Dboss: ಕೆಸಿಸಿಯಲ್ಲಿ ಕ್ರಿಕೆಟ್ ಆಡೋ ಸ್ಟಾರ್ ನಟರಿಗೆ ಸೆಡ್ಡು ಹೊಡೆದು ಡಿ ಬಾಸ್ ಮಾಡಿದ್ದೇನು ಗೊತ್ತಾ? ವೀಡಿಯೋ ಆಯ್ತು ವೈರಲ್!

Darshan Thoogudeepa ಕಿಚ್ಚ ಸುದೀಪ್(Kiccha Sudeep) ರವರ ನೇತೃತ್ವದಲ್ಲಿ ನಡೆದಿರುವಂತಹ ಕನ್ನಡ ಚಲನಚಿತ್ರ ಕಮ್ ಮೂರನೇ ಆವೃತ್ತಿ ಈಗಾಗಲೇ ಮುಗಿದಿದ್ದು ಡಾಲಿ ಧನಂಜಯ್(Daali Dhananjay) ನಾಯಕತ್ವದ ಗಂಗಾ ವಾರಿಯರ್ಸ್ ತಂಡ ಕೆಸಿಸಿ ಕಪ್ ಅನ್ನು ಗೆದ್ದುಕೊಂಡಿದೆ. ಈ ತಂಡದಲ್ಲಿ ಅಂತರಾಷ್ಟ್ರೀಯ ಕ್ರಿಕೆಟಿಗರ ವಿಭಾಗದಲ್ಲಿ ಸುರೇಶ್ ರೈನ ಅವರು ಆಡಿದ್ದರು. ಒಟ್ಟಾರೆಯಾಗಿ ಕನ್ನಡ ಚಿತ್ರರಂಗದ ಎಲ್ಲಾ ನಟರು ಒಂದೇ ಸೂರಿನ ಅಡಿಯಲ್ಲಿ ಬರಬೇಕು ಎಂದು ಈ ಕಾರ್ಯಕ್ರಮವನ್ನು ಮಾಡಲಾಗಿತ್ತು. ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಆದರೆ ಈ ಟೂರ್ನಮೆಂಟ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಮಾತ್ರ ಎಲ್ಲೂ ಕೂಡ ಕಾಣಿಸಿಕೊಂಡಿರಲಿಲ್ಲ. ಅವರ ಸಹೋದರ ಆಗಿರುವ ದಿನಕರ ತೂಗುದೀಪ್ ಕಾಣಿಸಿಕೊಂಡಿದ್ದರು ಕೂಡ ಡಿ ಬಾಸ್ ಬಂದಿರಲಿಲ್ಲ ಎನ್ನುವ ಕೊರಗು ಅವರ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೂಡ ಡಿ ಬಾಸ್ ಡಿ ಬಾಸ್ ಎಂದು ಕೂಗುವ ಮೂಲಕ ತಮ್ಮ ನಟ ಇಲ್ಲದೆ ಇರುವಂತಹ ಆಕ್ರೋಶವನ್ನು ಕೂಡ ಹೊರ ಹಾಕಿದ್ದರು ಡಿ ಬಾಸ್ ಅಭಿಮಾನಿಗಳು.

ಕಿಚ್ಚ ಸುದೀಪ್ ಅವರ ಜೊತೆಗೆ ಇರುವಂತಹ ಭಿನ್ನಾಭಿಪ್ರಾಯದ ಕಾರಣದಿಂದಲೋ ಅಥವಾ ವೈಯಕ್ತಿಕ ಕಾರಣಗಳಿಂದಲೋ ಕೆಸಿಸಿ ಕಪ್ ಗೆ ಡಿ ಬಾಸ್(Dboss) ಬಂದಿರಲಿಲ್ಲ. ಆದರೆ ಈ ಕ್ರಿಕೆಟ್ ಟೂರ್ನಮೆಂಟ್ ಗೆ ಸೆಡ್ಡು ಹೊಡೆಯುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಂದು ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಇದೇ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಡಿಕೇರಿಯಲ್ಲಿ ಇದ್ದರು.

ಮಡಿಕೇರಿಯಲ್ಲಿ ಬಿಡುವಿನ ಸಂದರ್ಭದಲ್ಲಿ ತಮ್ಮ ಗೆಳೆಯರ ಜೊತೆಗೆ ಗಲ್ಲಿ ಕ್ರಿಕೆಟ್ ಆಡುತ್ತಿರುವಂತಹ ವಿಡಿಯೋ ಇದೇ ಸಮಯದಲ್ಲಿ ವೈರಲ್ ಆಗಿದ್ದು ಕೆಸಿಸಿ(KCC) ಕಾರ್ಯಕ್ರಮಕ್ಕೆ ಸೆಡ್ಡು ಹೊಡೆಯುವಂತೆ ಈ ವಿಡಿಯೋವನ್ನು ಹೊರ ಬಿಡಲಾಗಿದೆ ಎಂಬುದಾಗಿ ಎಲ್ಲಾ ಕಡೆ ಮಾತುಕತೆಗಳು ಪ್ರಾರಂಭವಾಗಿವೆ. ಈ ವಿಡಿಯೋದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!