ಸದ್ದಿಲ್ಲದೆ ಎಂಗೇಜ್ ಮೆಂಟ್ ಆದ ವೈಷ್ಣವಿ ಗೌಡ ಕೈ ಹಿಡಿದ ಗಂಡು ಯಾರು ಗೊತ್ತಾ ಇವರ ಬ್ಯಾಗ್ರೌಂಡ್ ಕೇಳಿದರೆ ನಡುಗುತ್ತೀರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಅಗ್ನಿಸಾಕ್ಷಿ ಧಾರಾವಾಹಿಯ ಮುಖ್ಯ ಪಾತ್ರಧಾರಿಯಾಗಿ ಮಿಂಚಿದ್ದ ವೈಷ್ಣವಿ ಗೌಡ ಅವರು ಕರ್ನಾಟಕದ ಜನತೆಗೆ ಸನ್ನಿಧಿ ಎಂದೇ ಚಿರಪರಿಚಿತರು. ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ ಇವರು ಕಿರುತೆರೆಯಲ್ಲಿ ಸಾಕಷ್ಟು ಹೆಸರುಗಳಿಸಿ, ಜನಪ್ರಿಯರಾಗಿದ್ದಾರೆ.

ಅಗ್ನಿಸಾಕ್ಷಿ ಧಾರವಾಹಿಯ ಮೂಲಕ ದೂರದರ್ಶನದ ತೆರೆಯ ಮೇಲೆ ಸಿದ್ದಾರ್ಥ್ ಎಂದರೆ ವಿಜಯ್ ಸೂರ್ಯ ಅವರೊಂದಿಗೆ ಜೋಡಿಯಾಗಿ ಕಾಣಿಸಿದ್ದ ವೈಷ್ಣವಿ ಗೌಡ ಅವರ ಹೆಸರು ಈ ಮೊದಲು ವಿಜಯ್ ಸೂರ್ಯ ಹೆಸರಿನೊಂದಿಗೆ ತಗಲು ಹಾಕಿಕೊಂಡಿತ್ತು.  ವಿಜಯ್ ಸೂರ್ಯ ಅವರು ಮದುವೆಯಾಗಲಿದ್ದಾರೆ ಎಂಬ ಸುದ್ದಿಯು ಹರಡುತ್ತಿದ್ದಂತಲೇ ‘ವಧುವು ವೈಷ್ಣವಿ ಗೌಡ ಅವರಾ?’ ಎಂದು ಎಲ್ಲರೂ ಪ್ರಶ್ನಿಸಿದ್ದರು.

Vaishnavi gowda engagement photos

ವೈಷ್ಣವಿ ಗೌಡ ಅವರು ಈ ಕುರಿತಾಗಿ ಮಾತನಾಡಿ ‘ನಾವಿಬ್ಬರು ಸ್ನೇಹಿತರಷ್ಟೇ; ಅದನ್ನು ಬಿಟ್ಟು ನಮ್ಮಿಬ್ಬರ ಮಧ್ಯೆ ಬೇರೇನು ಇಲ್ಲ’ ಎಂದು ಸ್ಪಷ್ಟಪಡಿಸಿದ್ದರು. ವೈಷ್ಣವಿಯವರು ಹೇಳಿದಂತೆ, ಹರಡಿದ್ದ ವದಂತಿಯು ಸುಳ್ಳಾಯಿತು. ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸ್ಪರ್ಧೆಯಾಗಿ ಕಾಣಿಸಿಕೊಂಡ ವೈಷ್ಣವಿ ಗೌಡ, ಟಾಸ್ಕ್ ಮನರಂಜನೆ ಮನೆ ಕೆಲಸ ಎಲ್ಲದರಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದ ಇವರು ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದರು. ಬಿಗ್ ಬಾಸ್ ಮನೆಯಲ್ಲಿ ಕೊನೆಯವರೆಗೂ ಉಳಿದು ಟಫ್ ಕಂಟೆಸ್ಟೆಂಟ್ ಆಗಿಯೇ ಹೊರ ಬಿದ್ದರು.

ಬಿಗ್ ಬಾಸ್ ಮನೆಯಲ್ಲಿ ವೈಷ್ಣವಿಯವರು ಆಗಾಗ ‘ತಾನು ಮದುವೆಯಾಗಲಿದ್ದೇನೆ; ನನಗೂ ಮದುವೆಯಾಗಬೇಕೆಂಬ ಆಸೆ ಇದೆ’ ಎಂದು ಹೇಳಿದ್ದರು. ಅಲ್ಲದೆ ಮದುವೆಯ ಕುರಿತಾಗಿ ಹಲವಾರು ಬಾರಿ ಚರ್ಚೆಯನ್ನು ಕೂಡ ಮಾಡಿದ್ದರು. ಇವೆಲ್ಲ ಕಾರಣಗಳಿಂದಾಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೆ ವೈಷ್ಣವಿ ಅವರಿಗೆ ಮದುವೆಗಾಗಿ ಬಹಳವೇ ಆಫರ್ಸ್ ಬಂದಿತ್ತು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ದಾರವಾಹಿಗಳಿಂದ ಕೊಂಚವೇ ದೂರವಿದ್ದ ವೈಷ್ಣವಿ ಗೌಡ ಅವರು ಲಕ್ಷಣ ಧಾರವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಸಂತಸ ನೀಡಿದ್ದರು.

ಇದೀಗ ವೈಷ್ಣವಿ ಗೌಡ ಅವರು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ವೈರಲ್ ಆದ ಫೋಟೋದಲ್ಲಿ ಕಂಡು ಬಂದಂತೆ ವೈಷ್ಣವಿ ಗೌಡ ಹಾಗೂ ಅವರ ಪಕ್ಕದಲ್ಲಿರುವ ಹುಡುಗ, ಇಬ್ಬರು ಮಾಲೆ ಧರಿಸಿ ನಿಂತಿದ್ದಾರೆ. ಎದುರಿರುವ ಟೇಬಲ್ ನ ಮೇಲೆ ಹೂವು ಹಣ್ಣು ಕಾಯಿ ಅರಿಶಿಣ ಕುಂಕುಮಗಳು ಸೇರಿದಂತೆ ಹೊಸ ಬಟ್ಟೆಗಳು ಕಾಣುತ್ತಿವೆ. ಅಲ್ಲದೆ ಹುಡುಗನ ಪಕ್ಕದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಕೂಡ ಇದ್ದಾರೆ. ಈ ಫೋಟೋವನ್ನು ನೋಡಿದ ಬಳಿಕ ಅಭಿಮಾನಿಗಳೆಲ್ಲರೂ ವೈಷ್ಣವಿ ಗೌಡ ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ.

ವೈಷ್ಣವಿ ಗೌಡ ಅವರು ವಿದ್ಯಾಭರಣ ಎನ್ನುವವರ ಜೊತೆ engagement ಮಾಡಿಕೊಂಡಿದ್ದಾರೆ. ಈ engagement ಗೆ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರು ಆಗಮಿಸಿದ್ದರು. ಮನೆಯವರ ಸಮ್ಮುಖದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ. Vaishnavi gowda ಅವರು ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಹಲವು ಬಾರಿ ಮದುವೆ ವಿಚಾರವನ್ನು ಪ್ರಸ್ತಾಪ ಮಾಡಿದ್ದರು. Bigg boss ಮುಗಿದ ಮೇಲೂ ಸಿನೆಮಾ ಆಫರ್ಗಳು ಬಂದರೂ ಅವರು ಒಪ್ಪಿಕೊಂಡಿರಲಿಲ್ಲ. ಮೊನ್ನೆ ಮೊನ್ನೆ ಪ್ರಸಾರವಾದ ಲಕ್ಷಣ ಧಾರಾವಾಹಿಯಲ್ಲಿ ವೈಷ್ಣವಿ ಒಂದು ಅತಿಥಿ ಪಾತ್ರ ನಿರ್ವಹಿಸಿದ್ದರು ಅಷ್ಟೆ.

ಇನ್ನು ವೈಷ್ಣವಿ ಗೌಡ ಅವರು ಮದುವೆ ಆಗುವ ವರ ವಿದ್ಯಾಭರಣ ಅವರು ಸಹ ಬೆಂಗಳೂರಿನವರೆ. ಬೆಂಗಳೂರಿನ ಬಿ.ಎಂ.ಎಸ್. ಕಾಲೇಜಿನಲ್ಲಿ ಇಂಜನಿಯರಿಂಗ್ ವ್ಯಾಸಂಗ ಪೂರ್ಣಗೊಳಿಸಿದ್ದಾರೆ. 2018 ರಲ್ಲಿ ತೆರೆಕಂಡ ವಿರಾಜ್ ಚಿತ್ರದಲ್ಲಿ ಇವರು ಅಭಿನಯಿಸಿದ್ದರು. ಇದೀಗ ವಿದ್ಯಾಭರಣ ಅವರು ವೈಷ್ಣವಿ ಗೌಡ ಅವರನ್ನು ವರಿಸಲು ಸಿದ್ದರಾಗಿದ್ದಾರೆ. ಮದುವೆ ಯಾವಾಗ ಎನ್ನುವ ವಿಚಾರ ಇನ್ನಷ್ಟೆ ತಿಳಿಯಬೇಕಿದೆ.

Vaishnavi gowda engagement photos
Vaishnavi gowda engagement

ವಿಶೇಷ ಏನೆಂದರೆ ನಟಿ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಆದಂತಹ ಶಂಕರ್ ಬಿದರಿ ಅವರು ಕೂಡ ಜೊತೆಯಲ್ಲಿ ಇದ್ದಾರೆ. ಹಾಗಾಗಿ ಇವೆಲ್ಲವನ್ನೂ ನೋಡುತ್ತಿದ್ದರೆ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಅವರ ಸಂಬಂಧಿಕರೊಂದಿಗೆ ವೈಷ್ಣವಿ ಗೌಡ ಅವರ ಮದುವೆ ನಿಶ್ಚಯವಾಗಿದೆ ಎಂಬುದು ಕೆಲವರ ಊಹೆ ಆಗಿದೆ.
ಈ ಎಂಗೇಜ್ಮೆಂಟ್  ಫೋಟೋದ ಕುರಿತಾಗಿ ವೈಷ್ಣವಿ ಗೌಡ ಹಾಗೂ ಅವರ ಕುಟುಂಬದವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಫೋಟೋವನ್ನು ನೋಡಿದ ಬಳಿಕ ವೈಷ್ಣವಿ ಗೌಡ ಅವರು ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Leave a Comment

error: Content is protected !!