ಬಸವಲಿಂಗ ಶ್ರೀ ಸ್ವಾಮೀಜಿಗಳ ಆತ್ಮಹತ್ಯೆ ಪ್ರಕರಣದಲ್ಲಿ ಸಿಕ್ಕಿತು ಮತ್ತೊಂದು ಟ್ವಿಸ್ಟ್! ಯುವತಿ ಜೊತೆಗಿನ ಏಕಾಂತ ದೃಶ್ಯ ಸೆರೆ..

ರಾಮನಗರದ ಬಂಡೆ ಮಠದ ಬಸವಲಿಂಗ ಶ್ರೀ ಸ್ವಾಮೀಜಿಗಳು ತಮ್ಮದೇ ಪೂಜಾ ಕೋಣೆಯಲ್ಲಿ ತಮ್ಮ ಜೀವವನ್ನು ಕಳೆದುಕೊಂಡಿರುವುದು ಸಾಕಷ್ಟು ದೊಡ್ಡ ಮಟ್ಟದ ಅನುಮಾನಕ್ಕೆ ಕಾರಣವಾಗಿತ್ತು. ಮರಣ ಹೊಂದುವ ಮುನ್ನ ಪತ್ರವನ್ನು ಬರೆದಿಟ್ಟೇ ಸ್ವಾಮೀಜಿಗಳು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ ಎಂಬುದಾಗಿ ಕೂಡ ಈಗಾಗಲೇ ತಿಳಿದು ಬಂದಿದೆ. 45 ವರ್ಷದ ಶ್ರೀ ಸ್ವಾಮೀಜಿಗಳು ತಮ್ಮ ಮಠದ ಪೂಜಾ ಕೋಣೆಯಲ್ಲಿ ಕುಣಿಕೆಗೆ ತಮ್ಮ ಜೀವವನ್ನು ಅರ್ಪಿಸಿದ್ದಾರೆ.

ಆದರೆ ಇದುವರೆಗೂ ಯಾಕೆ ಹೀಗೆ ಮಾಡಿಕೊಂಡಿದ್ದರು ಎಂಬುದಾಗಿ ತಿಳಿದು ಬಂದಿರಲಿಲ್ಲ. ಪೋಲಿಸ್ ತನಿಖೆಯ ವರದಿಯ ಪ್ರಕಾರ ಸ್ವಾಮೀಜಿಗಳು ಮರ್ಯಾದೆಗೆ ಅಂಜಿ ಹೇಗೆ ಮಾಡಿಕೊಂಡಿದ್ದಾರೆ ಎಂಬುದಾಗಿ ಕೂಡ ಗಾಳಿ ಸುದ್ದಿ ಹಾಗೂ ಸಮಾಚಾರಗಳು ಓಡಾಡುತ್ತಿವೆ. ಸ್ವಾಮೀಜಿಗಳು ಬರೆದಿರುವ ಪತ್ರದ ಮೂಲಕವೇ ಇದರ ಕುರಿತಂತೆ ಸುಳಿವು ಸಿಕ್ಕಂತಿದೆ.

ಈ ಸ್ವಾಮೀಜಿಗಳನ್ನು ಮಠದ ಅಧಿಕಾರದಿಂದ ಕೆಳಗಿಳಿಸುವ ಸ್ವಾಮೀಜಿ ಮಾಡಿದ್ದರು ಎಂಬುದಾಗಿ ಕೂಡ ಇದರ ಹಿಂದೆ ಸುದ್ದಿಗಳು ಓಡಾಡುತ್ತಿವೆ. ಇವರ ಕೈಯಿಂದ ಅಧಿಕಾರವನ್ನು ಕಿತ್ತುಕೊಳ್ಳುವ ಸಲುವಾಗಿಯೇ ಇನ್ನೊಬ್ಬ ಸ್ವಾಮೀಜಿ ಮಾಡಿರುವ ತಂತ್ರಕ್ಕೆ ಇವರು ತಮ್ಮ ಜೀವವನ್ನು ಕಳೆದುಕೊಳ್ಳಬೇಕಾಯಿತು ಎಂಬುದಾಗಿ ಸುದ್ದಿ ಓಡಾಡುತ್ತಿದೆ. ಸ್ವಾಮೀಜಿ ಮರಣ ಹೊಂದುವ ಮುನ್ನ ಬರೆದಿರುವ ಮೂರು ಪುಟಗಳ ಪತ್ರವೂ ಕೂಡ ಇದೇ ವಿಚಾರವನ್ನು ಪರೋಕ್ಷವಾಗಿ ಸೂಚಿಸುತ್ತಿದೆ.

ಈ ಮಠದ ನಿಯಂತ್ರಣವನ್ನು ತೆಗೆದುಕೊಳ್ಳಬೇಕು ಎನ್ನುವ ಸಲುವಾಗಿ ಆ ಸ್ವಾಮೀಜಿ ಈ ಮಠಕ್ಕೆ ಮಹಿಳೆಯೊಬ್ಬಳನ್ನು ಬಿಟ್ಟಿದ್ದರು. ಆಕೆಯ ಮೋಹಕ್ಕೆ ಮರುಳಾಗಿ ನಾನು ಮಾಡಬಾರದ ಕೆಲಸವನ್ನು ಮಾಡಿಬಿಟ್ಟಿದ್ದೆ. ಈ ಕೃತ್ಯವನ್ನು ವಿಡಿಯೋ ಮಾಡಿ ಪ್ರತಿದಿನ ನನಗೆ ಇದರ ಕುರಿತಂತೆ ಸಮಸ್ಯೆಯನ್ನು ನೀಡುತ್ತಿದ್ದರು. ಇದಕ್ಕಾಗಿಯೇ ಕೊನೆಯ ದಾರಿ ಏನು ಇಲ್ಲದೆ ನಾನು ಹೇಗೆ ಮಾಡಿದೆ ಎಂಬುದಾಗಿ ಪತ್ರದಲ್ಲಿ ಬರೆದಿಟ್ಟಿದ್ದಾರೆ. ಈ ಪತ್ರ ಸಿಗುತ್ತಿದ್ದಂತೆ ಈಗಾಗಲೇ ಪತ್ರದಲ್ಲಿ ಉಲ್ಲೇಖಿಸಲಾಗಿರುವ ವಿಡಿಯೋಗೆ ಸಂಬಂಧಿತ ಮೊಬೈಲ್ ಅನ್ನು ಕೂಡ ಈಗಾಗಲೇ ಜಪ್ತಿ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಈ ಪ್ರಕರಣದ ಸನಿಕೆ ಯಾವ ರೀತಿಯಲ್ಲಿ ಚುರುಕಾಗಿ ಸಾಗುತ್ತದೆ ಹಾಗೂ ಫಲಿತಾಂಶ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment

error: Content is protected !!