KGF ಸಿನಿಮಾ ನಟಿ ಶ್ರೀನಿಧಿ ಶೆಟ್ಟಿ ಅವರ ತಂದೆಯೊಂದಿಗಿನ ಅಪರೂಪದ ಫೋಟೋ!

ಸ್ನೇಹಿತರೆ ಕನ್ನಡದ ಬ್ಲಾಕ್ಬಸ್ಟರ್ ಹಿಟ್ ಆಕ್ಷನ್ ಸಿನಿಮಾ ಕೆಜಿಫ್ ಮೂಲಕ ಚಿತ್ರರಂಗವನ್ನು ಪ್ರವೇಶ ಮಾಡಿದಂತಹ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಎಲ್ಲಾ ಸಿನಿಮಾ ಇಂಡಸ್ಟ್ರಿಗು ಬೇಕಿರುವಂತಹ ಬಹು ಬೇಡಿಕೆಯ ನಟಿ ಹೌದು ಗೆಳೆಯರೇ ಚಿಕ್ಕಂದಿನಿಂದಲೂ ನಟಿ ಶ್ರೀನಿಧಿ ಶೆಟ್ಟಿ ಅವರಿಗೆ ನಟನೆ ಹಾಗೂ ಮಾಡಲಿಂಗ್ ಕ್ಷೇತ್ರದಲ್ಲಿ ಬಹಳಾನೇ ಆಸಕ್ತಿ ಇರುತ್ತದೆ. ಹೀಗಾಗಿ 2016ರಲ್ಲಿ ಮಿಸ್ ಸುಪ್ರನ್ಯಾಷನಲ್ ಫ್ಯಾಶನ್ ಶೋ(Miss Supranational show) ಸ್ಪರ್ಧೆಯಲ್ಲಿ ಭಾಗವಹಿಸಿ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡರು.

ಅನಂತರ ಸಾಕಷ್ಟು ಮಾಡೆಲಿಂಗ್ ಶೋಗಳಲ್ಲಿ ಭಾಗವಹಿಸುತ್ತ ತಮ್ಮನ್ನು ತಾವು ತೊಡಗಿಸಿಕೊಂಡಿದಂತಹ ಶ್ರೀನಿಧಿ ಶೆಟ್ಟಿ ಅವರಿಗೆ ೨೦೧೮ರಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ಅವರ ಕಾಂಬಿನೇಷನ್ನಲ್ಲಿ ಮೂಡಿ ಬಂದ ಕೆಜಿಎಫ್ ಚಿತ್ರದ ನಾಯಕ ನಟಿ ಆಗುವಂತಹ ಅವಕಾಶ ದೊರಕುತ್ತದೆ. ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಶ್ರೀನಿಧಿ ಶೆಟ್ಟಿ ತಮ್ಮ ಮೊದಲ ಸಿನಿಮಾದಲ್ಲಿಯೇ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಹೊರಹೊಮ್ಮಿದರು.

ಪ್ರಪ್ರಥಮ ಚಿತ್ರದ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಂತಹ ಶ್ರೀನಿಧಿ ಶೆಟ್ಟಿ ಅವರು ತಮ್ಮ ಮುಂದಿನ ನಾಲ್ಕು ವರ್ಷವನ್ನು ಕೆಜಿಎಫ್ 2ನೇ ಅಧ್ಯಾಯಕ್ಕಾಗಿ ಮುಡಿಪಾಗಿದ್ದರು. ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆದ ಶ್ರೀನಿಧಿ ಶೆಟ್ಟಿ ಅವರಿಗೆ ಸೈಮ ಅವಾರ್ಡ್ಸ್ ವತಿಯಿಂದ ಅತ್ಯುತ್ತಮ ನಟಿ ಎಂಬ ಪ್ರಶಸ್ತಿ ದೊರಕುತ್ತದೆ. ಕೊಬ್ಬಿದ ಹೆಣ್ಣು ಮಗಳ ಪಾತ್ರದಲ್ಲಿ ನಟಿ ಶ್ರೀನಿಧಿ ಶೆಟ್ಟಿ, ಪರಕಾಯ ಪ್ರವೇಶ ಮಾಡಿ ತಮ್ಮ ನಟನೆಯ ಪ್ರವೃತ್ತಿಯನ್ನು ಜನರಿಗೆ ಪರಿಚಯ ಮಾಡಿಕೊಟ್ಟರು.

ರೀನಾ ದೇಸಾಯಿಯಾಗಿ ಯಶ್ ಅವರೊಂದಿಗೆ ಮಿಂಚಿದ ಶ್ರೀನಿಧಿ ಶೆಟ್ಟಿ ಅವರಿಗೆ ಅನಂತನ ತಮಿಳಿನ ಪ್ರಸಿದ್ಧ ನಿರ್ದೇಶಕ ಹಾಗೂ ನಟನೊಂದಿಗೆ ಕೆಲಸ ಮಾಡುವ ಅವಕಾಶ ಸಿಗುತ್ತದೆ. ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಶ್ರೀನಿಧಿ ಶೆಟ್ಟಿ ಅವರು ಕೋಬ್ರಾ ಚಿತ್ರದಲ್ಲಿ ಚಿಯಾನ್ ವಿಕ್ರಂ ಅವರೊಂದಿಗೆ ತೆರೆ ಹಂಚಿಕೊಂಡು ಮಿಂಚಿದರು. ಸದ್ಯ ತೆಲುಗಿನ ಚಿತ್ರ ಕೆಲಸಗಳಲ್ಲಿ ಬಿಜಿಯಾಗಿರುವಂತಹ ಶ್ರೀನಿಧಿ ಶೆಟ್ಟಿ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು,

ತಮ್ಮ ಹಾಗೂ ತಮ್ಮ ಕುಟುಂಬಸ್ಥರೊಂದಿಗಿನ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಾ ಗಮನ ಸೆಳೆಯುತ್ತಿರುತ್ತಾರೆ. ಜಗತ್ತಿನಲ್ಲಿ ಅತ್ಯಂತ ಮಧುರ ಬಾಂಧವ್ಯವೆಂದರೆ ಅದು ತಂದೆ ಮತ್ತು ಮಗಳ ಸಂಬಂಧ. ಹೆಣ್ಣು ಮಕ್ಕಳು ಅಪ್ಪನ ಮೇಲೆ ಆಗಸದಷ್ಟು ಆಸೆಯನ್ನು ಹೊಂದಿರುತ್ತಾರೆ. ಅಪ್ಪಂದಿರಿಗೂ ಮಗಳೇ ಪುಟ್ಟ ಪ್ರಪಂಚವಾಗಿರುತ್ತಾಳೆ, ಹೀಗೆ ತಮ್ಮ ತಂದೆ ರಮೇಶ್ ಶೆಟ್ಟಿ ಅವರನ್ನು ಅತಿ ಹೆಚ್ಚಾಗಿ ಪ್ರೀತಿಸುವ ಶ್ರೀನಿಧಿ ಶೆಟ್ಟಿ, ತಮ್ಮ instagram ಮತ್ತು facebook ಗಳ ಫೀಡ್ನಲ್ಲಿ ತಂದೆಯೊಂದಿಗೆ ಸಾಕಷ್ಟು ಸುಂದರ ಚಿತ್ರಣಗಳನ್ನು ಹಂಚಿಕೊಂಡಿದ್ದಾರೆ ಸದ್ಯ ಈ ಫೋಟೋಗಳೆಲ್ಲವೂ ಬಾರಿ ವೈರಲಾಗುತ್ತಾ ನೆಟ್ಟಿಗರನ್ನು ಆಕರ್ಷಿಸುತ್ತೇವೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!