Virat Kohli: ಚಿನ್ನಸ್ವಾಮಿಯಲಿ ಮತ್ತೊಮ್ಮೆ ಸೋತ ಬಗ್ಗೆ ವಿರಾಟ್ ಕೊಹ್ಲಿ ಕೋಪದಿಂದ ಹೇಳಿಕೊಂಡಿದ್ದೇನು ಗೊತ್ತಾ?

Virat Kohli ಇತ್ತೀಚಿನ ದಿನಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡದ ಅದೃಷ್ಟವೇ ಸರಿಯಿಲ್ಲ ಎಂದು ಕಾಣುತ್ತದೆ ಯಾಕೆಂದರೆ ಗೆಲ್ಲುವ ಪಂದ್ಯಗಳನ್ನು ಕೂಡ ನಿರಾಯಸವಾಗಿ ಕೊಹ್ಲಿ ಪಡೆ ಬಿಟ್ಟುಕೊಡುತ್ತಿದೆ. ಅದರಲ್ಲೂ ವಿಶೇಷವಾಗಿ ತವರು ಮೈದಾನ ಆಗಿರುವಂತಹ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದನ್ನು ಮಾಡುತ್ತಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಹೌದು ಕೊಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 21ರನ್ನು ಗಳಿಂದ ಸೋತಿದೆ. ಬ್ಯಾಟಿಂಗ್ ಪಿಚ್ ನಲ್ಲಿ ಚೇಸಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಕೂಡ ಆರ್ಸಿಬಿ(RCB) ಅದು ತನ್ನ ಹೋಂ ಗ್ರೌಂಡ್ ನಲ್ಲಿ ಸೋತಿರುವುದು ನಿಜಕ್ಕೂ ಕೂಡ ಒಪ್ಪಿಕೊಳ್ಳಲಾಗದಂತಹ ವಿಚಾರವಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಕೊಲ್ಕತ್ತಾ ತಂಡ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ನುಗಳನ್ನು ಬಾರಿಸಲು ಯಶಸ್ವಿಯಾಯಿತು.

ಗುರಿಯನ್ನು ಬೆನ್ನತ್ತಿದ ಆರ್ಸಿಬಿ(RCB) ತಂಡಕ್ಕೆ ಸುಲಭ ಗುರಿಯನ್ನು ಕೂಡ ತಲುಪಲು ಸಾಧ್ಯವಾಗಲಿಲ್ಲ. ಅದರಲ್ಲೂ ವಿಶೇಷವಾಗಿ ಕೊಹ್ಲಿ(kohli) ಅವರ ಅರ್ಧ ಶತಕವನ್ನು ಹೊರತುಪಡಿಸಿ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸಲು ಯಾರು ಕೂಡ ಮನಸ್ಸು ಮಾಡಲಿಲ್ಲ. ಪಂದ್ಯ ಮುಗಿದ ನಂತರ ಇದರ ಕುರಿತಂತೆ ಕೊಹ್ಲಿ ಅವರು ಸಾಕಷ್ಟು ಅಸಮಾಧಾನಕರ ಪ್ರತಿಕ್ರಿಯೆಯನ್ನು ನೀಡುತ್ತಾರೆ.

ಸುಲಭವಾಗಿ ಗೆಲ್ಲ ಬಲ್ಲಂತಹ ಪಂದ್ಯವನ್ನು ನಾವು ನಮ್ಮ ಕೈಯಾರೆ ಎದುರಾಳಿ ತಂಡಕ್ಕೆ ಬಿಟ್ಟುಕೊಟ್ಟಿದ್ದೇವೆ. ನಿಜಕ್ಕೂ ಕೂಡ ಇದು ನಡೆಯಬಾರದಿತ್ತು ಮುಂದಿನ ದಿನಗಳಿಂದ ನಾವು ನಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಗೆಲುವಿನ ಕಡೆಗೆ ಮುಖ ಮಾಡುವಂತಹ ಪ್ರಯತ್ನ ಮಾಡುತ್ತೇವೆ ಎಂಬುದಾಗಿ ಬೇಸರದಿಂದಲೇ ವಿರಾಟ್ ಕೊಹ್ಲಿ(Virat Kohli) ಅವರು ಪ್ರತಿಕ್ರಿಯೆ ನೀಡಿದ್ದಾರೆ.

Leave a Comment

error: Content is protected !!