ರಶ್ಮಿಯು ಗರ್ಭಿಣಿ ಎಂಬ ವಿಷಯ ತಿಳಿಯುತ್ತಿದ್ದಂತಲೇ ‘ತನ್ನ ಹೆಂಡತಿಯು ಬೇರೆಯವರೊಂದಿಗೆ ಸಂಬಂಧವನ್ನು ಹೊಂದಿದ್ದಾಳೆ’ ಎಂಬ ಅನುಮಾನದಿಂದ ಮೋಹನ್ ಅವರು ರಶ್ಮಿಗೆ ಮಾನಸಿಕ ಕಿ-ರುಕುಳವನ್ನು ನೀಡುತ್ತಲೇ ಬಂದಿದ್ದರಂತೆ. ಇದೇ ವಿಚಾರವಾಗಿ ಒಮ್ಮೆ ಕುಟುಂಬಸ್ಥರ ಸಮ್ಮುಖದಲ್ಲಿ ರಾಜಿಸಂಧಾನವು ನಡೆದಿತ್ತಂತೆ.
ಕೊಲೆ ಮಾಡುವುದಕ್ಕೂ ಮುಂಚೆ ಅಂದರೆ ಸುಮಾರು ಒಂದು ತಿಂಗಳ ಹಿಂದೆಯೇ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕು ಸಮೀಪದ ಶಿರಗಲಿಪುರ ಕಣಿವೆ ಬಳಿ ಗುಂಡಿ ತೋಡಲು ಸರಿಯಾದ ಜಾಗವನ್ನು ಹುಡುಕಿ, ಪ್ಲಾನ್ ಮಾಡಿ ಕೊಲೆಗೂ ಮುನ್ನವೇ ಗುಂಡಿ ತೋಡಿ ಬಂದಿದ್ದನಂತೆ. ಅಕ್ಟೋಬರ್ 8ರಂದು ಮನೆಯಲ್ಲಿ ಯಾರೂ ಇಲ್ಲವೆಂದು ಖಚಿತಪಡಿಸಿಕೊಂಡ ನಂತರ ಪತ್ನಿಯ ಕುತ್ತಿಗೆಯನ್ನು ಹಿಸುಕಿ ಮುಗಿಸಿದ್ದ, ನಂತರ ಶವವನ್ನು ಮುಂಚೆಯೇ ತೋಡಿದ್ದ ಗುಂಡಿಯಲ್ಲಿ ಯಾರಿಗೂ ತಿಳಿಯದಂತೆ ಹೂತು ಹಾಕಿ ಬಂದಿದ್ದಾನೆ.
ಮನೆಗೆ ಬಂದ ನಂತರ ಸಾಕ್ಷಿಗಳನ್ನು ನಾಶಪಡಿಸಿಕೊಂಡು ತನ್ನ ಪತ್ನಿ, ರಶ್ಮಿಯ ಪೋಷಕರ ಬಳಿ ‘ನಿಮ್ಮ ಮಗಳು ಕಾಣೆಯಾಗಿದ್ದಾಳೆ, ಬೇರೆ ಯಾರೊಂದಿಗಾದರೂ ಓಡಿ ಹೋಗಿರಬಹುದು’ ಎಂದು ಕರೆ ಮಾಡಿ ತಿಳಿಸಿದ್ದನಂತೆ. ಆತಂಕಗೊಂಡ ಪೋಷಕರು ಪೊಲೀಸರಲ್ಲಿ ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ದೂರು ನೀಡಿ, ಪೊಲೀಸರು ತನಿಖೆ ಆರಂಭಿಸಿದಾಗ ಮೋಹನ್ ಎಸೆದಿರುವ ಕೃತ್ಯ ಬೆಳಕಿಗೆ ಬಂದಿದೆ. ಬಾಯಿ ಮಾತಿಗೆ ಏನನ್ನು ಹೇಳದ ಮೋಹನ್ ಪೊಲೀಸರ ಭಾಷೆಯಲ್ಲಿಯೇ ಕೇಳಿದಾಗ ಎಲ್ಲವನ್ನು ಬಾಯಿಬಿಟ್ಟಿದ್ದಾನೆ.
ನಂತರ ಮೋಹನ್ ಕುಮಾರ್ ಸೂಚಿಸಿದ ಜಾಗದಿಂದ ಹೂತು ಹಾಕಿದ್ದ ಶವವನ್ನು ತೆಗೆದು ಮರಣೋತ್ತರ ಪರೀಕ್ಷೆಯನ್ನು ಕೂಡ ನಡೆಸಿದ್ದಾರಂತೆ. ಇವೆಲ್ಲವನ್ನೂ ತಿಳಿದ ಬಳಿಕ ರಶ್ಮಿಯ ಪೋಷಕರು ‘ವಿವಾಹ ಮಾಡಿಕೊಟ್ಟದ್ದೆ ಶವವಾಗಿ ಪಡೆಯುವಂತಾಯಿತು’ ಎಂದು ಕಣ್ಣೀರು ಹಾಕಿದ್ದಾರಂತೆ.