Appu: ಅಪ್ಪುಗಾಗಿ ಕೊಟ್ಟ ಮಾತನ್ನು ಉಳಿಸಿಕೊಂಡ ರಾಕಿಂಗ್ ಸ್ಟಾರ್ ಯಶ್ ಮಾಡಿದ್ದೇನು? ಸಲಾಂ ರಾಕಿಭಾಯ್!

Rocking Star Yash ರಾಕಿಂಗ್ ಸ್ಟಾರ್ ಯಶ್(Yash) ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಇಬ್ಬರು ಕೂಡ ಮೊದಲಿನಿಂದಲೂ ಸಹೋದರತ್ವದ ಬಾಂಧವ್ಯವನ್ನು ಹೊಂದಿದ್ದರು. ಇಬ್ಬರು ಕೂಡ ಪರಸ್ಪರ ಹಲವಾರು ವೇದಿಕೆಗಳ ಮೇಲೆ ಇದನ್ನು ಹಂಚಿಕೊಂಡಿದ್ದರು ಕೂಡ. ಅಪ್ಪು ಅವರ ಅಗಲಿಕೆ ಅವರ ಕುಟುಂಬದಷ್ಟೇ ಯಶ್ ಅವರಿಗೂ ಕೂಡ ದುಃಖವನ್ನು ತಂದಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ರವರ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಅಂದರೆ ಗಂಧದಗುಡಿಯ ಪ್ರೀ ರಿಲೀಸ್ ಕಾರ್ಯಕ್ರಮ ಸಂದರ್ಭದಲ್ಲಿ ಕೂಡ ಇಡೀ ಭಾರತೀಯ ಚಿತ್ರರಂಗದ ಪ್ರಮುಖ ಗಣ್ಯಾತಿ ಗಣ್ಯರು ಯುದ್ಧ ಸಂದರ್ಭದಲ್ಲಿ ಪ್ರಕಾಶ್ ರಾಜ್(Prakash Raj) ರವರು ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲಿ ಕೂಡ ಅಪ್ಪು ಅವರ ಹೆಸರಿನಲ್ಲಿ ಆಂಬುಲೆನ್ಸ್ ಇರಬೇಕು ಅದು ನನ್ನ ಗುರಿ ಇದಕ್ಕಾಗಿ ಶ್ರಮಿಸುತ್ತಿದ್ದೇನೆ ಎಂಬುದಾಗಿ ಹೇಳಿದ್ದರು.

ಈ ಸಂದರ್ಭದಲ್ಲಿ ಹಲವಾರು ನಟರ ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಕೂಡ ತಾನು ಕೂಡ ಈ ಒಳ್ಳೆಯ ಕೆಲಸಕ್ಕೆ ಸಹಭಾಗಿಯಾಗಲಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದರು ಅದೇ ರೀತಿ ಈಗ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ವಿಚಾರವಾಗಿಯೇ ಎಲ್ಲರೂ ಕೂಡ ರಾಕಿಂಗ್ ಸ್ಟಾರ್ ಯಶ್(Yash) ರವರಿಗೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

ಹೌದು ಈಗಾಗಲೇ ಪ್ರಕಾಶ್ ರಾಜ್ ಅವರ ಈ ಕೆಲಸಕ್ಕೆ ರಾಕಿಂಗ್ ಸ್ಟಾರ್ ಯಶ್ ರವರು ಅಪ್ಪು(Appu) ಅವರ ಹೆಸರಿನಲ್ಲಿ ಐದು ಆಂಬುಲೆನ್ಸ್ ಗಳನ್ನು ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಪ್ರತಿಯೊಬ್ಬರೂ ಕೂಡ ಈ ವಿಚಾರದ ಕುರಿತಂತೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೀರಿ ಎಂಬುದಾಗಿ ಗುಣಗಾನ ಮಾಡುತ್ತಿದ್ದಾರೆ. ಈ ಮೂಲಕ ಅಪ್ಪು ಅವರ ಕಾಲ ನಂತರವೂ ಕೂಡ ಅವರ ಕುರಿತಂತೆ ಯಶ್ ಅವರು ಹೊಂದಿರುವ ಕಾಳಜಿ ಹಾಗೂ ಗೌರವವನ್ನು ಈ ಕೆಲಸ ಸಾಬೀತುಪಡಿಸುತ್ತದೆ.

Leave a Comment

error: Content is protected !!