Narendra Modi ದೇಶ ಕಂಡಂತಹ ಹೆಮ್ಮೆಯ ಪ್ರಧಾನ ಮಂತ್ರಿಗಳಲ್ಲಿ ಹಾಲಿ ಪ್ರಧಾನ ಮಂತ್ರಿ ಆಗಿರುವ ಶ್ರೀ ನರೇಂದ್ರ ಮೋದಿ ಅವರು ಕೂಡ ಒಬ್ಬರಾಗಿರುತ್ತಾರೆ. ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತ ವಿಶ್ವದಲ್ಲಿ ಐದನೇ ಅತ್ಯಂತ ಶಕ್ತಿಶಾಲಿ ಆರ್ಥಿಕ ದೇಶವಾಗಿ ಕಾಣಿಸಿಕೊಂಡಿದೆ. ಇನ್ನು ಹಲವಾರು ಕ್ಷೇತ್ರಗಳಲ್ಲಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ದೇಶ ಪ್ರಗತಿಯನ್ನು ಸಾಧಿಸಿದೆ ಎನ್ನುವುದನ್ನು ಮರೆಯುವ ಹಾಗಿಲ್ಲ. ಒಬ್ಬ ಸಮರ್ಥ ನಾಯಕ ಹಾಗೂ ಮೇಧಾವಿ ರಾಜಕಾರಣಿ ಎಂದು ನಾವು ಮೋದಿಯವರನ್ನು ಬಣ್ಣಿಸಬಹುದಾಗಿದೆ.
ಇಂದಿನಿಂದ ಏರೋ ಇಂಡಿಯಾ ಪ್ರದರ್ಶನ ಪ್ರಾರಂಭವಾಗಲಿದ್ದು ಉದ್ಘಾಟನೆಗೆ ಸ್ವತಹ ಮೋದಿಯವರೇ ಬರುತ್ತಿದ್ದಾರೆ. ಹೀಗಾಗಿ ಈ ಕಾರ್ಯಕ್ರಮಕ್ಕಾಗಿ ಬೆಂಗಳೂರಿನಲ್ಲಿಯೇ ಬಿಗಿ ಭದ್ರತೆಯೊಂದಿಗೆ ವಾಸ್ತವ್ಯ ಹೂಡಲಿರುವ ನರೇಂದ್ರ ಮೋದಿಯವರು ಕರ್ನಾಟಕದ ಹಲವಾರು ಸೆಲೆಬ್ರಿಟಿಗಳನ್ನು ತಮ್ಮ ನಿವಾಸಕ್ಕೆ ಕರೆಸಿ ಔತಣಕೂಟವನ್ನು ಏರ್ಪಡಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹಾಗಿದ್ದರೆ ಈ ಔತಣ ಕೂಟ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿರುವ ಸೆಲೆಬ್ರಿಟಿಗಳು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.
ಮೊದಲನೆಯದಾಗಿ ಸಿನಿಮಾ ರಂಗವನ್ನು ತೆಗೆದುಕೊಂಡರೆ ರಾಕಿಂಗ್ ಸ್ಟಾರ್ ಯಶ್ ರಿಷಬ್ ಶೆಟ್ಟಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್. ನಿರ್ಮಾಪಕ ವಿಜಯ್ ಕಿರಗಂದೂರು ಶ್ರದ್ಧಾಜೈನ್ ಪ್ರಶಾಂತ್ ನೀಲ್. ಇನ್ನು ಕ್ರಿಕೆಟ್ ಕ್ಷೇತ್ರದಿಂದ ಕುಂಬ್ಳೆ ದಂಪತಿಗಳು ಜಾವಗಲ್ ಶ್ರೀನಾಥ್ ವೆಂಕಟೇಶ್ ಪ್ರಸಾದ್ ಮಯಾಂಕ್ ಅಗರ್ವಾಲ್ ಹಾಗೂ ಮನಿಷ್ ಪಾಂಡೆ ರವರಿಗೆ ಆಹ್ವಾನವನ್ನು ನೀಡಲಾಗಿದೆ.
ಇನ್ನು ಉದ್ಯಮ ಕ್ಷೇತ್ರದಿಂದ ನಿತಿನ್ ಕಾಮತ್ ಹಾಗೂ ತರುಣ್ ಮೆಹ್ತಾ ಅವರಿಗೆ ಮೋದಿಯವರು ಔತಣಕೂಟಕ್ಕೆ ಆಹ್ವಾನವನ್ನು ನೀಡಿದ್ದಾರೆ. ನರೇಂದ್ರ ಮೋದಿ ಅವರು ಇವರನ್ನು ಡಿನ್ನರ್ ಗೆ ಕರೆಸಿರುವ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ತಪ್ಪದೇ ಹಂಚಿಕೊಳ್ಳಿ.