನು ತಾನು ಮಾಡುತ್ತೇನೆ ಎಂಬುದಾಗಿ ಮಾತು ಕೊಟ್ಟಿರುವುದು ನಿಜಕ್ಕೂ ಕೂಡ ಈಗ ವ್ಯಾಪಕವಾಗಿ ಪ್ರಶಂಸೆಗೆ ಒಳಗಾಗುತ್ತಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!