KL Rahul ಕೆ ಎಲ್ ರಾಹುಲ್ ಇತ್ತೀಚಿನ ದಿನಗಳಲ್ಲಿ ಸತತವಾಗಿ ಭಾರತೀಯ ಕ್ರಿಕೆಟ್ ತಂಡದ(Indian Cricket Team) ಪರವಾಗಿ ಅದರಲ್ಲೂ ವಿಶೇಷವಾಗಿ ಇತ್ತೀಚಿಗೆ ನಡೆಯುತ್ತಿರುವ ಟೆಸ್ಟ್ ನಲ್ಲಿ ತಂಡದಲ್ಲಿ ಸ್ಥಾನವನ್ನು ನೀಡಿದ್ದರೂ ಕೂಡ ಅತ್ಯಂತ ಕಳೆದ ಪ್ರದರ್ಶನವನ್ನು ನೀಡುವ ಮೂಲಕ ತಂಡದಿಂದ ಹೊರಗೆ ಬಿದ್ದಿದ್ದಾರೆ. ಕೇವಲ ತಂಡದಿಂದ ಮಾತ್ರವಲ್ಲದೆ ಉಪನಾಯಕನ ಸ್ಥಾನದಿಂದ ಕೂಡ ಅವರನ್ನು ಕೆಳಗಿಳಿಸಲಾಗಿದೆ.
ಇತ್ತೀಚಿಗಷ್ಟೇ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಹಾಗೂ ಕರಾವಳಿ ಮೂಲದ ಕನ್ನಡಿಗ ಆಗಿರುವ ಸುನಿಲ್ ಶೆಟ್ಟಿ(Sunil Shetty) ಅವರ ಮಗಳಾಗಿರುವ ಬಾಲಿವುಡ್ ಚಿತ್ರರಂಗದ ಯುವ ಉದಯೋನ್ಮುಖ ನಟಿ ಅಥಿಯಾ ಶೆಟ್ಟಿ(Athiya Shetty) ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಬೆನ್ನಲ್ಲೇ ಸಾಲು ಸಾಲು ಕಳಪೆ ಪ್ರದರ್ಶನದಿಂದಾಗಿ ತಂಡದಿಂದ ಹೊರ ಹೋಗುವ ಭೀ’ತಿಯನ್ನು ಕೆ ಎಲ್ ರಾಹುಲ್ ಅವರು ಎದುರಿಸುತ್ತಿದ್ದಾರೆ.
ಇದರ ಬೆನ್ನಲ್ಲೇ ಈಗ ಹೆಂಡತಿಯ ಜೊತೆಗೆ ಕೆ ಎಲ್ ರಾಹುಲ್(KL rahul) ರವರು ದೇವರ ಮೊರೆ ಹೋಗಿದ್ದು ಪ್ರಸಿದ್ಧ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಈ ಕಷ್ಟದ ಸಂದರ್ಭದಲ್ಲಿ ಕೆ ಎಲ್ ರಾಹುಲ್ ರವರು ಪರಮಾತ್ಮ ನೀನೇ ಗತಿ ಎಂಬುದಾಗಿ ದೇವಸ್ಥಾನಕ್ಕೆ ಪತ್ನಿಯ ಜೊತೆಗೆ ಹೋಗಿ ಪೂಜೆ ಸಲ್ಲಿಸಿ ಬಂದಿದ್ದಾರೆ ಎನ್ನುವ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿದೆ.
ಕೆ ಎಲ್ ರಾಹುಲ್ ರವರು ತಮ್ಮ ಪತ್ನಿಯ ಜೊತೆಗೆ ಉಜ್ಜಯಿನಿಯ ಮಹಾಕಾಳೇಶ್ವರ(Ujjaini Mahakaleshwara) ದೇವಸ್ಥಾನಕ್ಕೆ ಹೋಗಿ ಮುಂಜಾನೆಯ ನಾಲ್ಕು ಗಂಟೆಯ ಭಸ್ಮ ಆರತಿಯಲ್ಲಿ ಇಬ್ಬರೂ ಪಾಲ್ಗೊಂಡು ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಿ ಬಂದಿದ್ದಾರೆ. ಇನ್ನಾದರೂ ಕ್ರಿಕೆಟ್ ಜೀವನದಲ್ಲಿ ಕೆಎಲ್ ರಾಹುಲ್(KL Rahul) ಅವರಿಗೆ ಉನ್ನತಿ ಸಿಗಲಿ ಎಂಬುದಾಗಿ ಹಾರೈಸೋಣ.