Ravichandran: ಅಣ್ಣಾವ್ರು ಹಾಗೂ ವಿಷ್ಣುದಾದಾ ಬೇಡ ಎಂದು ಬಿಟ್ಟಿದ್ದ ಸಿನಿಮಾವನ್ನೇ ಮಾಡಿ ಗೆದ್ದಿದ್ದ ರವಿಚಂದ್ರನ್. ಯಾವ ಸಿನಿಮಾ ಗೊತ್ತಾ?

Crazystar Ravichandran ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಎರಡು ಕಣ್ಣುಗಳ ರೀತಿಯಲ್ಲಿ ಅಣ್ಣಾವ್ರು ಹಾಗೂ ವಿಷ್ಣುದಾದಾ(Vishnudada) ಚಿತ್ರರಂಗವನ್ನು ಆಳಿದ್ದರು. ಅಂತಹ ಮೇರು ನಟರೇ ಬೇಡ ಎಂದು ರಿಜೆಕ್ಟ್ ಮಾಡಿದ ಸಿನಿಮಾವನ್ನು ಕ್ರೇಜಿಸ್ಟಾರ್ ರವಿಚಂದ್ರನ್(Ravichandran) ರವರು ಮಾಡಿ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿಕೊಂಡಿದ್ದರು. ಅಷ್ಟಕ್ಕೂ ಆ ಸಿನಿಮಾ ಯಾವುದಾಗಿತ್ತು ಎಂಬುದನ್ನು ತಿಳಿಯೋಣ ಬನ್ನಿ.

ಕನ್ನಡ ಚಿತ್ರರಂಗದ ಹಠವಾದಿ ಯಾರು ಎಂದು ಕೇಳಿದಾಗ ಪ್ರತಿಯೊಬ್ಬರು ನೀಡುವಂತಹ ಒಂದೇ ಒಂದು ಉತ್ತರ ಎಂದರೆ ಅದು ಕ್ರೇಜಿಸ್ಟಾರ್ ರವಿಚಂದ್ರನ್(Crazy Star Ravichandran) ರವರ ಹೆಸರು. ಸಿನಿಮಾ ರಂಗದಲ್ಲಿ ತಮ್ಮ ಹಠದ ಮೂಲಕವೇ ತಮ್ಮ ನೆಚ್ಚಿನ ಸಿನಿಮಾಗಳನ್ನು ಮಾಡಿ ಪ್ರೇಕ್ಷಕರನ್ನು ರಂಜಿಸಿ ಕನಸುಗಾರ ಕ್ರೇಜಿಸ್ಟಾರ್ ಎನ್ನುವ ಬಿರುದುಗಳನ್ನು ಕೂಡ ಪಡೆದುಕೊಳ್ಳುತ್ತಾರೆ. ಕನ್ನಡ ಚಿತ್ರರಂಗವನ್ನು ಒಂದು ಹಂತ ಮೇಲಕ್ಕೆ ಕರೆದುಕೊಂಡು ಹೋದಂತಹ ಶ್ರೇಯ ಕೂಡ ರವಿಚಂದ್ರನ್ ರವರಿಗೆ ಸಿಗುತ್ತದೆ.

ಅಷ್ಟಕ್ಕೂ ರಾಜ್ ಕುಮಾರ್(Rajkumar) ಹಾಗೂ ವಿಷ್ಣುವರ್ಧನ್ ರವರು ಬೇಡ ಎಂದು ತಿರಸ್ಕರಿಸಿದ್ದ ಆ ಕಥೆಯನ್ನು ತಾವೇ ನಿರ್ಮಾಣ ಮಾಡಬೇಕೆಂದು ತಮ್ಮ ತಂದೆ ವೀರ ಸ್ವಾಮಿ ಅವರ ಬಳಿ ಕೇಳಿದಾಗ ಮೊದಲಿಗೆ ಅವರು ಬೇಡ ಎನ್ನುವುದಾಗಿ ಹೇಳುತ್ತಾರೆ ಹೀಗಿದ್ದರೂ ಕೂಡ ಈ ಸಿನಿಮಾವನ್ನು ಅಂಬರೀಶ್(Ambareesh) ರವರಿಗೆ ನಿರ್ಮಾಣ ಮಾಡಿ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಹೂಡಿದ್ದ ಹಣಕ್ಕಿಂತ ದುಪ್ಪಟ್ಟು ಹಣವನ್ನು ಪಡೆದು ಸಿನಿಮಾ ದೊಡ್ಡಮಟ್ಟದಲ್ಲಿ ಯಶಸ್ಸನ್ನು ಕಾಣುತ್ತದೆ.

ಆ ಸಿನಿಮಾ ಇನ್ಯಾವುದು ಅಲ್ಲ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಅಂಬಿಕಾ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಚಕ್ರ ವ್ಯೂಹ(Chakravyuha Film) ಸಿನಿಮಾ. ಈ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ಎಂತಹ ರಿಸ್ಕ್ ಅನ್ನು ಕೂಡ ತಾನು ತೆಗೆದುಕೊಳ್ಳಬಲ್ಲ ಎನ್ನುವುದನ್ನು ಅಂದಿನ ಕಾಲದಲ್ಲೇ ಕ್ರೇಜಿಸ್ಟಾರ್ ರವಿಚಂದ್ರನ್(V Ravichandran) ರವರು ಕನ್ನಡ ಚಿತ್ರರಂಗಕ್ಕೆ ಸಾಬೀತುಪಡಿಸಿದ್ದರು. ಚಕ್ರವ್ಯೂಹ ಸಿನಿಮಾದ ಚಳಿ ಚಳಿ ತಾಳೆನು ಹಾಡನ್ನು ಕೇಳದವರೇ ಯಾರಿಲ್ಲ ಹೇಳಿ ನೋಡೋಣ ಅಷ್ಟರಮಟ್ಟಿಗೆ ಆ ಸಿನಿಮಾದ ಹಾಡು ಹಾಗೂ ಕಥೆ ಜನರಿಗೆ ಇಷ್ಟವಾಗಿತ್ತು.

Leave a Comment

error: Content is protected !!