Vinay Gowda: ಬಿಗ್ ಬಾಸ್ ವಿನಯ್ ಗೌಡ ಅವರಿಂದ ಉಂಟಾದ ಕಹಿ ಅನುಭವ ಕುರಿತು. ಬೇಸರ ಹೊರಹಾಕಿದ ನಟಿ

Vinay Gowda: ನೂರು ದಿನಗಳ ಬಿಗ್ ಬಾಸ್ ಕನ್ನಡ ಸೀಸನ್ ಹತ್ತಿರ ಆಟವು ಅದಾಗಲೇ ಸರಾಸರಿ 70 ದಿನಗಳನ್ನು ಪೂರ್ಣಗೊಳಿಸಿದ್ದು, ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ವೀಕ್ಷಕರಿಗೆ ಅದ್ಭುತ ಎಂಟರ್ಟೈನ್ಮೆಂಟ್ ನೀಡುತ್ತಾ ಬಂದಿದೆ. ಹೌದು ಗೆಳೆಯರೇ ಟಿ ಆರ್ ಪಿ(TRP) ಯ ಸಲುವಾಗಿ ಸ್ಪರ್ಧಿಗಳಿಗೆ ಚಿತ್ರ ವಿಚಿತ್ರವಾದಂತ ಟಾಸ್ಕ್ ಗಳನ್ನು ನೀಡಿ ಅವರ ಭಾವನೆಗಳನ್ನು ಹೊರ ತರುತ್ತಿರುವಂತಹ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅತಿ ಬಲಿಷ್ಠ ಸ್ಪರ್ಧಿಗಳಲ್ಲಿ ವಿನಯ್ ಗೌಡ ಕೂಡ ಒಬ್ಬರು.

ಹೌದು ಗೆಳೆಯರೇ ತಮ್ಮ ಬಲದ ಪರಾಕ್ರಮದಿಂದ ಎಲ್ಲಾ ಟಾಸ್ಕ್ ನಲ್ಲಿಯೂ ಅದ್ಭುತ ಪರಫಾರ್ಮೆನ್ಸ್ ನೀಡುವಂತಹ ವಿನಯ್ ಗೌಡ(Vinay Gowda) ಅವರು ತಮ್ಮ ಎಲುಬಿಲ್ಲದ ನಾಲಿಗೆಯಿಂದ ಹೊರಬರುವ ಕೆಲ ಮಾತಿನ ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿದ್ದಾರೆ. ಪ್ರತಿ ವಾರದ ಪಂಚಾಯಿತಿಯಲ್ಲಿಯೂ ಕಿಚ್ಚ ಸುದೀಪ್ ಅವರಿಂದ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಳ್ಳುತ್ತಲೇ ಇರುತ್ತಾರೆ.

ಇಷ್ಟೆಲ್ಲ ಆದರೂ ಕೂಡ ಸದಾ ತಾನೇ ಗ್ರೇಟ್ ತಾನು ಮಾಡಿದ್ದೆಲ್ಲವು ಸರಿ ಮನೆಯಲ್ಲಿರುವ ಇತರ ಸ್ಪರ್ಧಿಗಳಿಗಿಂತ ತಾನೆ ಹೆಚ್ಚು ಪರಾಕ್ರಮಿ ಹಾಗೂ ಬಲಶಾಲಿ ಎಂದು ಮೆರೆಯುವ ವಿನಯ್ ಗೌಡ ಅವರ ಕುರಿತಾದಂತಹ ಮತ್ತೊಂದು ವೈಯಕ್ತಿಕ ವಿಚಾರ ಸದ್ಯ ತೀವ್ರವಾದ ಚರ್ಚೆಗೆ ಗುರಿಯಾಗಿದೆ. ಹೌದು ಗೆಳೆಯರೇ ನಟಿ ಇಳಾ ವಿಟ್ಲಾ, ವಿನಯ್ ಗೌಡ(Vinay Gowda) ಅವರ ನಡುವೆ ಉಂಟಾದಂತಹ ಕಹಿ ಅನುಭವ ಒಂದನ್ನು ಬಹಿರಂಗಗೊಳಿಸಿದ್ದಾರೆ.

ಹೌದು ಗೆಳೆಯರೇ 2016ರಲ್ಲಿ ವಿನಯ್ ಗೌಡ(Vinay Gowda) ಮತ್ತು ಪತ್ನಿ ಅಕ್ಷತಾ ಸೂಪರ್ ಜೋಡಿ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಅದೇ ಕಾರ್ಯಕ್ರಮದಲ್ಲಿ ಮತ್ತೊರ್ವ ಸ್ಪರ್ಧೆಯಾಗಿದ್ದ ಇಳಾ ವಿಟ್ಲಾ ದಂಪತಿಗಳ ಜೊತೆಗೆ ವಿನಯ್ ಕಿರಿಕ್ ಮಾಡಿಕೊಂಡಿದರಂತೆ. “ನಾನು ಒಬ್ಬಳು ಕಲಾವಿದೆ ರಿಯಾಲಿಟಿ ಶೋಗಳನ್ನ ಮಾಡಿದ್ದಕ್ಕೆ ಹಾಗು ಬಿಗ್ ಬಾಸ್ ನೋಡುತ್ತಿರುವುದರಿಂದ ವಿನಯ್ ಅವರನ್ನು ಹತ್ತಿರದಿಂದ ನೋಡಿ ಅನುಭವಿಸುತ್ತಿರುವುದಕ್ಕೆ ಈ ಪೋಸ್ಟ್ ಮಾಡಿದ್ದೇನೆ.

ವಿನಯ್ ಸದಾ ನನಗೆ ಏನಾದರೂ ಆದರೆ ನಾನು ಸುಮ್ಮನೆ ಬಿಡುವುದಿಲ್ಲ ಅಂತಾರಲ್ಲ ಆದರೆ ಅವರಿಂದ ಬೇರೆಯವರಿಗೆ ತೊಂದರೆ ಆದರೆ ಏನು ಮಾಡಬೇಕಿತ್ತು ಆಟ ಅಂದ್ಮೇಲೆ ಹೆಚ್ಚು ಕಡಿಮೆ ಇದ್ದೇ ಇರುತ್ತದೆ. ಸ್ವಲ್ಪ ಗಾಯಗಳು ಆಗೋದು ಸಾಮಾನ್ಯ ಬೇರೆಯವರು ಯಕ್ಕೊಟ್ಟೋದ್ರು ಪರವಾಗಿಲ್ಲ ನಾನು ಗೆಲ್ಲಬೇಕು ಅನ್ನೋ ಮನಸ್ಥಿತಿ ಇರೋರು ಯಾವತ್ತೂ ಉದ್ದಾರ ಆಗಲ್ಲ.

ಬಿಗ್ ಬಾಸ್ ಎಂದರೆ ನನಗೆ ಮೊದಲಿನಿಂದಲೂ ಇಷ್ಟ. ಹೀಗಾಗಿ ನಾನು ಪ್ರತಿದಿನ ಪ್ರೋಗ್ರಾಮನ್ನು ನೋಡುತ್ತೇನೆ ಇದೇ ವಿನಯ್ ಸೂಪರ್ ಜೋಡಿ(Super Jodi) ಟೈಮಿನಲ್ಲಿ ನನ್ನ ಕಣ್ಣೆದುರಿಗೆ ಪ್ಲಾನ್ ಮಾಡಿಕೊಂಡು ಬಂದು ನನಗೆ ಏನಾದರೂ ಆದರೆ ನಾವು ಯಾರನ್ನು ಸುಮ್ಮನೆ ಬಿಡಲ್ಲ ಅಂತ ನಮ್ಮ ಹತ್ತಿರ ಹೇಳುತ್ತಾ ಹೆದರಿಸುತ್ತಿದ್ದರು. ಅವತ್ತು ನಮ್ಮೆಜಮಾನ್ರು ಜೊತೆ ವಿನಯ್ ಆಟ ಆಡುವಾಗ ದವಡೆ ಹಲ್ಲು ಮುರಿದು ಅಷ್ಟು ಸಾಲದೆಂಬಂತೆ ರಿಬ್ಸ್ ಫ್ರಾಕ್ಚರ್ ಮಾಡಿದ್ದರು.

ಆದರೂ ಅವರಿಗೆ ನಾವು ಒಂದು ಮಾತನ್ನು ಹೇಳಲಿಲ್ಲ ಶೋ ಮುಗಿದ ಮೇಲೆ ನೋವು ಜಾಸ್ತಿ ಆಯ್ತು ಆರು ತಿಂಗಳು ಸರಿಯಾಗಿ ಕೆಲಸ ಮಾಡೋದಕ್ಕೆ ಆಗಿದೆ ಆರ್ಯನ್ (Aryan) ಒದ್ದಾಡಿದರು. ಡಾಕ್ಟರ್ ಏನು ಮಾಡಬಾರದು ರೆಸ್ಟ್ ಮಾಡಿ ಅಂತ ಸೂಚಿಸಿದರು ನಾನಾ ಅವತ್ತು ಎಷ್ಟು ಕಣ್ಣೀರು ಹಾಕಿದ್ದೆ ಅನ್ನೋದು ಭಗವಂತನಿಗೆ ಮಾತ್ರ ಗೊತ್ತು. ಇದೇ ಪರಿಸ್ಥಿತಿ ಅವರಿಗೆ ಆಗಿದ್ದರೆ ಏನು ಮಾಡುತ್ತಿದ್ದರು.

ನಾವು ಕಲಾವಿದರು ಆಗಿ ಹೋಗಿರುವ ಘಟನೆಗಳಿಗೆ ಪ್ರತಿಕ್ರಿಯೆ ಕೊಡುವುದು, ದುರಂಕಾರದ ಮಾತುಗಳನ್ನು ಆಡೋದು, ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಲೈಫ್ ಹಾಳು ಮಾಡಿಕೊಳ್ಳುವುದು ಬೇಡ ಎಲ್ಲರೂ ಚೆನ್ನಾಗಿರಲಿ ಅಂತ ಸುಮ್ಮನೆ ಇದ್ದೆ. ಯಾಕೆಂದರೆ ನಮ್ಮಿಂದಾಗಿ ಎಲ್ಲಾ ಫ್ಯಾಮಿಲಿಯವರು ಅನುಭವಿಸುವುದು ಒಳ್ಳೆಯ ಲಕ್ಷಣ ಅಲ್ಲ, ಅವರ ಫ್ಯಾಮಿಲಿ ಮಾತ್ರ ಚೆನ್ನಾಗಿರಬೇಕು ಉಳಿದವರು ಹಾಳಾಗಿ ಹೋದರು ಅವರಿಗೆ ತೊಂದರೆ ಇಲ್ಲ ಅನ್ಸುತ್ತೆ” ಎಂದು ಇಳಾ ವಿಟ್ಲಾ(Ila Vitla) ವಿನಯ್ ಗೌಡ(Vinay Gowda) ಅವರಿಂದ ತಮ್ಮ ಕುಟುಂಬಕ್ಕೆ ಆದಂತಹ ತೊಂದರೆಯನ್ನು ಬರೆದು ಬೇಸರ ವ್ಯಕ್ತಪಡಿಸಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!