Bullet Prakash: ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಸಿದ್ದರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್! ಎಮೋಷನಲ್ ಆದ ಅಭಿಮಾನಿಗಳು.

Dboss ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರು ಸ್ನೇಹಕ್ಕೆ ಯಾವ ರೀತಿ ಬೆಲೆಯನ್ನು ನೀಡುತ್ತಾರೆ ಹಾಗೂ ಸ್ನೇಹಕ್ಕಾಗಿ ಯಾವ ಹಂತಕ್ಕೂ ಕೂಡ ಹೋಗಲು ರೆಡಿಯಾಗಿರುತ್ತಾರೆ ಎಂಬುದನ್ನು ಈಗಾಗಲೇ ಸಾಕಷ್ಟು ಬಾರಿ ಸಾಬೀತುಪಡಿಸಿ ತೋರಿಸಿದ್ದಾರೆ. ನಿಜಕ್ಕೂ ಕೂಡ ನೋಡುಗರಿಗೆ ಅವರು ಒರಟನಂತೆ ಕಾಣಿಸಿಕೊಂಡರು, ಸ್ನೇಹಿತರಿಗೆ ಮಾತ್ರ ಅವರು ಸದಾ ಕಾಲ ಕಷ್ಟಕ್ಕೆ ಮಿಡಿಯುವಂತಹ ಜೀವ.

ಇನ್ನು ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರು ಸಾಕಷ್ಟು ಕಲಾವಿದರ ಜೊತೆಗೆ ಅತ್ಯಂತ ನಿಕಟವಾದ ಸ್ನೇಹ ಸಂಬಂಧವನ್ನು ಹೊಂದಿದ್ದರು ಅದರಲ್ಲಿ ಹಾಸ್ಯ ಕಲಾವಿದ ಆಗಿರುವಂತಹ ಬುಲೆಟ್ ಪ್ರಕಾಶ್(Bullet Prakash) ಅವರು ಕೂಡ ಮುಂಚೂಣಿ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ ಇದು ನಿಮಗೂ ಕೂಡ ತಿಳಿದಿದೆ.

ಇನ್ನು ನಿಮಗೆ ತಿಳಿದಿರಬಹುದು ಪ್ರಕಾಶ್ ಅವರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಮಗಳ ಮದುವೆಯನ್ನು ಮಾಡುವಂತಹ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂಬುದಾಗಿ ದರ್ಶನ್(Darshan) ರವರು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು ಈಗ ಅದೇ ಕ್ಷಣ ಹತ್ತಿರವಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಾಶ್ ಅವರ ಪುತ್ರ ರಕ್ಷಕ್(Rakshak) ತನ್ನ ಸಹೋದರಿಯ ಮದುವೆಯ ಕಾರ್ಡುಗಳನ್ನು ಎಲ್ಲಾ ಕಡೆ ಹಂಚುತ್ತಿರುವುದು ಕಂಡುಬಂದಿದೆ.

ಈ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರು ತಮ್ಮ ಗೆಳೆಯನಿಗೆ ನೀಡಿದಂತಹ ವಚನವನ್ನು ಈಗ ಪೂರೈಸಲು ಹೊರಟಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೂ ಸೇರಿದಂತೆ ಪ್ರತಿಯೊಬ್ಬರಿಗೂ ಕೂಡ ಭಾವುಕ ಭಾವನೆಯನ್ನು ಮೂಡಿಸುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.

Leave a Comment

error: Content is protected !!