Dboss: ಯುಗಾದಿಗೂ ಮುಂಚೇನೆ ಈ ಕಾರಣಕ್ಕಾಗಿ ಅಭಿಮಾನಿಗಳಿಗೆ ಮನವಿ ಮಾಡಿದ ಡಿಬಾಸ್!

Darshan Thoogudeepa ಇನ್ನೇನು ನಾಳೆ ಅಂದರೆ ಮಾರ್ಚ್ 22ರಂದು ಹಿಂದುಗಳ ಹೊಸ ವರ್ಷದ ಹಬ್ಬವಾಗಿರುವ ಯುಗಾದಿ ಹಬ್ಬವನ್ನು(Ugadi Festival) ಎಲ್ಲರೂ ಕೂಡ ಆಚರಿಸಲಿದ್ದಾರೆ. ಸೆಲೆಬ್ರಿಟಿಗಳು ಜನಸಾಮಾನ್ಯರು ಎಲ್ಲರ ಮನೆಯಲ್ಲಿ ಕೂಡ ಹಬ್ಬದ ಸಂಭ್ರಮ ಮನೆ ಮಾಡಿರಲಿದೆ. ಅದರಲ್ಲೂ ಹಬ್ಬಕ್ಕೂ ಮುನ್ನವೇ ಈಗ ತಮ್ಮ ಅಭಿಮಾನಿಗಳಲ್ಲಿ ಡಿ ಬಾಸ್(Dboss) ಒಂದು ಮನವಿ ಮಾಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಹಾಗೂ ಅವರ ಅಭಿಮಾನಿಗಳ ನಡುವೆ ಸ್ವಂತ ಮನೆಯವರಿಗಿಂತ ಹೆಚ್ಚಿನ ಬಾಂಧವ್ಯ ಇದೆ ಎನ್ನುವುದನ್ನು ನಾವು ಹಲವಾರು ವರ್ಷಗಳಿಂದ ನೋಡಿಕೊಂಡು ಬಂದಿದ್ದೇವೆ. ನಿಜಕ್ಕೂ ಕೂಡ ಇಂತಹ ಅವಿನಾಭಾವ ಸಂಬಂಧವನ್ನು ಬೇರೆ ಯಾವ ನಟ ಹಾಗೂ ಅಭಿಮಾನಿಗಳು ಕೂಡ ನೋಡಿರಲು ಸಾಧ್ಯವಿಲ್ಲ. ಅಷ್ಟಕ್ಕೂ ಯುಗಾದಿ ಹಬ್ಬಕ್ಕೂ ಮುನ್ನವೇ ದರ್ಶನ್(Darshan) ರವರು ಅಭಿಮಾನಿಗಳಲ್ಲಿ ಮಾಡಿರುವ ಮನವಿ ಏನು ಎಂಬುದನ್ನು ತಿಳಿಯೋಣ ಬನ್ನಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಪ್ರಕೃತಿ ಹಾಗೂ ಪ್ರಾಣಿಗಳ ವಿಚಾರಕ್ಕೆ ಬಂದರೆ ಎಲ್ಲರಿಗಿಂತ ದೊಡ್ಡ ಮಟ್ಟದಲ್ಲಿ ಆಸಕ್ತಿ ಹಾಗೂ ಕಾಳಜಿಯನ್ನು ಹೊಂದಿರುವಂತಹ ವ್ಯಕ್ತಿ. ಇನ್ನೂ ಇಂದು ವಿಶೇಷವಾಗಿ ಅಂತರಾಷ್ಟ್ರೀಯ ಅರಣ್ಯ ದಿನಾಚರಣೆಯಾಗಿದ್ದು ಇದೇ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ವಿಶೇಷವಾಗಿ ಮನವಿ ಮಾಡಿದ್ದಾರೆ.

ಅಂತರಾಷ್ಟ್ರೀಯ ಅರಣ್ಯ ದಿನಾಚರಣೆಯ ಪ್ರಯುಕ್ತ ವಿಶೇಷವಾಗಿ ಮನವಿ ಮಾಡುತ್ತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ, ” ವಿಶ್ವ ಅರಣ್ಯ ದಿನ ಕಾಡು ಉಳಿಸಿ ನಾಡು ಬೆಳೆಸಿ. ಹಸಿರೇ ಉಸಿರು ಮರ ಇದ್ದರೆ ಬೆಳೆ, ಮಳೆ ಇದ್ದರೆ ಬೆಳೆ, ಬೆಳೆ ಇದ್ದರೆ ನಮ್ಮ ಬದುಕು. ಅರಣ್ಯ ಬೆಳೆಸಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂಬುದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan Thoogudeepa) ರವರು ಅಭಿಮಾನಿಗಳಲ್ಲಿ ಪ್ರಕೃತಿಯ ಕುರಿತಂತೆ ವಿಶೇಷವಾದ ಕಾಳಜಿ ವಹಿಸುವಂತೆ ಕೋರಿಕೊಂಡಿದ್ದಾರೆ.

Leave a Comment

error: Content is protected !!