Arjun Sarja: ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಉಡುಗೊರೆ ಕೊಟ್ಟ ರ್ಜುನ್ ಸರ್ಜಾ ಫ್ಯಾಮಿಲಿ

Arjun Sarja: ಸ್ನೇಹಿತರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸದ್ಯ ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಪ್ರಾಣ ಪ್ರತಿಷ್ಠಾಪನೆ ಜವಾಬ್ದಾರಿಯ ಜೊತೆಗೆ ಶ್ರೀ ರಾಮನಿಗೆ(Sri Rama) ನಂಟಿರುವಂತಹ ದೇವಸ್ಥಾನಗಳಿಗೆ ಭೇಟಿ ನೀಡಿರುವಂತಹ ನರೇಂದ್ರ ಮೋದಿಯವರು ಜನವರಿ 20ನೇ ತಾರೀಕು 2023, ಶನಿವಾರದ ದಿನ ತಮಿಳುನಾಡಿನ ಶ್ರೀರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡಿದ್ದರು.

ಹೀಗೆ ಪ್ರಧಾನಿಯವರು ಚೆನೈಗೆ ಭೇಟಿ ನೀಡಿದಂತಹ ಸಮಯದಲ್ಲಿ ಅವರನ್ನು ಭೇಟಿ ಮಾಡಿರುವಂತಹ ಬಹುಭಾಷ ನಟ ಅರ್ಜುನ್ ಸರ್ಜಾ (Arjun Sarja) ಮತ್ತು ಮಗಳು ಐಶ್ವರ್ಯ ಸರ್ಜಾ(Aishwarya Sarja) ವಿಶೇಷವಾದ ಉಡುಗೊರೆ ಒಂದನ್ನು ನೀಡಿ ಗೌರವಿಸಿದ್ದಾರೆ. ಅಷ್ಟಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರ್ಜುನ್ ಸರ್ಜಾ ನೀಡುವಂತಹ ವಿಶೇಷ ಉಡುಗೊರೆ ಏನಾಗಿತ್ತು? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಹೌದು ಸ್ನೇಹಿತರೆ, ದಕ್ಷಿಣ ಭಾರತದ ಹೆಸರಾಂತ ನಟ ಅರ್ಜುನ್ ಸರ್ಜಾ ಅವರು ಇತ್ತೀಚಿಗಷ್ಟೇ ಚೆನ್ನೈನಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ (Narendra Modi) ಅವರನ್ನು ಉತ್ತಮ ಮಗಳ ಜೊತೆಗೆ ಭೇಟಿ ಮಾಡಿದರು. ಅವರ ಜೊತೆ ರೂಮಿನಲ್ಲಿ ಕುಳಿತು ಮನದಾಳದ ಮಾತುಗಳನ್ನು ಹಂಚಿಕೊಳ್ಳುತ್ತ ತಮ್ಮ ವೃತ್ತಿ ಜೀವನದ ಕುರಿತು ಕೆಲ ಚರ್ಚೆಗಳನ್ನು ನಡೆಸಿ ಅದೇ ಸಮಯದಲ್ಲಿ ತಮ್ಮ ಮುದ್ದಿನ ಮಗಳಾದ ಐಶ್ವರ್ಯ ಸರ್ಜಾ ಅವರ ಮದುವೆ ವಿಚಾರದ ಕುರಿತು ಮೋದಿಯವರಿಗೆ ಮಾಹಿತಿ ತಿಳಿಸಿ ಮದುವೆಗೆ ಹೃತ್ಪೂರ್ವಕವಾಗಿ ಆಹ್ವಾನಿಸಿದ್ದಾರೆ.

ಅಷ್ಟೇ ಅಲ್ಲದೆ 22 ಕೋಟಿ ಭಾರತೀಯರ ಕನಸನ್ನು ನೆರವೇರಿಸಿರುವ ಮೋದಿಜಿಯವರ ಕಾರ್ಯಕ್ಕೆ ಅರ್ಜುನ್ ಸರ್ಜಾ (Arjun Sarja) ಗೌರವ ಸೂಚಿಸಿ ಅಂಜನಾಸುತಾ ಶ್ರೀ ಯೋಗಾಂಜನೇಯ ಮಂದಿರಂ ದೇವಸ್ಥಾನದ ಭಾವಚಿತ್ರವನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ. ಈ ವಿಶೇಷ ಚಿತ್ರಣವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಟ ಅರ್ಜುನ್ ಸರ್ಜಾ “ ವಿಶ್ವದ ಅತ್ಯಂತ ಬುದ್ಧಿವಂತ ಮತ್ತು ಶಕ್ತಿಯುತ ವ್ಯಕ್ತಿಯೊಂದಿಗೆ” ಎಂಬ ಕ್ಯಾಪ್ಷನ್ ಬರೆದು ಚಿತ್ರಣಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಅಭಿಮಾನಿಗಳು ವ್ಯಾಪಕ ಮೆಚ್ಚುಗೆ ಸೂಚಿಸುತ್ತಿದ್ದು, ಅಪ್ಪಟ ಅಂಜನೇಯನ ಭಕ್ತರಾಗಿರುವಂತಹ ಅರ್ಜುನ್ ಸರ್ಜಾ (Arjun Sarja) ಮೋದಿಯವರಿಗೆ ಹನುಮನ ಭಾವಚಿತ್ರವನ್ನು ಉಡುಗೊರೆಯಾಗಿ ನೀಡುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!